Saturday 31 October 2015

ಕೆಟ್ಟ ಮೇಲೂ ಬುದ್ದಿ ಬಾರದವರು....



ಸಿಟ್ಟು, ಹತಾಶೆ, ಅಸಹನೆ ಎಲ್ಲಾ ಒಮ್ಮೆಗೇ ಉಂಟಾಗುತ್ತಿದೆ. ಕಾರಣ ನಿನ್ನೆ ಪೇಶಾವರದಲ್ಲಿ ನಡೆದ ಘಟನೆಯಲ್ಲಿ ಬಲಿಯಾದ ಅಮಾಯಕ ಮಕ್ಕಳ ಭೀಕರ ಚಿತ್ರಣ. ಬಹುಃಶ ದೇಶಕ್ಕೆ ದೇಶವೇ ಜಾತ್ಯಾತೀತವಾಗಿ ಈ ಅಮಾನವೀಯ ಘಟನೆಯನ್ನ ಖಂಡಿಸುತ್ತಿರಬೇಕಾದರೆ ನಮ್ಮಲ್ಲೇ ಕೆಲವೊಂದು ಜನರ ಹೇಳಿಕೆ ದಿಗ್ಬ್ರಾಂತಿಯನ್ನ ಉಂಟು ಮಾಡುತ್ತಿದೆ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋದು ನಮ್ಮಲ್ಲಿ ಪ್ರಚಲಿತದಲ್ಲಿರೋ ಹಳೆಯ ಗಾದೆ ಮಾತು, ಆದರೆ ಕೆಲವೊಂದು ಜನರನ್ನ ಕಂಡಾಗ ಇವರ್ಯಾವತ್ತೂ ಸರಿಯಾಗೋದೇ ಇಲ್ವಾ ಅನ್ನಿಸುತ್ತೆ.
ಅತ್ತ ಈ ಕ್ರೂರ ಕೃತ್ಯವನ್ನೆಸಗಿದವರು ತಮ್ಮ ಅಮಾನವೀಯ ನಡವಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಮಿಲಿಟರಿಯವರು ತಮ್ಮ ಕುಟುಂಬವನ್ನ ಹತ್ಯೆಗೈದಿದ್ದಾರೆ ಅವರ ಕುಟುಂಬವನ್ನೂ ನಾವು ಹತ್ಯೆಗೈದಿದ್ದೇವೆ ಅಂದಿದ್ದಾರಂತೆ. ಇದು ಶಂಡರ ಲಕ್ಷಣ ಅಲ್ವಾ. ಹೋರಾಡಲಾಗದ ಅಮಾಯಕರೆದುರು ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾಗಿದ್ದಾರಲ್ವಾ... ಇದೇ ಪುರುಷತ್ವವನ್ನ ಹಿಡಿದುಕೊಂಡು ಇವರು ಸ್ವರ್ಗದಲ್ಲಿರುವ ಎಪ್ಪತ್ತೆರಡು ಕನ್ಯೆಯರನ್ನ ಬಯಸೋದಾ...? ಹಾಗೊಂದು ಅಷ್ಟು ಜನ ಕನ್ಯೆಯರು ಒಂದು ವೇಳೆ ಅಲ್ಲಿದ್ದರೂ ಇವರನ್ನ ಕಂಡಾಗ ಅಸಹ್ಯೆ ಪಟ್ಟುಕೊಳ್ಳೋದಿಲ್ವಾ... ಇರಲಿ ಇನ್ನೊಂದು ಮಾತಿನ ಪ್ರಕಾರ ಆಧುನಿಕ ಶಿಕ್ಷಣ ಪದ್ಧತಿ ಬೇಡ ಅದಕ್ಕಾಗಿ ಈ ರೀತಿಯ ಕೃತ್ಯ ಅಂದಿದ್ದಾರಂತೆ. ಹಾಗಿದ್ದರೆ ಇವರಿಗ್ಯಾಕೆ ಆಧುನಿಕ ರೈಫಲ್ಲುಗಳು, ಬಾಂಬುಗಳು... ಅದನ್ನೇನು ಅವರು ಮದರಸಾ ಶಿಕ್ಷಣದಿಂದ ತಯಾರಿಸಿದ್ದೇ...? ಯಾಕೆ ಹಳೆಯ ಕತ್ತಿ ಬಿಲ್ಲು ಬಾಣಗಳನ್ನ ಬಳಸೋದಿಲ್ಲ... ತಮಗಾದರೆ ಬೇಕು ಇತರರಿಗೆ ಬೇಡ ಇದ್ಯಾವ ನ್ಯಾಯ...? ತಮ್ಮ ಮತಾಂಧತೆಗಾಗಿ ಮಕ್ಕಳನ್ನೂ ಬಿಡದ ನೀಚರಿಗೆ ಎಷ್ಟು ಬುದ್ಧಿ ಹೇಳಿದರೇನು...?
ಆದರೆ ಅಲ್ಲಿ ಬರಿಯ ಒಂದಷ್ಟು ತಾಲಿಬಾನಿಗಳು ಇನ್ನಿತಿರರ ಬೆಂಬಲ ಪಡೆಯದೇ ಇಷ್ಟು ಶಕ್ತರಾದರೇ...? ಖಂಡಿತಾ ಸಾಧ್ಯವಿಲ್ಲ. ಅಷ್ಟು ದುಬಾರಿ ಶಸ್ತ್ರಾಸ್ತ್ರಗಳಿಗೆಲ್ಲಾ ಯಾರಾದರೂ ಧನ ಸಹಾಯ ಮಾಡಿರಲೇ ಬೇಕಲ್ಲಾ... ಯಾರಾದರೂ ಸರ್ಕಾರದ ಕಣ್ಣುತಪ್ಪಿಸಿ ಅವರ ಕೈಗೆ ಕೊಟ್ಟಿರಲೇಬೇಕಲ್ವಾ.... ಈ ರೀತಿ ಸಹಾಯ ಮಾಡುವವರೂ ಹಾಗಿದ್ದರೆ ಭಯೋತ್ಪಾದಕರೇ ತಾನೇ... ಇಂಥವರಿಗಾದರೂ ಯಾವಾಗ ಬುದ್ಧಿ ಬರೋದು... ????
ಬಿಟ್ಟು ಬಿಡೋಣ... ನೆರೆಯ ಕೆಲವೊಂದು ದೇಶಗಳಲ್ಲಿ ಮತಾಂಧತೆ ಅದ್ಯಾವ ರೀತಿಯಲ್ಲಿ ಬೀಡು ಬಿಟ್ಟಿದೆ ಅಂದರೆ ಸುಮ್ಮನಿರುವ ಅವರ ಸಮುದಾಯದ್ದೇ ದೊಡ್ಡ ಭಾಗ ಜಾಗೃತರಾಗದೇ ಇದು ಸರಿಯಾಗೋಲ್ಲ ಅನ್ನೋಣ. ಆದರೆ ನಮ್ಮಲ್ಲೇ ಇದ್ದಾರಲ್ಲ. ಕೆಲವೊಂದು ಬುದ್ಧಿ ಜೀವಿಗಳು... ಇವರಿಗೇನು ಮಾಡೋಣ ಹೇಳಿ. ನಿನ್ನೆ ಒಬ್ಬಾತ ಪತ್ರಿಕೆಯೊಂದರ ಸಂಪಾದಕನಂತಹ ಮುಖ್ಯ ಸ್ಥಾನದಲ್ಲಿದ್ದವನ ಹೇಳಿಕೆ ನೋಡಿದಾಗ ಇವರೂ ಆ ಭಯೋತ್ಪಾದಕರಿಗಿಂತ ಕಮ್ಮಿಯಿಲ್ಲ ಅಂತನಿಸಿತು.
ಇಂಥಾ ಸಂಧರ್ಭದಲ್ಲಿ ಇವರು ಬಾಯ್ತೆರೆದರೆ ಸಾಕು ವಿಶ್ವ ರಾಜಕೀಯವನ್ನೇ ಭೋಧಿಸಿಬಿಡ್ತಾರೆ. ತಾಲೀಬಾನ್ ಇವರ ಪಾಲಿಗೆ " ಅನೈತಿಕ ಜಾಗತಿಕ ರಾಜಕಾರಣದ ಸೃಷ್ಟಿ ". ಒಪ್ಪೋಣ ಇದು ಅಮೇರಿಕಾದ ಸೃಷ್ಟಿ ಅಂತ. ಆದರೆ ಈ ಸಂಘಟನೆ ನೀಡಿದ ಹೇಳಿಕೆ ನೋಡಿದರೆ ಇದು ಅವರದೇ ಸ್ವಂತ ಕೃತ್ಯ ಅಲ್ವಾ... ಪಾಶ್ಚಾತ್ಯ ಶಿಕ್ಷಣವನ್ನ ವಿರೋದಿಸೋಕೆ ಅಮೇರಿಕಾ ಯಾಕೆ ತಾನೇ ಹೇಳಿಕೊಡುತ್ತೆ...? ಅದನ್ನ ವಿರೋದಿಸಬೇಕು ಅನ್ನೋದು ಈ ಕ್ರೂರಿಗಳದೇ ಬುದ್ಧಿ ಅಲ್ವಾ... ರಷ್ಯಾದ ಜನರನ್ನ ಅಫಘಾನಿಸ್ತಾನದಿಂದ ಓಡಿಸೋಕೆ ಅಮೆರಿಕಾ ಮತ್ತು ಪಾಕಿಸ್ಥಾನ ಮಾಡಿದ ಪಡೆಯಂತೆ ಇದು. ಆದರೆ ಈಗ ಯಾಕೆ ಇದು ಕಾರ್ಯ ನಿರತವಾಗಿದೆ...? ಹಿಂದೆಂದೋ ರಾಜಕೀಯಕ್ಕೆ ಈ ಬಣದ ಸ್ಥಾಪನೆಯಾಗಿದ್ದರೂ ಈಗ ಇವರಿಗೆ ಶಸ್ತ್ರಾಸ್ತ್ರಗಳನ್ನ ಅಮೆರಿಕಾ ಉಚಿತವಾಗಿ ಕೊಡುತ್ತದೆಯೇ ಯಾರೋ ಹಣ ಒದಗಿಸಿರಲೇಬೇಕಲ್ಲಾ... ಅವರು ಯಾವ ರಾಜಕೀಯದ ಭಾಗ... ಇದನ್ನು ಅವರು ವಿಶ್ಲೇಷಿಸೋದೇ ಇಲ್ಲ ಸರಿ ಕೊನೆಗೆ ಇವರೆಲ್ಲರನ್ನೂ ಅಮೆರಿಕಾ ಮತ್ತು ಪಾಕಿಸ್ಥಾನ ಒಟ್ಟಾಗಿ ನಿರ್ನಾಮ ಮಾಡಲಿ ಅಂತ ಒಂದು ಮಾತನ್ನೂ ಆಡುವುದಿಲ್ಲ.
ಇದು ಧರ್ಮದ ಸೃಷ್ಟಿಯಲ್ಲ ಅನ್ನುತ್ತಾರೆ. ಸರಿ ಒಪ್ಪೋಣ ಹಾಗಿದ್ದರೆ ಈ ನೀಚರು ಈ ಆಧುನಿಕ ಶಿಕ್ಷಣ ಬೇಡ ಮದರಸಾ ಶಿಕ್ಷಣವನ್ನಷ್ಟೇ ಕಲಿಯಬೇಕು ಅನ್ನುವ ಮಾತನ್ನು ಹೇಳಿದರಲ್ಲ... ಇದು ಯಾವ ರಾಜಕೀಯದ ಆಶಯ...? ಇವರ ದಾಳಿಗೆ ಯಾವುದೋ ಧಾರ್ಮಿಕ ವಿಚಾರವೇ ಕಾರಣವಾಯಿತು ಅಂತಾಗಲಿಲ್ಲವೇ...? ಇದು ನಿಜವಾದ ಕಾರಣವಲ್ಲ ಬರಿಯ ಮಿಲಿಟರಿಯ ಮೇಲಿನ ಸೇಡು ಕಾರಣ ಅಂತಾನೇ ಇಟ್ಟುಕೊಳ್ಳೋಣ... ಹಾಗಾದರೆ ಪಾಕಿಸ್ಥಾನದ ಮಕ್ಕಳನ್ನ ಕೊಲ್ಲುವುದರಿಂದ ಅಮೆರಿಕಾಗೆ ಏನು ನಷ್ಟವಾಯಿತು...? ಅಮೆರಿಕಾದ ರಾಜಕೀಯದಾಟಕ್ಕೆ ತಮ್ಮ ಸಮುದಾಯದ ಮಕ್ಕಳನ್ನೇ ಬಲಿತೆಗೆದುಕೊಳ್ಳುವಷ್ಟು ಮೂರ್ಖರಾ ಇವರು...? ರಾಜಕೀಯ ಸೃಷ್ಟಿಯಾದರೆ ಆ ಮಕ್ಕಳನ್ನ ಕೊಲ್ಲುವಾಗ " ಅಲ್ಲಾಹು ಅಕ್ಬರ್ " ಅಂತ ಯಾಕೆ ಹೇಳಬೇಕಿತ್ತು...? ಅಮೆರಿಕಾ ಜಿಂದಾಬಾದ್ ಅಂತಾನೋ.... ಪಾಕಿಸ್ಥಾನ್ ಜಿಂದಾಬಾದ್ ಅಂತಾನೋ... ಅಥವಾ ತಾಲಿಬಾನ್ ಜಿಂದಾಬಾದ್ ಅಂತಾನೋ ಕೂಗಿದ್ದರೆ ರಾಜಕೀಯದ ವಾಸನೆ ಬರುತ್ತಿತ್ತು ಆದರೆ ಇಲ್ಲಿನ ಘೋಷಣೆಯನ್ನ ಕೇಳಿದಾಗಲೂ ಈ ಮತಾಂಧರ ಮತಾಂಧತೆಯನ್ನ ಗುರಿತಿಸದೆ ಹೋದರಲ್ಲಾ...ಈ ಬುದ್ಧಿ ಜೀವಿಗಳು ಇವರ ಕುರಿತಾಗಿ ಏನು ಹೇಳೋಣ...?
ಈ ಅಮಾನವೀಯ ಘಟನೆಯ ಖಂಡಿಸುವ ಹೇಳಿಕೆ ಅನ್ನೋ ಇವರ ಮಾತಿನಲ್ಲಿ ಎಲ್ಲೂ ಸಹ ಆಕ್ರೋಶ ಅಥವ ಅಮಾಯಕರ ಬಗೆಗೆ ಕರುಣೆ ಕಾಣಿಸಲೇ ಇಲ್ಲ ಕಂಡದ್ದೂ ಅವಕಾಶವಾದಿತನ. ಭಯೋತ್ಪಾದನೆ ಧರ್ಮದ ಸೃಷ್ಟಿಯಲ್ಲ ಅನ್ನುವವರು ಭಾರತದಲ್ಲಿ ಒಂದು ಧರ್ಮ ಇಂಥಾದ್ದನ್ನೇ ಸೃಷ್ಟಿಸುತ್ತಿದೆ ಅನ್ನುತ್ತಾರೆ. ಅದೇ ಥರ ಅಲ್ಲೂ ಧರ್ಮದ್ದೇ ಸೃಷ್ಟಿಯಾ ಅಂದರೆ ಅಲ್ಲ... ಅದು ರಾಜಕೀಯದ ಸೃಷ್ಟಿ ಇಲ್ಲಿ " ಕೇಸರಿ " ಅನ್ನುವ ಪದವನ್ನ ಉಲ್ಲೇಖ ಮಾಡಿ ಹಿಂದೂ ಧರ್ಮದಿಂದ ತಾಲೀಬಾನಿಗಳ ಸೃಷ್ಟಿಯಾಗುತ್ತಿದೆ ಅನ್ನುತ್ತಾರಲ್ಲಾ ಎಂಥಾ ದ್ವಂದ್ವ ವಾದ ಇವರದ್ದು... ಅಷ್ಟಾಗಿಯೂ ಇಲ್ಲಿ ಯಾವುದೇ ಇಂಥಾ ಹೇಯ ಕೃತ್ಯ ನಡೆದಿಲ್ಲ. ಆದರೂ ಇವರು ಬಹಳ ಚಾಕಚಕ್ಯತೆಯಿಂದ ಇಂಥಾ ಹಲವಾರು ಘಟನೆಗಳು ನಡೆದಿವೆ ಅನ್ನುತ್ತಾರೆ ಆದರೆ ಯಾವುದನ್ನೂ ಉದಾಹರಿಸೋದಿಲ್ಲ.
ಇಲ್ಲೂ ನಮ್ಮ ಪ್ರಧಾನಿಯನ್ನ ಟೀಕಿಸೋ ಅವಕಾಶವನ್ನ ಕಂಡುಕೊಳ್ಳುತ್ತಾರೆ. ಇವರಿಗೇ ಇಡೀ ಭಾರತದಲ್ಲಿ ಕಾಣಿಸೋದು "ಕೇಸರಿ ಉಗ್ರವಾದ" ಮಾತ್ರ ವಂತೆ. ಅದನ್ನ ಹತ್ತಿಕ್ಕಲು ಪ್ರಯತ್ನಿಸಿದರಷ್ಟೇ ಪ್ರಧಾನಿಯವರು ಪೇಶಾವರದ ಘಟನೆಯ ಬಗ್ಗೆ ಹೇಳಿದ ಮಾತುಗಳು, ಮಿಡಿದ ಕಂಬನಿ ಅರ್ಥಪೂರ್ಣವಾಗೋದಂತೆ.. ವಿಚಿತ್ರ ಅಂದರೆ ಅವರ ಮಾತಿನಲ್ಲೆಲ್ಲೂ ಸಂತಾಪದ ಪ್ರದರ್ಶನವೇ ಇಲ್ಲ. ಒಬ್ಬ ಸಂಪಾದಕನಾಗಿ ತಪ್ಪು ಎಲ್ಲಿ ಆಗುತ್ತಿದೆ...? ಇಂಥಾ ಘಟನೆಗೆ ಮೂಲ ಕಾರಣವೇನು ಅನ್ನುವುದರ ವಿಮರ್ಶೆ ಮಾಡೂವುದನ್ನ ಬಿಟ್ಟು ಭಾರತದ ಪ್ರಧಾನಿಗಳೆ ಬುದ್ಧಿ ಹೇಳೋಕೆ ಹೊರಡುತ್ತಾರಲ್ವಾ... ಇವರಿಗೆಲ್ಲಾ ಯಾವಾಗ ಬುದ್ಧಿ ಬರೋದು...? ಇನ್ನಾದರೂ ದೋಷಗಳನ್ನ ಗುರುತಿಸಬೇಕಲ್ವಾ... ಖಂಡಿತಾ ಭಯೋತ್ಪಾದಕರಿಗೆ ಧರ್ಮ ಇಲ್ಲ ಇವರ ಹೇಳಿಕೆಯನ್ನ ಒಪ್ಪಿಕೊಳ್ಳೋಣ ನಾನು ಅದನ್ನೇ ಹೇಳೋದು... ಇವರೊಳಗಿನ ರಾಕ್ಷಸರನ್ನಷ್ಟೇ ನೋಡಿ... ಅವರೊಳಗಿನ ಸ್ವಧರ್ಮೀಯನನ್ನ ನೋಡಬೇಡಿ ಅಂತ. ಆ ರಾಕ್ಷಸತ್ವಕ್ಕೆ ಕಾರಣವಾದ ಅಂಶಗಳನ್ನಷ್ಟೇ ಕಿತ್ತೆಸೆಯಿರಿ. ಇಲ್ಲವಾದಲ್ಲಿ ಇದು ಇಡಿಯ ಸಮುದಾಯವನ್ನ ಕಿತ್ತು ತಿನ್ನೋದು ಖಂಡಿತಾ. ಇದನ್ನ ಬಿಟ್ಟು ಅಮೆರಿಕಾ ರಾಜಕಾರಣ ಅಂತ ಬೊಬ್ಬಿಡುತ್ತಾ ಹೋದರೆ... ಈ ಪಾಪಿಗಳು ಸರ್ವನಾಶ ಮಾಡುತ್ತಾ ಹೋಗುತ್ತಾರೆ. ಜಿಹಾದಿ ಎಂದು ಹಾದಿ ತಪ್ಪಿದ್ದವರನ್ನು ಹಾದಿಗೆ ತರಬೇಕಾದ ಇಂಥವರೇ ಹಾದಿ ತಪ್ಪುತ್ತಿದ್ದಾರೆಂದರೆ ಏನು ಮಾಡೋಣ. ಕಡಿಯಲಿ ಬಿಡಿ ತಾವಿರುವ ಗೆಲ್ಲಿನ ಬುಡವನ್ನೇ ಎಂದು ಸುಮ್ಮನಾಗೋದೇ ಲೇಸು ಅಲ್ವೇ...
ಕೊನೆಯ ಸಾಲು : ಹಿಂದೂಗಳಾಗಿದ್ದು ಹಿಂದೂಗಳನ್ನೇ ಟೀಕಿಸೋ ಭಾರತದಲ್ಲಿನ ಬುದ್ಧಿಜೀವಿಗಳಂತಹಾ ಸಂತತಿ... ಪಾಕಿಸ್ಥಾನದಲ್ಲಿ ಕಾಣಿಸಿಕೊಳ್ಳಲಿ... ಇಲ್ಲಿ ಕಾಣದಾಗಲಿ ಆಗಲೇ ಎರಡೂ ದೇಶಕ್ಕೆ ಭವ್ಯ ಭವಿಷ್ಯ.

No comments:

Post a Comment