Saturday 31 October 2015

ಅಪರಾಧಕ್ಕೆ ಧರ್ಮವಿಲ್ಲ ಎನ್ನುತ್ತಲೇ ಧರ್ಮಪ್ರೇಮ ಮೆರೆದ ಲೇಖಕರೋರ್ವರ ಒಂದಷ್ಟು ಪ್ರಶ್ನೆಗೆ ನನ್ನ ಮರು ಪ್ರಶ್ನೆ...



ಯಾಕೂಬ್ ಕುರಿತಾಗಿ ಒಬ್ಬ ಲೇಖಕರೋರ್ವರ ಹಲವು ಪ್ರಶ್ನೆಗಳನ್ನು ನನ್ನ ಕಣ್ಣಿಗೆ ಬಿದ್ದಿತ್ತು .... ಓದಿದಾಗ ನನ್ನ ಮನಸ್ಸಿನಲ್ಲಿಯೂ ಒಂದಷ್ಟು ಪ್ರಶ್ನೆಗಳು.... ಹುಟ್ಟಿತು ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ...

1. ಮೇಮನ್‍ನ ಅರ್ಜಿಯೊಂದನ್ನು ಸುಪ್ರೀಮ್ ಕೋರ್ಟ್ ಇನ್ನೂ ಇತ್ಯರ್ಥಪಡಿಸುವುದಕ್ಕಿಂತ ಮೊದಲೇ, ಜುಲೈ 30ರಂದು ಆತನನ್ನು ಗಲ್ಲಿಗೇರಿಸುವುದಾಗಿ ಮಹಾರಾಷ್ಟ್ರದ ಬಿಜೆಪಿ ಸರಕಾರವು ಘೋಷಿಸಿತು. ಈ ತುರ್ತಿನ ಉದ್ದೇಶವೇನು?
ಒಂದೆರಡಲ್ಲ ಇಪ್ಪತ್ತೊಂದು ವರ್ಷಗಳೇ ಕಳೆದು ಹೋಗಿದೆ... ವಿಕೀಪೀಡಿಯಾದಲ್ಲಿ ನಾನು ಕಂಡಂತೆ ಜುಲೈ 2007ಕ್ಕೆ ಶಿಕ್ಷೆ ಪ್ರಕಟವಾಗಿತ್ತು. ಈಗ ಶಿಕ್ಷೆ ಕೊಡಲು ಹೋದರೆ ಅದು ತುರ್ತು ಆಗುತ್ತದೆಯೇ...? ಅಲ್ಲದೇ ನ್ಯಾಯಾಲಯವೊಂದು ಗಲ್ಲಿಗೆ ಹಾಕಿ ಎಂದು ತೀರ್ಪು ಕೊಟ್ಟ ಮೇಲೆ ತಾನೇ ಸರ್ಕಾರ ಗಲ್ಲಿನ ದಿನಾಂಕ ನಿಗದಿ ಪಡಿಸೋದು...... ಅದೂ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯರಾತ್ರಿಯವರೆಗೆ ಸುಪ್ರೀಮ್ ಕೋರ್ಟ್ ತೆರೆದಿದ್ದು ವಿಚಾರಣೆ ಮಾಡಿ ಶಿಕ್ಷೆಯನ್ನು ಸರಿ ಎಂದಿತು.... ಆ ತೀರ್ಪು ಕೇಳಿದ ಮೇಲೂ ಇವರಿಗೆ ಶಿಕ್ಷೆ ತುರ್ತಾಗಿ ಕೊಟ್ಟರು ಅಂತ ಅನಿಸೋದು ಯಾಕೆ...? ಇನ್ನೂ ಎಷ್ಟು ಕಾಯಬೇಕಿತ್ತು...? ಅದರಲ್ಲೂ ಇನ್ನೂ ಅವನಿಗೆ ಸಮಯ ಸಿಗಬೇಕಿತ್ತು ಅಂತ ಇವರಿಗೆ ಅನಿಸೋದು ಯಾಕೆ ...? ಸರಕಾರ ಅನ್ನೋ ಬದಲು ಬಿಜೆಪಿ ಸರಕಾರ ಅನ್ನೋದು ಯಾಕೆ..? ಕಾಂಗ್ರೆಸ್ ಸರಕಾರ ಇದ್ದಿದ್ದರೆ ಸುಮ್ಮನಿರುತ್ತಿದ್ದರೆ...? ಹಾಗಾದ್ರೆ ಇದು ಅಪರಾಧಿಯ ಮೇಲಿನ ಪ್ರೇಮವೇ...? ಆತನ ಮತದ ಮೇಲಿನ ಪ್ರೇಮವೇ..? ಅಥವಾ ಬಿಜೆಪಿ ಸರ್ಕಾರದ ಮೇಲಿನ ದ್ವೇಷವೇ...?

2.ಈ ಹಿಂದಿನ ಯಾವ ಪ್ರಕರಣದಲ್ಲಾದರೂ ಗಲ್ಲಿಗೇರಿಸಲು ಇಷ್ಟೊಂದು ಅವಸರವನ್ನು ತೋರಲಾಗಿತ್ತೇ?
ನನಗರ್ಥ ಅಗೋದಿಲ್ಲ ಹಿಂದಿನ ಪ್ರಕರಣದಲ್ಲಿ ಇಲ್ಲ ಅಂದ ಮಾತ್ರಕ್ಕೆ ಅಪರಾಧಿಯೊಬ್ಬನನ್ನ ಬಿಡಲು ಸಾಧ್ಯವೇ...? ಯಾವುದಕ್ಕಾದರೂ ಒಂದು ಮೊದಲು ಅಂತ ಇರಲೇಬೇಕಲ್ಲ... ಅದು ಇದೇ ಅಂದುಕೊಳ್ಳುವುದಿಲ್ಲವೇಕೆ...? ಗಲ್ಲಿಗೇರಿಸಲು ಅಪರಾಧ ಮಾಡಿದ್ದು ಸಾಬೀತಾಗೋದು ಮುಖ್ಯವಾ ಅಥವಾ ಅಂತದ್ದೇ ಒಂದು ಪ್ರಕರಣ ಹಿಂದೆ ಆಗಿರೋದು ಮುಖ್ಯವಾ...? ಇಂಥಾದ್ದೇ ಪ್ರಶ್ನೆ ಹಿಂದೆಂದಾದರೂ ಇವರು ಮಾಡಿದಂತೆ ಬಾಂಬ್ ಬ್ಲಾಸ್ಟ್ ಆಗಿತ್ತಾ...? ಅನ್ನೋ ಪ್ರಶ್ನೆಯನ್ನ ಇವರ್ಯಾಕೆ ಕೇಳುವುದಿಲ್ಲ...?

3.ಅಪರಾಧಿಗೆ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೋ ಅಥವಾ ಕ್ಷಮಾದಾನ ಪಡೆಯುವುದಕ್ಕೋ ಸಕಲ ಅವಕಾಶಗಳನ್ನೂ ಮುಕ್ತವಾಗಿಡುವುದು ನ್ಯಾಯದ ಬೇಡಿಕೆ. ಮಹಾರಾಷ್ಟ್ರ ಸರಕಾರ ಈ ಮೂಲಭೂತ ಸ್ವಾತಂತ್ರ್ಯವನ್ನೇ ಯಾಕೂಬ್‍ನಿಗೆ ನಿರಾಕರಿಸುವ ರೀತಿಯಲ್ಲಿ ವರ್ತಿಸಿದ್ದೇಕೆ?
ಆತನ ಮೂಲಭೂತ ಸ್ವಾತಂತ್ರ್ಯ ಎಲ್ಲಿ ಕಿತ್ತುಕೊಂಡಿದೆ...? ಇಪ್ಪತ್ತೊಂದು ವರ್ಷ ಸಿಕ್ಕಿರುವುದು ಕಾಲಾವಕಾಶ ಅಲ್ಲವೇ? ಅದಾಗಿಯೂ ಮದ್ಯರಾತ್ರಿಯಲ್ಲೂ ನ್ಯಾಯಾಲಯದ ಬಾಗಿಲು ತೆರೆದೇ ಇತ್ತು ಅನ್ನೋದು ನ್ಯಾಯಾಲಯ ನ್ಯಾಯದ ಪರವಾಗಿ ಇತ್ತು ಅನ್ನುವುದರ ಮತ್ತು ಅಪರಾಧಿ ಮಾತು ಕೇಳುವುದಕ್ಕೂ ಸಿದ್ಧ ಅನ್ನುವುದನ್ನು ಸೂಚಿಸುತ್ತದೆಯಲ್ಲವೇ...? ಇಷ್ಟಾಗಿಯೂ ಇವರಿಗೆ ಕಾಲಾವಕಾಶ ಕೊಡಲಿಲ್ಲ ಅಂತ ಅನಿಸಲು ಕಾರಣ ಅಪರಾಧಿಯ ಮತ ಕಾರಣವೇ...? ಇನ್ನೂ ಮೂಲಭೂತ ಸ್ವಾತಂತ್ರ್ಯ ಅನ್ನೋದು ದೇಶದ ಮೇಲೆ ನಿಷ್ಠೆ ಇದ್ದವರಿಗೆ ಕೊಡಬೇಕೆ ಹೊರತು ದೇಶವಾಸಿಗಳನ್ನೆ ಬಾಂಬಿಟ್ಟು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿ ದೇಶದ್ರೋಹದ ಕೆಲಸ ಮಾಡಿದವರಿಗೇಕೆ ಕೊಡಬೇಕು...? ಮೂಲಭೂತ ಸ್ವಾತಂತ್ರ್ಯ ಬಯಸಿದವರು ದೇಶದ ಮೂಲಭೂತ ಕರ್ತವ್ಯದ ಪಾಲನೆ ಮಾಡಿದ್ದಾರೆಯೇ...?

4.ಪಾಕಿಸ್ತಾನದಿಂದ ಬಂದು ಭಾರತದ ಅಧಿಕಾರಿಗಳ ಮುಂದೆ ಶರಣಾಗತನಾಗಿದ್ದವನನ್ನು ಮುಂಬೈಯ ರೈಲ್ವೆ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದರೆಂದು ಇಷ್ಟು ಕಾಲ ಯಾಕೆ ಸುಳ್ಳನ್ನು ಹರಡಲಾಗಿತ್ತು?
ಆತನ ಬಂಧನ ಕುರಿತು ಸುಳ್ಳು ಹೇಳಿದ್ದಾರೆ ಅಂತಲೇ ಇಟ್ಟುಕೊಳ್ಳೋಣ... ( ಈ ವಿಚಾರವಾಗಿ ಇನ್ನೂ ಪೋಲೀಸ್ ಇಲಾಖೆಯಿಂದ ಸ್ಪಷ್ಟೀಕರಣ ಇನ್ನೂ ಸಿಗಲಿಲ್ಲವಾದರೂ ಇವರು ಹೇಳಿದ್ದನ್ನೇ ಸತ್ಯ ಅಂದುಕೊಳ್ಳೋಣ ) ಆದರೆ ಆತ ಎಲ್ಲಿ ಸಿಕ್ಕ ಅನ್ನುವುದಕ್ಕೂ ಗಲ್ಲಿನ ಶಿಕ್ಷೆಗೂ ಸಂಬಂಧ ಇಲ್ಲವಲ್ಲ. ಗಲ್ಲು ಶಿಕ್ಷೆ ನೀಡಿದ್ದು ಆತನ ಅಪರಾಧಕ್ಕೆ... ಆತನ ಅಪರಾಧ ಸಾಬೀತಾಗಿದೆ ಹಾಗಾಗಿ ಶಿಕ್ಷೆ ಆಗಿದೆ ಅನ್ನುವುದು ಯಾಕೆ ಇವರಿಗೆ ಗೊತ್ತಾಗುವುದಿಲ್ಲ...? ಇವರೇ ಹೇಳಿದ ಹಾಗೆ ಆತ ಪಾಕಿಸ್ಥಾನದಿಂದ ಬಂದದ್ದು ಅನ್ನುವಾಗ ಆತ ಪಾಕಿಸ್ಥಾನಕ್ಕೆ ಯಾಕೆ ತೆರಳಬೇಕಾಗಿತ್ತು...? ನನಗೆ ಭಾರತಕ್ಕಿಂತಲೂ ಪಾಕಿಸ್ಥಾನ ಸುರಕ್ಷಿತ ಅಂತ ಆತನಿಗೇಕೆ ಅನಿಸಬೇಕಿತ್ತು...? ಆತ ನಿರಪರಾಧಿ ಆಗಿದ್ದಿದ್ದರೆ ಪಾಕಿಸ್ಥಾನಕ್ಕೆ ತೆರಳದೇ ಇಲ್ಲೇ ಇದ್ದು ನ್ಯಾಯಾಲಯದ ಮೊರೆ ಹೋಗಬೇಕಾಗಿತ್ತಲ್ಲವೇ ..? ಅಲ್ಲಿಗೆ ಹೋಗಿ ಇಲ್ಲಿ ಬಂದಿರುವ ಕಾರಣ ಅಲ್ಲಿಗಿಂತಲೂ ಇಲ್ಲಿ ತಾನು ಸುರಕ್ಷಿತ ಎಂಬುದು ತಾನೆ...? ಕಳೆದ ಇಪ್ಪತ್ತೊಂದು ವರ್ಷದಲ್ಲಿ ಆತನ ವಕೀಲನಿಗೂ ಆ ಅಂಶ ಆತ ಯಾಕೆ ಹೇಳಲಿಲ್ಲ....?

5. ಯಾಕೂಬ್ ಶರಣಾಗತನಾದದ್ದು 1994ರಲ್ಲಿ. ಆದರೆ ಇದಕ್ಕಿಂತ 5 ವರ್ಷಗಳ ಮೊದಲೇ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಬಿಯಂತ್ ಸಿಂಗ್‍ರನ್ನು ಕೊಲ್ಲಲಾಗಿದೆ. ಪಂಜಾಬ್‍ನ ಖಾಲಿಸ್ತಾನ್ ಹೋರಾಟವೂ ತುಂಬಾ ಹಳೆಯದು. ಆದರೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ನಮ್ಮ ವ್ಯವಸ್ಥೆ ಈವರೆಗೂ ಜಾರಿಗೊಳಿಸಿಲ್ಲ . ರಾಷ್ಟ್ರಪತಿಯವರಿಂದ ಕ್ಷಮಾದಾನದ ಅರ್ಜಿಯು ತಿರಸ್ಕರಿಸಲ್ಪಟ್ಟ ಬಳಿಕವೂ ಅವರ ಸಹಿತ ಸುಮಾರು 25 ಮಂದಿ ಕೈದಿಗಳು ಇನ್ನೂ ಜೀವಂತವಾಗಿಯೇ ಇದ್ದಾರೆ. ಹೀಗಿರುವಾಗ ಸರದಿಯನ್ನು ತಪ್ಪಿಸಿ ಹಿಂದಿನವರನ್ನು ಹಾಗೆಯೇ ಉಳಿಸಿಕೊಂಡು ಈತನನ್ನು ಗಲ್ಲಿಗೆ ಕೊಡುವ ಆಸಕ್ತಿಯನ್ನು ಮಹಾರಾಷ್ಟ್ರದ ಸರಕಾರ ತೋರಲು ಏನು ಕಾರಣ?
ಇವರು ತೋರಿಸಿರುವ ಪ್ರಕರಣದಲ್ಲಿ ಒಬ್ಬೊಬ್ಬ ವ್ಯಕ್ತಿಗಳ ಸಾವಾಗಿದೆ ಆದರೂ ಅದು ಮುಖ್ಯವೇ ಅದರಲ್ಲೇನೂ ಸಂಶಯವಿಲ್ಲ. ಆದರೆ ಯಾಕೂಬನು ಸಾರ್ವಜನಿಕರ ಹತ್ಯೆಯ ವಿಷಯ. ಅಲ್ಲಿ ಹಲವಾರು ಅಮಾಯಕರು ಬಲಿಯಾಗಿದ್ದಾರೆ ಅನ್ನೋದು ಯಾಕೆ ಇವರಿಗೆ ಕಾಣಿಸುವುದಿಲ್ಲ. ಆದರಲ್ಲೂ ಅಪರಾಧಿಗೆ ಧರ್ಮ ಇಲ್ಲ ಎನ್ನುವ ಇವರು ಅಪರಾಧಕ್ಕಾಗಿ ಶಿಕ್ಷೆ ಆಗಿದೆ ಅನ್ನುವುದು ಗೊತ್ತಾದ ಮೇಲೆ ಸರದಿಯಲ್ಲಿ ಕೊಡಬೇಕಿತ್ತು ಅನ್ನುವುದರಲ್ಲಿ ಏನು ಅರ್ಥವಿದೆ...? ಸರದಿಯ ಸಾಲಲ್ಲಿ ಬಂದು ದೇಶದ್ರೋಹಿಯೊಬ್ಬ ತಡವಾಗಿ ಸಾಯಲಿ ಅನ್ನೋ ಬಯಕೆ ಯಾಕೆ...? ಅವರಿಗೂ ಮರಣ ದಂಡನೆ ಬೇಗನೆ ಕೊಡಿ ಅನ್ನುವುದು ಬಿಟ್ಟು ಇವರಿಗೆ ಸರದಿಯ ಸಾಲಲ್ಲಿ ಕೊಡಲಿಲ್ಲ ಅನ್ನುವುದು ಯಾಕೆ...? ಮತ್ತೆ ಮತ್ತೆ ಇವರು ಮಹಾರಾಷ್ಟ್ರ ಸರ್ಕಾರ ಸರ್ಕಾರ ಅನ್ನೋದು ಏನನ್ನು ಧ್ವನಿಸುತ್ತದೆ ? ನಿಜವಾಗಿಯೂ ಅಪರಾಧಿಗೆ ಶಿಕ್ಷೆ ಆಗಬೇಕು ಅನ್ನುವ ಮನಸ್ಸಿದೆಯೇ...?

6.ಮರಣದಂಡನೆ ವಿಧಿಸದಂತೆ ಒತ್ತಾಯಿಸಿ ಆತನಿರುವ ನಾಗ್ಪುರ ಜೈಲಿನ ಇತರ ಕೈದಿಗಳು ಒಂದು ದಿನದ ಉಪವಾಸ ಆಚರಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು, ಜೈಲಿನಲ್ಲಿ ಆತನ ನಡವಳಿಕೆ ಅತ್ಯುತ್ತಮವಾಗಿತ್ತು ಎಂದಲ್ಲವೇ ಅದರರ್ಥ ?
ಜೈಲಿನಲ್ಲಿ ಇರುವವರು ಉಪವಾಸ ಮಾಡಿದ ಕೂಡಲೇ ಬಾಂಬ್ ಬ್ಲಾಸ್ಟಿನಲ್ಲಿ ಅನ್ಯಾಯವಾಗಿ ಸತ್ತವರ ಪಾಲಿಗೆ ನ್ಯಾಯ ಸಿಕ್ಕಂತಾಗುತ್ತದೆಯೇ...? ಜೈಲಿನಲ್ಲಿ ಇರುವವರೆಲ್ಲಾ ಅಪರಾಧಿಗಳೇ... ಅಪರಾಧಿಗಳ ಮಾತಿಗೆಲ್ಲಾ ಬೆಲೆಕೊಡುವುದಾದರೆ ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಯಾಕೆ ಬೇಕು? ಶಿಕ್ಷೆ ಕೊಡುವುದಕ್ಕೂ ವೋಟಿಂಗ್ ಮಾಡಬಹುದಲ್ಲಾ... ಜೈಲಿನಲ್ಲಿ ಆತನ ನಡವಳಿಕೆ ಉತ್ತಮವಾಗಿದ್ದರೆ ಕ್ಷಮಿಸಿ ಬಿಡಬೇಕೆ.... ಉತ್ತಮರಂತೆ ನಟಿಸಲೂ ಬಹುದಲ್ಲವೇ...? ಯಾರೋ ಬಬ್ಬಾತ ಮಾಡುವ ಅಪರಾಧವನ್ನೆಲ್ಲಾ ಮಾಡಿ ಜೈಲಿನಲ್ಲಿ ಉತ್ತಮನಂತೆ ನಟಿಸಿದರೆ ಆತನನ್ನ ಬಿಟ್ಟು ಬಿಡಲು ಆಗುತ್ತದೆಯೇ...?

7.ರಾಜಕೀಯ ನಾಯಕರ ವೈಯಕ್ತಿಕ ಹಿತಾಸಕ್ತಿಗಳು ಈ ಗಲ್ಲು ಪ್ರಕರಣದಲ್ಲಿ ಪಾತ್ರ ವಹಿಸಿವೆಯೇ ?
ರಾಜಕೀಯ ನಾಯಕರ ಹಿತಾಸಕ್ತಿ ಇತ್ತೂ ಅಂತಲೇ ಇಟ್ಟುಕೊಳ್ಳಿ ಆದರೆ ಇಲ್ಲಿ ಅಪರಾಧಿಗೆ ತಾನೇ ಶಿಕ್ಷೆ ಆಗಿದ್ದು... ನಿರಪರಾಧಿಗೆ ಅಲ್ವಲ್ಲಾ... ಹಾಗಿರುವಾಗ ಇವರಿಗೆ ರಾಜಕೀಯ ಹಿತಾಸಕ್ತಿಯ ಕುರಿತೇಕೆ ಚಿಂತೆ...? ತಮ್ಮ ಮತದವರು ಅನ್ನುವ ಕಾರಣವಾಗಿದ್ದರೆ ಅವರ್ಯಾಕೆ ಅಪರಾಧಕ್ಕೆ ಧರ್ಮವಿಲ್ಲ ಅನ್ನುವ ಮಾತನ್ನ ಹೇಳಬೇಕಿತ್ತು... ಧರ್ಮ ಇಲ್ಲದ ಒಬ್ಬ ಅಪರಾಧಿಯ ಸಾವಿಗೆ ರಾಜಕೀಯ ನಾಯಕರು ಆಸಕ್ತಿ ವಹಿಸುತ್ತಿದ್ದಾರೆ ಅಂತಾದರೆ ಅದು ದೇಶದ ಸುರಕ್ಷತೆಯ ಆಧಾರದ ಮೇಲೆ ಉತ್ತಮ ಬೆಳವಣಿಗೆಯಲ್ಲವೇ ? ಅದನ್ನ ಯಾಕೆ ಇವರು ಸಹಿಸಿಕೊಳ್ಳುತ್ತಿಲ್ಲ...? ಇದರ ಅರ್ಥ ದೇಶದ ಸುರಕ್ಷತೆ ಇವರಿಗೆ ಬೇಕಾಗಿಲ್ಲವೇ...?

8.ಅಪರಾಧಿಗಳಿಗೆ ಧರ್ಮವಿಲ್ಲ ಎಂದು ಎಷ್ಟೇ ವಾದಿಸಿದರೂ ಮತ್ತು ಅಪರಾಧಕ್ಕೆ ಧರ್ಮವನ್ನು ಜೋಡಿಸುವುದನ್ನು ನಾವೆಷ್ಟೇ ಬಲವಾಗಿ ಖಂಡಿಸಿದರೂ ನಮ್ಮನ್ನಾಳುವವರ ನಡವಳಿಕೆಗಳು ಆ ವಾದ ಸುಳ್ಳೆಂದು ಸಾಬೀತುಪಡಿಸುತ್ತಿದೆಯಲ್ಲವೇ ?
ಇಲ್ಲಿ ನಮ್ಮನ್ನಾಳುವವರನ್ನು ಯಾಕೆ ಎಳೆದು ತರುತ್ತಿದ್ದಾರೆ...? ತೀರ್ಪು ನೀಡಿದ್ದು ನ್ಯಾಯಾಲಯ ಅಲ್ಲವೇ... ನ್ಯಾಯಾಲಯ ಬಯಸುವುದು ಸಾಕ್ಷ್ಯಾಧಾರಗಳನ್ನೇ ಅಲ್ಲವೇ ಅದರ ಕುರಿತು ಯೋಚಿಸುವುದು ಬಿಟ್ಟು ಆಡಳಿತ ನಡೆಸುವವರ ನಡವಳಿಕೆಯ ಮೇಲೆ ಯಾಕೆ ಕಣ್ಣು...? ಅದರಲ್ಲೂ ಇವರು ಪದೇ ಪದೇ ಈಗಿನ ಸರಕಾರವನ್ನ ಆರೋಪಿಯಾಗಿಸುತ್ತಿದ್ದಾರೆ. ಆದರೆ ಪ್ರಕರಣ ಇಪ್ಪತ್ತೊಂದು ವರ್ಷದಿಂದ ನಡೆಯುತ್ತಿದೆ ಆಗಿನ ಸರ್ಕಾರವನ್ನೆಲ್ಲಾ ಯಾಕೆ ದೂಷಿಸುವುದಿಲ್ಲ ? ಇದರ ಅರ್ಥ ತಮ್ಮ ಓದುಗರನ್ನು ಈಗಿನ ಸರ್ಕಾರದ ವಿರುದ್ಧ ಎತ್ತಿ ಕಟ್ಟುವುದೇ ಇವರ ಉದ್ದೇಶವೇ..?

9.ಗುಜರಾತ್‍ನ ನರೋಡಾ ಪಾಟಿಯಾದಲ್ಲಿ 97 ಮಂದಿಯ ಹತ್ಯೆಗೆ ನೇತೃತ್ವ ನೀಡಿದ್ದ ಮಾಯಾ ಕೊಡ್ನಾನಿಯ ಮರಣ ದಂಡನೆಯು ಜೀವಾವಧಿಯಾಗಿ ಪರಿವರ್ತನೆಯಾಗಿದೆ
ಮಾಯಾ ಕೊಡ್ನಾನಿ ಗೆ ಜೀವಾವಧಿ ಶಿಕ್ಷೆ ಆಗಿದೆ ಅನ್ನುವುದನ್ನು ಉಲ್ಲೇಖಿಸಿ ಬೇಸರ ಪಡುತ್ತಾರೆ ಅಂದರೆ ಅವನಿಗೂ ಗಲ್ಲು ಆಗಬೇಕಿತ್ತು ಅನ್ನುವುದು ತಾನೆ... ಅದೇ ತನ್ನ ಧರ್ಮದವನಿಗೆ ಜೀವಾವಧಿ ಶಿಕ್ಷೆ ಜಾರಿಗೆಗೊಳಿಸಬಹುದಿತ್ತು ಅನ್ನುತ್ತಾರೆ... ಇನ್ನೊಂದೆಡೆ ಅಪರಾಧಿಗೆ ಧರ್ಮವಿಲ್ಲ ಅನ್ನುತ್ತಾರೆ.... ಎಂಥಾ ವಿಚಿತ್ರ ತನ್ನ ಧರ್ಮದವನಿಗೆ ಜೀವಾವಧಿ ಶಿಕ್ಷೆಯಾಗಲಿ ಅನ್ನೋದು ಇನ್ನೊಂದು ಧರ್ಮದವನಿಗೆ ಗಲ್ಲಾಗಲಿ ಅಂತ ಬಯಸುವುದು ಸ್ವಧರ್ಮಪ್ರೇಮವಲ್ಲದೇ ಮತ್ತೇನು?... ಹಾಗಿದ್ದರೆ ಅಪರಾಧಕ್ಕೆ ಧರ್ಮವಿಲ್ಲ ಅನ್ನೋ ಮಾತು ಇವರ ಮನಸ್ಸಿನಾಳದಿಂದ ಬಂದದ್ದಲ್ಲ ಅಂತಾಯಿತಲ್ಲವೇ...?

10.ಇದರ ಜೊತೆಗೇ, ಮಾಲೆಗಾಂವ್, ಸಮ್ಜೋತಾ, ಅಜ್ಮೀರ್ ಸ್ಫೋಟಗಳ ಕುರಿತಾದ ನಿಧಾನಗತಿಯ ತನಿಖೆಯನ್ನು ಇಟ್ಟು ನೋಡುವಾಗ ಯಾಕೂಬ್ ಮೇಮನ್ ಪ್ರಕರಣದಲ್ಲಿ ಸರಕಾರ ತೋರುತ್ತಿರುವ ಅವಸರವು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆಯಲ್ಲವೇ ?
ಅಬ್ಬಬ್ಬಾ ಎಂಥಾ ವಿಚಿತ್ರ ವಾದಗಳು... ಒಂದೆಡೆ ಯಾಕೂಬ್ ಪ್ರಕರಣ ತೋರಿಸಿ ಇಂತಹಾ ತುರ್ತು ಬೇಕಿತ್ತಾ ಅನ್ನುತ್ತಾರೆ.... ಅಲ್ಲಿ ಅಪರಾಧಿ ಆತನ ಧರ್ಮದವ.... ಇನ್ನೊಂದು ಕಡೆ ಮೂರು ಪ್ರಕರಣದಲ್ಲಿ ನಿಧಾನಗತಿಯ ತನಿಖೆಯಾಗ್ತಾ ಇದೆ ಅನ್ನುತ್ತಾರೆ... ಅಲ್ಲಿ ಅಪರಾಧಿ ಸ್ಥಾನದಲ್ಲಿರೋರು ಇನ್ನೊಂದು ಧರ್ಮದವರು ಸಾವು ನೋವುಗಳಿಗೊಳಗಾದವರು ಅವರ ಧರ್ಮದವರು... ಒಬ್ಬ ಸಾಮಾನ್ಯ ಓದುಗನಿಗೂ ಇವೆರಡನ್ನ ಹೋಲಿಸಿ ನೋಡಿದಾಗ ತಿಳಿದೇ ಬಿಡುತ್ತದೆ ಇಲ್ಲಿ ಪ್ರಶ್ನೆ ಕೇಳಿರುವವರಿಗೆ ತನ್ನ ಧರ್ಮದವರ ಮೇಲಿನ ಪ್ರೀತಿಯೇ ಈ ರೀತಿ ಪ್ರಶ್ನೆ ಕೇಳುವಂತೆ ಮಾಡಿದೆ ಎಂದು.... ಹಾಗಿರುವಾಗ ಇವರು ನಿಷ್ಪಕ್ಷಪಾತವಾಗಿ ದೇಶದ ಹಿತವನ್ನಿರಿಸಿ ಲೇಖನ ಬರೆದಾರೇ ಅನ್ನುವುದು ಅನುಮಾನಕ್ಕೆಡೆ ಮಾಡಿಕೊಡುವುದಿಲ್ಲವೇ...?

11.ಯಾಕೂಬ್ ನನ್ನು ಗಲ್ಲಿಗೇರಿಸಿದರೆ ಖುಷಿ ಪಡುವವರು ಪಾಕಿಸ್ಥಾನಿಗಳು ಯಾಕೆಂದರೆ ಅವರ ವಿರುದ್ಧದ ಸಾಕ್ಷ್ಯ ನಾಶವಾಗುತ್ತದೆ..?
ಇದರ ಅರ್ಥ ಕಳೆದ ಇಪ್ಪತ್ತೊಂದು ವರ್ಷಗಳಿಂದ ಆತ ಏನೂ ಬಾಯಿ ಬಿಡಲಿಲ್ಲವೆಂದೇ... ಒಂದು ವೇಳೆ ಹೇಳಿ ಆಗಿದ್ದಲ್ಲಿ ಆತ ತಪ್ಪಿತಸ್ಥ ಎಂದು ತಾನೇ ಅರ್ಥ. ಬೇಕಾದ ಸಾಕ್ಷ್ಯಗಳೆಲ್ಲಾ ಸಿಕ್ಕಾದ ಮೇಲೆ ತಾನೆ ಅಪರಾಧಿ ಅಂತ ನ್ಯಾಯಾಲಯ ತೀರ್ಪು ಕೊಟ್ಟದ್ದು ? ಹಾಗಿರುವಾಗ ಅಪರಾಧಿಗೆ ಶಿಕ್ಷೆ ಆಗುತ್ತದೆ ಅನ್ನೋದು ಇಲ್ಲಿನವರಿಗೆ ಖುಷಿ ಕೊಡುವುದಿಲ್ಲವೆಂದೇ ಅರ್ಥವೇ...?

12.ಮುಂಬೈ ಬಾಂಬ್ ಸ್ಫೋಟಕ್ಕಿಂತ ಮೊದಲು ನಡೆದ ಮುಂಬೈ ಕೋಮು ಗಲಭೆಯಲ್ಲಿ ಸಾವಿರಕ್ಕಿಂತ ಅಧಿಕ ಮಂದಿ ಸಾವಿಗೀಡಾಗಿದ್ದರು. ಈ ಗಲಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿಯು ಪ್ರಮುಖ ಪಾತ್ರ ವಹಿಸಿದ್ದನ್ನು ಶ್ರೀ ಕೃಷ್ಣ ಆಯೋಗ ವಿವರವಾಗಿ ಹೇಳಿತ್ತು. ಆದರೆ ಶಿವಸೇನೆಯ ನಾಯಕ ಮಧುಕರ್ ಸರ್‍ಪೋತೆದಾರ್‍ರಿಗೆ ಕೆಳ ನ್ಯಾಯಾಲಯವು ಜುಜುಬಿ ಒಂದು ವರ್ಷದ ಶಿಕ್ಷೆ ಘೋಷಿಸಿದ್ದನ್ನು ಬಿಟ್ಟರೆ ಇನ್ನಾರೂ ಶಿಕ್ಷೆಯ ಹತ್ತಿರವೇ ಸುಳಿಯಲಿಲ್ಲ. ಅಲ್ಲದೇ ಮಧುಕರ್‍ರನ್ನು ಒಂದು ದಿನದ ಮಟ್ಟಿಗಾದರೂ ಜೈಲಿಗೆ ಕಳುಹಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ.

ಕೋಮುಗಲಭೆಯ ಪ್ರಕರಣವೇ ಇರಲಿ... ಇವರು ಶಿಕ್ಷೆ ಆಗಲೇ ಇಲ್ಲ ಅನ್ನುವ ಅಪರಾಧಿಗಳು ಬರಿಯ ಇತರ ಧರ್ಮದವರು ಮಾತ್ರ ಯಾಕಾಗಿರುತ್ತಾರೆ.? ಕೋಮು ಗಲಭೆ ಅಂದ ಮೇಲೆ ಎರಡೂ ಕಡೆಯವರು ಅಪರಾಧ ಎಸಗಿದ್ದಾರೆ ಅಂದು ತಾನೇ ಅರ್ಥ ಆ ಕೋಮುಗಲಬೆಯಲ್ಲಿ ಅವರ ಧರ್ಮದವರಿಗೆ ಏನೇನು ಶಿಕ್ಷೆ ಯಾಗಿದೆ ಅನ್ನೋದನ್ನ ಯಾಕೆ ಹೋಳೋದಿಲ್ಲ..? ಕೋಮುಗಲಭೆಯನ್ನ ಮೂಲವಾಗಿ ಆರಭಿಸಿದವರ ಪಟ್ಟಿಯನ್ನು ಯಾಕೆ ನೀಡೋದಿಲ್ಲ...? ಕೋಮುಗಲಭೆಗೂ ಬಾಂಬ್ ಬ್ಲಾಸ್ಟಿಗೂ ಯಾಕೆ ತಳಕು ಹಾಕುತ್ತಾರೆ...? ಸರಿ ಹಾಕಿದ ಮೇಲೆ ಇದುವರೆಗೆ ಏನೆಲ್ಲಾ ಕೋಮುಗಲಭೆಯಾಗಿದೆ ಎಷ್ಟು ಜನ ಅಪರಾಧಿಗಳಿದ್ದಾರೆ ಅನ್ನೋ ಪಟ್ಟಿಯನ್ನೇಕೆ ಕೊಡುವುದಿಲ್ಲ...? ಉಲ್ಲೇಖಿಸುವಾಗಲೂ ತಮ್ಮ ಧರ್ಮದವರನ್ನ ಬಿಟ್ಟು ಉಳಿದವರನ್ನೇ ಯಾಕೆ ಉಲ್ಲೇಖಿಸುತ್ತಾರೆ..?
ಹೀಗೆ ಹಲವು ಪ್ರಶ್ನೆಗಳು ಕೇಳುತ್ತಾ ತಮ್ಮ ಧರ್ಮಪ್ರೇಮವನ್ನ ಎಲ್ಲೆಡೆ ಹರಡುವ ಲೇಖಕರು ಎಲ್ಲಿಯೂ ಯಾಕೂಬ್ ನಿರಪರಾಧಿಯಾಗಿದ್ದ ಅನ್ನುವುದನ್ನ ಉಲ್ಲೇಖಿಸುವುದೇ ಇಲ್ಲ. ಅದರ ಕುರಿತಾದ ಒಂದೇ ಒಂದು ಸಾಕ್ಷ್ಯವನ್ನ ಕೊಡುವುದಿಲ್ಲ. ಅದನ್ನೇನಾದರೂ ನೀಡಿದ್ದರೆ ಒಪ್ಪಬಹುದಿತ್ತೇನೋ ನಮ್ಮ ನ್ಯಾಯಾಲಯ ಎಡವಿದೆ ಎಂದು . ಆದರೆ ಅದು ನಮಗೆ ಕಾಣಸಿಗುವುದೇ ಇಲ್ಲ. ಹಾಗಿದ್ದೂ ಆತನಿಗೆ ಅನ್ಯಾಯವಾಯಿತು ಅನ್ನುತ್ತಾರೆ. ಇಷ್ಟೆಲ್ಲಾ ಪ್ರಶ್ನೆಗಳು ಸೂಚ್ಯವಾಗಿ ತಮ್ಮ ಧರ್ಮದವರ ಮೇಲೆ ಸರ್ಕಾರ ಅನ್ಯಾಯ ಮಾಡುತ್ತಿದೆ ಅನ್ನುವ ಭಾವನೆ ಓದುಗನಲ್ಲಿ ಬರಲಿ ಅನ್ನುವ ರೀತಿ ಕೇಳಿದ್ದಾರೆ. ಅದೂ ಅಲ್ಲದೇ ಮುಂಜಾವಿನವರೆಗೂ ಕಾರ್ಯನಿರತವಾದ ನ್ಯಾಯಾಲಯವನ್ನ ಸಂಶಯಿಸುತ್ತಾರೆ. ಒಬ್ಬ ವ್ಯಕ್ತಿಗೆ ತಾನು ನಿರಪರಾಧಿ ಅಂತ ಪ್ರೂವ್ ಮಾಡೋದಿಕ್ಕೆ ಇಪ್ಪತ್ತೊಂದು ವರ್ಷಗಳನ್ನ ಕೇವಲ ಭಾರತದ ನ್ಯಾಯಾಂಗ ಮಾತ್ರ ಕೊಡಬಲ್ಲದು ಆದರೆ ಅಪರಾಧಕ್ಕೆ ಧರ್ಮವಿಲ್ಲ ಅನ್ನೋ ಸುಳ್ಳು ಹೇಳುತ್ತಾ ಇರುವವರಿಗೆ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಬರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವೇ...
ಈ ಮೂಲ ಪ್ರಶ್ನೆಗಳನ್ನ ಕೇಳಿದವರಿಗೆ ಅಪರಾಧಿಯ ಧರ್ಮದ ಮೇಲೆ ಪ್ರೀತಿ ಇದ್ದಿರಬಹುದು ಆದರೆ ಮರುಪ್ರಶ್ನೆ ಕೇಳಿದ ನನಗಂತೂ ಅಪರಾಧಿಯ ಧರ್ಮದ ಮೇಲೆ ಖಂಡಿತಾ ಪ್ರೀತಿ ಇಲ್ಲ... ನಿರಪರಾಧಿಗೆ ಶಿಕ್ಷೆ ಆಗಬಾರದು ಅನ್ನುವುದನ್ನ ನಾನು ಬಲವಾಗಿ ಪ್ರತಿಪಾದಿಸುತ್ತೇನೆ ಆದರೆ ಒಮ್ಮೆ ದೋಷಿ ಎಂದು ನಮ್ಮ ನ್ಯಾಯಾಲಯ ತೀರ್ಪು ಕೊಟ್ಟಿತು ಅಂದ ಮೇಲೆ ನಾನು ಆತನ ಧರ್ಮ ನೋಡೋದಿಲ್ಲ. ಆತ ಏನಿದ್ದರೂ ಅಪರಾಧಿ ಅಷ್ಟೇ. ನಮ್ಮ ದೇಶದ ನ್ಯಾಯಾಲಯ ಕೊಟ್ಟ ಶಿಕ್ಷೆಯನ್ನ ಒಪ್ಪಿಕೊಳ್ಳುತ್ತೇನೆ. ಅದು ಮಾಯಾ ಕೊಡ್ನಾನಿಯೇ ಆಗಿರಲಿ ಅಥವಾ ಸಾಧ್ವಿ ಪ್ರಜ್ಞಾ ಸಿಂಗೇ ಆಗಿರಲಿ... ನನಗೇನೂ ಅನಿಸುವುದಿಲ್ಲ. ಹಾಗಿದ್ದೂ ನಮ್ಮ ನ್ಯಾಯಾಂಗವನ್ನ ಸಂಶಯಿಸುವವರು ಇನ್ನೂ ಯಾಕೆ ಇಲ್ಲೇ ಇದ್ದಾರೋ ಗೊತ್ತಾಗುವುದಿಲ್ಲ... ಯಾಕೆಂದರೆ ಆಡಳಿತಗಾರರ ಮೇಲೆ ನಂಬಿಕೆ ಇಲ್ಲದೆ ಇದ್ದಾಗ ಆ ದೇಶದಲ್ಲಿ ಬದುಕುವುದಕ್ಕೆ ಆಗುತ್ತದೆ. ಆದರೆ ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೋಯಿತು ಎಂದರೆ ಬದುಕುವುದು ತೀರಾ ಕಷ್ಟ... ಹಾಗಾದಾಗ ತಮಗೆ ಯಾವ ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರುತ್ತದೋ ಆ ದೇಶಕ್ಕೆ ಹೊರಟು ಹೋಗುವುದು ಒಳಿತಲ್ಲವೇ....???

No comments:

Post a Comment