ಇವತ್ತು ತಾರೀಖು 26/11/12 ನಾಲ್ಕು ವರ್ಷಗಳ ಕೆಳಗೆ ಇದೇ ದಿನದಂದು ಮುಂಬಯಿಯ ಹಲವು ಕಡೆ ಉಗ್ರರ ದಾಳಿಯಾಗಿತ್ತು. ಹಲವು ಜನ ಪ್ರಾಣವನ್ನು ಕಳಕೊಂಡರು, ದೇಶದ ತೋಳ್ಬಲವಾದ ಪೋಲೀಸ್ ಇಲಾಖೆ ಮತ್ತು ಕಮಾಂಡೋ ಪಡೆ ತಮ್ಮ ವೀರ ಸೈನಿಕರನ್ನು ಕಳೆದುಕೊಂಡಿತು. ಈ ಘಟನೆ ನಡೆದು ನಾಲ್ಕು ವರ್ಷ ಕಳೆದ ಬಳಿಕ, ಸಿಕ್ಕಿ ಬಿದ್ದ ಏಕೈಕ ಅಪರಾಧಿಗೆ ಮೊನ್ನೆ ಮೊನ್ನೆ ನೇಣಿನುಡುಗೊರೆ ದೊರೆಯಿತು. ಸ್ಪಷ್ಟವಾಗಿ ಕಾಣುವ ವೀಡಿಯೋ ಇದ್ದಾಗಲೇ ಶಿಕ್ಷೆ ಜಾರಿಗೊಳಿಸಲು ನಾಲ್ಕು ವರ್ಷ ಬೇಕಾಗಿದೆ ಅಂತಾದರೆ ಇನ್ನು ಅಸ್ಪಷ್ಟ ಸಾಕ್ಷಿಗಳಿದ್ದಿದ್ದರೆ ಏನು ಗತಿಯಾಗಿರುತ್ತಿತ್ತೋ. ಸರ್ಕಾರದ ಭದ್ರತಾ ವೈಫಲ್ಯಗಳಿಗೆಲ್ಲಾ ಮೊದಲು ಶಿಕ್ಷೆ ಅನುಭವಿಸೋದು ಸಾಮಾನ್ಯ ಜನರು. ಅದು ಅತಿ ಶೀಘ್ರವೇ... ಆದರೆ ಅಪರಾಧಿಗೆ ಮಾತ್ರ ಎಷ್ಟೊಂದು ಕಾಲಾವಕಾಶ...? ಈ ಘಟನೆ ಎಲ್ಲೋ ನಮ್ಮನ್ನೂ ನಮ್ಮ ವ್ಯವಸ್ಥೆಯನ್ನೂ ನಾವು ಮತ್ತೊಮ್ಮೆ ಪರಿಶೀಲಿಸಬೇಕು ಅನ್ನೋ ಸಂದೇಶ ಕೊಡೋದಿಲ್ವಾ...?
ಅದೇನೇ ಇರಲಿ ಮೊನ್ನೆ ಕಸಬ್ ಗೆ ಗೌಪ್ಯವಾಗಿ ಗಲ್ಲು ಶಿಕ್ಷೆ ವಿಧಿಸಲಾಯಿತು.ಇಲ್ಲಿ ನನ್ನದೊಂದು ಸಂದೇಹ ನಿಜಕ್ಕೂ ಗಲ್ಲು ಆಗಿದೆಯಲ್ವಾ...? ಯಾಕೆಂದರೆ ಇದುವರೆಗೂ ನೇಣು ಹಾಕಿರುವ ಬಗ್ಗೆ ನಂಬಲರ್ಹ ವಿಡೀಯೋ ಆಗಲಿ ಫೋಟೋವಾಗಲಿ ಸರ್ಕಾರದ ಕಡೆಯಿಂದ ಬಿಡುಗಡೆಯಾಗಿಲ್ಲ. ಮತ್ತು 7.30 ನೇಣು ಹಾಕಿ 9.30ಗೆ ಅಲ್ಲೇ ಧಫನ ಮಾಡಿಲಾಗಿದೆ ಎಂದಿದ್ದಾರೆ ಗೃಹ ಮಂತ್ರಿ. ಅದಕ್ಕೂ ಯಾವುದೇ ಸಾಕ್ಷಿ ಇಲ್ಲ. ಅಲ್ಲಿ ಇದ್ದ ಅಧಿಕಾರಿ ವರ್ಗದವರ್ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಇಷ್ಟಾದ ಅಸ್ಪಷ್ಟತೆ ಇದ್ದಾಗಲೂ ನಾವು ಇದನ್ನು ನಂಬಿ ಹಾಯಾಗಿದ್ದೇವೆ.
ಇಡಿಯ ಜಗತ್ತಿನ ಕಣ್ಣನ್ನು ಕುಕ್ಕುವಂತೆ ತನ್ನ ಕುಕೃತ್ಯವನ್ನು ಜಾರಿಗೊಳಿಸಿದ ಈತನಿಗೆ ಜನರ ಮುಂದೆಯೇ ನೇಣು ಹಾಕಬೇಕಾಗಿತ್ತು. ಇನ್ನು ಮುಂದೆ ಯಾರೂ ಕೂಡ ಇಂತಹಾ ದುಸ್ಸಾಹಸಕ್ಕೆ ಕೈ ಹಾಕಬಾರದೆನುವ ಸ್ಪಷ್ಟ ಸಂದೇಶವೊಂದನ್ನು ಇವನ ಸಾವಿನ ಮುಖಾಂತರ ಜಗತ್ತಿನ ಎಲ್ಲಾ ಭಯೋತ್ಪಾದಕರಿಗೆ ತಿಳಿಸಿಹೇಳಬೇಕಿತ್ತು. ಆದರೆ ಸರ್ಕಾರವೇ ಹೆದರಿದಂತಿದೆ. ಇದು ಸರ್ಕಾರದ ಭಯವೂ ಆಗಿರಬಹುದು ಅಥವಾ ಅನುಮಾನವೂ ಆಗಿರಬಹುದು. ಇದನ್ನು ನನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸುವ ಸಣ್ಣ ಪ್ರಯತ್ನ ಇಲ್ಲಿ ಮಾಡುತ್ತಿದ್ದೇನೆ ಇದು ನಿಜವೋ ಸುಳ್ಳೋ ಅನ್ನೋದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.
ಈ ಘಟನೆಯನ್ನು ಗೌಪ್ಯವಾಗಿ ಮಾಡಿರೋದಕ್ಕೆ ಕಾರಣ ಭದ್ರತೆಯ ದೃಷ್ಟಿಯಿಂದ ಅನ್ನುತ್ತಾದೆ ಸರ್ಕಾರ. ಭದ್ರತೆ ಯಾರದ್ದು ಕಸಬ್ ನದ್ದೋ ಅಥವಾ ಭಾರತೀಯರದ್ದೋ... ಒಂದು ವೇಳೆ ಕಸಬ್ ನದ್ದು ಅಂತಾದರೆ ಆತನನ್ನು ಅಪಹರಿಸಿಯಾರು ಅನ್ನೋ ಭಯ ಕಾಡಬೇಕು, ಆದರೆ ಸರ್ಕಾರ ಅಷ್ಟೊಂದು ಖರ್ಚು ಮಾಡಿ ಬಿಗಿ ಬಂದೋಬಸ್ತು ಮಾಡಿದೆಯಲ್ಲಾ...ಅದರ ಬಗ್ಗೆ ನಂಬಿಕೆ ಇಲ್ಲವೇ... ಅರ್ಥಾತ್ ತಮ್ಮ ಪಡೆಯ ಕ್ಷಮತೆಯ ಬಗೆಗೆ ಅನುಮಾನವೇ...? ಇದರ ಇನ್ನೊಂದು ಮುಖ ಅಂದರೆ ಭಾರತೀಯರ ಭದ್ರತೆಯ ಬಗ್ಗೆ ಅಂತಾದಲ್ಲಿ ಗೌಪ್ಯವಾಗಿ ಮರಣದಂಡನೆ ಕೊಟ್ಟರೂ ಸಾವಿನ ನಂತರ ವಿಷಯ ಬಹಿರಂಗಗೊಳಿಸೋದು ಇದ್ದೇ ಇದೆಯಲ್ವಾ. ನಮ್ಮಲ್ಲಿರುವ ರಕ್ಷಣಾ ಪಡೆಯನ್ನು ಸನ್ನದ್ಧಗೊಳಿಸಿ ಮರಣದಂಡನೆ ಜಾರಿಗೆ ತರಬಹುದಿತ್ತಲ್ವಾ... ಇಲ್ಲೂ ಸರ್ಕಾರಕ್ಕೆ ತಮ್ಮ ರಕ್ಷಣಾ ಪಡೆಯ ಕಾರ್ಯ ದಕ್ಷತೆಯ ಬಗ್ಗೆ ಅನುಮಾನವಿದ್ದಾಗ ಮಾತ್ರ ಈ ಅಭದ್ರತೆಯ ಭಯ ಕಾಡೋಕೆ ಸಾಧ್ಯ ಅಲ್ವಾ...?
ಈ ಘಟನೆಯ ಮೂರನೇ ಆಯಾಮ ಯಾರಿಂದ ಅಭದ್ರತೆ ಆಗುವ ಸಂಭವವಿದೆ ಅನ್ನೋದು.
1. ಭಯೋತ್ಪಾದಕ ಸಂಘಟನೆಗಳು ಅಭದ್ರತೆಯನ್ನುಂಟು ಮಾಡಬಹುದು ಅನ್ನೋದು. ಹಾ ಒಪ್ಪಬಹುದಾದ ಮಾತು ಆದರೆ ವಿಶ್ವದಲ್ಲಿನ ಬಲಿಷ್ಠ ಸೇನಾ ಪಡೆಗಳಲ್ಲಿ ಒಂದಾಗಿರುವ ನಮ್ಮ ರಕ್ಷಣಾ ದಳವನ್ನು ಸರಿಯಾಗಿ ಬಳಸಿಕೊಂಡಲ್ಲಿ ಭಯೋತ್ಪಾದಕ ದಾಳಿಯನ್ನು ತಡೆಯುವುದು ಅಸಾಧ್ಯವೇನಲ್ಲವಲ್ಲ. ಅಮೇರಿಕಾದಲ್ಲಿ ಒಂದು ಬಾರಿ ದಾಳಿಯಾಗಿದೆ ಅಷ್ಟೇ. ಮತ್ತೆಂದೂ ದಾಳಿಗೆ ಅವಕಾಶವನ್ನು ಅವರು ಮಾಡಿಕೊಡಲಿಲ್ಲ.ಅಲ್ಲಿನ ತಂತ್ರಜ್ಞಾನಗಳ ಮಾಹಿತಿಯ ವಿನಿಮಯ ಮಾಡಿಕೊಂಡು ಅದೇ ರೀತಿಯಲ್ಲಿ ರಕ್ಷಣಾವ್ಯೂಹ ರಚಿಸಬಹುದು. ಅಲ್ಲಿಯವರಿಗೆ ಸಾಧ್ಯವಿದೆ ಅಂತಾದರೆ ನಮ್ಮ ಸೇನೆಗೆ ಯಾಕಾಗೋದಿಲ್ಲ. ಖಂಡಿತ ಸಾಧ್ಯವಿದೆ ಆದರೆ ನಾವು ರಾಷ್ಟ್ರ ರಕ್ಷಣೆಯ ವಿಷಯ ಬಂದಾಗ ರಾಜಕೀಯವನ್ನು ಸ್ವಲ್ಪ ಬದಿಗೊತ್ತಬೇಕು. ಆದರೆ ನಮ್ಮ ರಾಜಕಾರಣಿಗಳಿಗೆ ಅಥವಾ ಸರ್ಕಾರಕ್ಕೆ ರಾಜಕೀಯ ಬೇಕೆ ವಿನಹ ರಾಷ್ಟ್ರವಲ್ಲ ಅನ್ನೋದು ಕಹಿ ಸತ್ಯವಾಗಿಬಿಡುತ್ತದೆ.
2. ಆಂತರಿಕ ದಂಗೆಗಳಾಗಬಹುದು ಅನ್ನೋದು. ಇದೊಂದು ವಿಚಿತ್ರ ಸ್ಥಿತಿ. ದಂಗೆಗಳು ಯಾಕೆ ಆಗಬೇಕು...? ಒಬ್ಬ ಉಗ್ರವಾದಿಗೆ ಶಿಕ್ಷೆ ಕೊಟ್ಟಾಗ ದೇಶದ ಜನರಲ್ಲಿ ಸಂಭ್ರಮ ಉಂಟಾಗುತ್ತದೆಯೇ ಹೊರತು ದಂಗೆಯಾಗೋ ಸಂಭವನೀಯತೆ ಕಡಿಮೆ ಅಲ್ವಾ. ಹೇಳದೇ ಇದ್ದರೂ ಸರ್ಕಾರಕ್ಕಿರೋ ಭಯ ಅಥವಾ ಅನುಮಾನ ಭಾರತೀಯ ಮುಸ್ಲಿಂ ಸಮುದಾಯದ ಮೇಲೆ ಅನ್ನೋದು ವಾಸ್ತವ. ಮುಂದೆ ಆಗಲಿರೋ ದಂಗೆಯ ಕುರಿತಾದ ಭಯದ ಬಗ್ಗೆ ಹೇಳೋದಾದರೆ , ನಾನು ಮತ್ತೆ ರಕ್ಷಣಾ ಪಡೆಯ ಕಾರ್ಯದಕ್ಷತೆಯ ಮೇಲಿನ ಅನುಮಾನದ ಬಗ್ಗೆ ಮೊದಲು ಹೇಳಿದ ಮಾತನ್ನೇ ಪುನರುಚ್ಚರಿಸಬೇಕಾಗುತ್ತದೆ. ಇನ್ನು ದಂಗೆಯಾಗೋ ಅನುಮಾನದ ಕುರಿತಾಗಿ ಹೇಳೋದಾದರೆ... ದಂಗೆಯಾಗುವ ಅನುಮಾನ ಇರುವ ಕಡೆ ಸಮಗ್ರ ಜಾಗರೂಕತೆಯ ಕ್ರಮ ಕೈಗೊಂಡರಾಯಿತು ಅಲ್ವಾ. ಹಾಗಿದ್ದು ಒಬ್ಬ ಉಗ್ರವಾದಿಯ ಶಿಕ್ಷೆಗೆ ದಂಗೆ ಏಳುತ್ತಾರೆ ಅಂತಾದರೆ ಅಂಥವರನ್ನು ಉಗ್ರವಾದಿಗಳೇ ಅಂತ ನಿರ್ಣಯಿಸೋದರಲ್ಲಿ ಹಿಂಜರಿಕೆ ಇರಬಾರದು. ಯಾರೆಲ್ಲಾ ದಂಗೆಯಲ್ಲಿ ಭಾಗವಹಿಸುತ್ತಾರೋ ಅಂಥವರು ದೇಶದ ಆಂತರಿಕ ಉಗ್ರಗಾಮಿಗಳು ಎಂದು ನಿರ್ಣಯಿಸಿ ಅವರಿಗೂ ಮರಣದಂದನೆಯನ್ನು ವಿಧಿಸುವುದರಲ್ಲಿ ಎರಡು ಬಾರಿ ಯೋಚಿಸಬಾರದು. ಯಾಕೆಂದರೆ ಇಂಥಾ ದಂಗೆಕೋರರು ಮೊಳಕೆಯಲ್ಲಿರೋ ವಿಷಬೀಜ. ಬೆಳೆಯಲು ಬಿಟ್ಟಷ್ಟು ನಮ್ಮ ದೇಶಕ್ಕೇ ಆಪತ್ತು. ನಿಜವಾದ ಭಾರತೀಯ ಮುಸ್ಲಿಂ ಉಗ್ರವಾದಿಯೊಬ್ಬನಿಗೆ ಶಿಕ್ಷೆಯಾದಾಗ ಸಂತಸ ವ್ಯಕ್ತಪಡಿಸಿಯಾನೇ ಹೊರತು ದಂಗೆ ಏಳಲಾರ. ಸರ್ಕಾರದ ಈ ನಡೆಯಲ್ಲಿ ಒಂದು ವಿಷಯ ಸ್ಪಷ್ಟವಾಗೋದು ಏನೆಂದರೆ ಯಾವ ಪಕ್ಷ ಮುಸ್ಲಿಂ ಸಮುದಾಯವನ್ನು ವೋಟ್ ಬ್ಯಾಂಕ್ ಅನ್ನಾಗಿ ಮಾಡಿದೆಯೋ, ಜಾತ್ಯಾತೀತತೆ ಸೋಗಿನಲ್ಲಿ ಮುಸ್ಲಿಂ ಸಮುದಾಯದ ರಕ್ಷಕರು ಅನ್ನುತ್ತಾ ರಾಜಕೀಯ ಮಾಡುತ್ತಿದ್ದರೋ , ಅವರೇ ಮುಸ್ಲಿಂ ಸಮುದಾಯದ ಮೇಲೆ ಅನುಮಾನದ ದೃಷ್ಟಿಯನ್ನಿಟ್ಟಿದ್ದಾರೆ.( ಈ ನಿಟ್ತಿನಲ್ಲಿ ಹೇಳುವುದಾದರೆ ಭಾರತೀಯ ಮುಸ್ಲಿಂ ಸಮುದಾಯ ಮಾಡಬೇಕಾಗಿರೋ ಮೊಟ್ಟ ಮೊದಲ ಕೆಲಸ ದೇಶದ ಬಗೆಗಿನ ನಿಷ್ಟೆಯನ್ನು ಸಾಬೀತು ಪಡಿಸೋದು)... ಒಂದು ವೇಳೆ ಸರ್ಕಾರಕ್ಕೆ ತನ್ನ ದೇಶದ ಮುಸ್ಲಿಂ ಪ್ರಜೆಗಳ ಮೇಲೆ ಅನುಮಾನ ಇಲ್ಲವಾಗಿದ್ದಲ್ಲಿ ಕಸಬ್ ನಿಗೆ ಸಾರ್ವಜನಿಕವಾಗಿ ಶಿಕ್ಷೆ ಕೊಡುತಿತ್ತು, ಈ ರೀತಿ ಕದ್ದು ಮುಚ್ಚಿ ಅಲ್ಲ. ಹೊರಗಿನ ದಾಳಿಯ ಬಗೆಗೆ ಸತರ್ಕರಾಗಿದ್ದರಾಯಿತು.
ಹಾಗಾಗಿ ಭಯೋತ್ಪಾದನೆಯನ್ನು ಮಟ್ಟಹಾಕಬೇಕೆಂದಾದರೆ ಮೊದಲು ನಮ್ಮಲ್ಲಿ ಇರಬೇಕಾದದ್ದು ನಿರ್ಭಯತ್ವ ಮತ್ತು ನಮ್ಮವರ ಮೇಲಿನ ನಂಬಿಕೆ. ಎದುರಾಳಿ ದಾಳಿ ಮಾಡಿಯಾನು ಅನ್ನುತ್ತಾ ನಾವೇ ಏಕೆ ಕಲ್ಪಿಸಿ ಹೆದರಿಕೊಳ್ಳಬೇಕು, ಆಕ್ರಮಣದ ಊಹೆ ಇದ್ದರೆ ಪ್ರತ್ಯಾಕ್ರಮಣಕ್ಕೆ ಸಿದ್ಧರಾಗೋಣ. ನಾವು ಹೆದರಿಸುವವರಾಗಬೇಕೇ ಹೊರತು ಹೆದರುವಂತವರಾಗಕೂಡದು ಅಲ್ವಾ. ನಾವು ಹೆದರಿಕೊಂಡಿದ್ದಾನೆ ಅನ್ನೋ ಒಂದು ಸಣ್ಣ ಕುರುಹು ಸಿಕ್ಕರೂ ಸಾಕು ಶತ್ರುವಿನ ಬಲ ಮತ್ತು ಆತ್ಮವಿಶ್ವಾಸ ನೂರ್ಮಡಿ ಹಿಗ್ಗುತ್ತದೆ. ಇದಕ್ಕೆ ಅವಕಾಶ ಕೊಟ್ಟಲ್ಲಿ ನಮಗೆ ಸೋಲು ಕಟ್ಟಿಟ್ಟ ಬುತ್ತಿ. ಎಲ್ಲಿಯವರೆಗೆ ನಾವು ಈ ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ 26/11 ರಂಥಾ ಘಟನೆಗಳು ಮರುಕಳಿಸುತ್ತಾನೆ ಇರುತ್ತೆ...
ಈ ಘಟನೆಯಲ್ಲಿ ಜೀವತೆತ್ತ ಎಲ್ಲರ ಆತ್ಮಕ್ಕೆ ಶಾಂತಿ ಸಿಗೋದು ಇಂಥಾ ದುರ್ಘಟನೆಗಳು ಮರುಕಳಿಸದಿದ್ದಾಗ ಮಾತ್ರ ಅನ್ನೋದು ನನ್ನ ಅಭಿಪ್ರಾಯ... ನಿಮ್ಮದು....?????
26/11 ರಂದು ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸುತ್ತಾ... ತಾಯಿ ಭಾರತಿಯ ರಕ್ಷಣೆಗೆ ನಾನು ಸದಾ ಸಿದ್ಧ ಅನ್ನುವ ಪ್ರತಿಜ್ಞೆಗೈಯುತ್ತೇನೆ....
No comments:
Post a Comment