Monday 2 November 2015

ಮದನ ಲಾಲ್ ಧಿಂಗ್ರ



"ನಾನು ಬ್ರಿಟಿಷರ ರಕ್ತ ಹರಿಸಲು ಯತ್ನಿಸಿದ್ದು ನಿಜ. ದೇಶಭಕ್ತ ಭಾರತೀಯ ಯುವಕರನ್ನು ಬ್ರಿಟಿಷರು ಹಿಂಸಿಸುತ್ತಿರುವುದರ ವಿರುದ್ಧ ಸಣ್ಣ ಸೇಡು. ಇದಕ್ಕೆ ನಾನೇ ಹೊಣೆ.
ನಮ್ಮ ದೇಶ ಪರಕೀಯರ ಕೈಯಲ್ಲಿದೆ. ಎಡೆಬಿಡದೆ ಹೋರಾಡುತ್ತಿದೆ, ನಮ್ಮ ಬಳಿ ಶಸ್ತ್ರಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ, ಬಂದೂಕು ಇಟ್ಟುಕೊಳ್ಳಲು ಬಿಟ್ಟಿಲ್ಲ. ಆದುದರಿಂದ ನಾನು ಪಿಸ್ತೂಲಿನಿಂದ ಹಲ್ಲೆ ನಡೆಸಬೇಕಾಯಿತು.
ನಾನು ಹಿಂದು. ನನ್ನ ದೇಶಕ್ಕೆ ಅಪಮಾನವಾದರೆ ಅದು ನಮ್ಮ ದೇವರಿಗೆ ಅಪಮಾನವಾದಂತೆ ಎಂದು ನನ್ನ ಭಾವನೆ. ನಾನು ಬುದ್ಧಿವಂತನಲ್ಲ, ನಾನು ಬಲಶಾಲಿಯಲ್ಲ. ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಬಲ್ಲೆ? ಆದುದರಿಂದ ನನ್ನ ರಕ್ತವನ್ನೇ ನನ್ನ ಮಾತೃಭೂಮಿಗೆ ಅರ್ಪಿಸಿದ್ದೇನೆ. ಭಾರತಮಾತೆಯ ಕೆಲಸವೆಂದರೆ ಶ್ರೀರಾಮನ ಕೆಲಸ; ಆಕೆಯ ಸೇವೆ ಶ್ರೀ ಕೃಷ್ಣನ ಸೇವೆ. ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು, ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತೆ ಆಗಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ. ವಂದೇ ಮಾತರಂ"
ಸಿನಿಮಾದ ಡೈಲಾಗುಗಳು ನೆನಪಿರಬಹುದೇ ವಿನಹಾ ಈ ಮಾತುಗಳು ಯಾರದ್ದು ಅನ್ನುವುದು ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.. ಕುತ್ತಿಗೆಯ ಬಳಿ ನೇಣು ಹಗ್ಗ ಸುಳಿದಾಡತೊಡಗಿದಾಗ ನಗು ನಗುತಾ ಹೇಳಿದ ಮಾತಿದು. ಹೇಳಿದಾತ ಭಾರತ ಮಾತೆಯ ವೀರ ಪುತ್ರ " ಮದನ್ ಲಾಲ್ ಧಿಂಗ್ರಾ"
ಯಾರಿಗೂ ಕಲ್ಪಿಸಿಕೊಳ್ಲಲಿಕ್ಕೂ ಸಾಧ್ಯವಿಲ್ಲ ಒಳ್ಳೆಯು ಉಡುಪು ಹಾಕಿಕೊಂಡು ಸ್ನೋ, ಪೌಡರು ಹಾಕಿಕೊಂಡು ಖಡಕ್ ಇಸ್ತ್ರಿ ಮಾಡಿರೋ ಬಟ್ಟೆ ಹಾಕಿಕೊಂಡು ಸಂತೋಷ ಕೂಟಗಳಿಗೆ ಹೋಗುವುದನ್ನೇ... ಜೀವನ, ಅಂದು ಕೊಂಡ ಆಗರ್ಭ ಶ್ರೀಮಂತನ ಮಗನೋರ್ವನ ಬಾಯಲ್ಲಿ ಇಂತಹಾ ಮಾತುಗಳು ಬಂದಿತ್ತೇ...
ಧಿಂಗ್ರಾ ಹುಟ್ಟಿದ್ದು ಪಂಜಾಬಿನ ಅಮೃತಸರದಲ್ಲಿ ಅವನ ತಂದೆ ದೊಡ್ದ ಡಾಕ್ಟರ್...ಹಣದಿಂದ ತಮ್ಮ ಖಜಾನೆಯನ್ನು ತುಂಬಿಸಿಬಿಟ್ಟಿದ್ದರು.. ಆದರೂ ಧಿಂಗ್ರಾ ಸ್ವಾಭಿಮಾನಿ.. ತಾನೆ ದುಡಿದು ತನ್ನ ಹಣದಿಂದಲೇ ಇಂಗ್ಲೆಂಡಿಗೆ ಹೋಗಿ ಇಂಜಿನಿಯರ್ ಆಗೋ ಕನಸು ಕಂಡು ಅದರಂತೆ ಇಂಗ್ಲೆಂಡಿಗೆ ತೆರಳಿದ್ದ...ಅದುವರೆಗೂ ದೇಶಪ್ರೇಮದ ಗಂಧಗಾಳಿ ಇಲ್ಲದ ಶೋಕಿ ವ್ಯಕ್ತಿಯಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದವರು " ವಿನಾಯಕ ದಾಮೋದರ ಸಾವರ್ಕರ್".
ಸಾವರ್ಕರರ ಮಾತುಗಳಿಂದ ಪ್ರಭಾವಿತನಾದ ಧಿಂಗ್ರ ಒಬ್ಬ ಅಪ್ಪಟ ದೇಶಭಕ್ತ ಕ್ರಾಂತಿಕಾರಿಯಾಗಿ ಬದಲಾಗಿ ಬಿಟ್ಟ. ಆದರೂ ಕೆಲವು ಗೆಳೆಯರು ನಿನ್ನಿಂದ ಏನೂ ಮಾಡುವುದಕ್ಕಾಗೋದಿಲ್ಲ ನೀನು ಶೋಕಿ ಮಾಡುವುದಕ್ಕಷ್ಟೇ ಸರಿ ಎಂದು ಇವನ ರೋಷವನ್ನ ಕೆಣಕುತ್ತಿದ್ದರಂತೆ ಅಂತಹಾ ಸಂಧರ್ಭದಲ್ಲಿ ಒಮ್ಮೆ ಇಡಿಯ ದೊಡ್ದ ಸೂಜಿಯನ್ನ ತನ್ನ ಕೈಯೊಳಗೆ ಇನ್ನೊಬ್ಬನಿಂದ ಚುಚ್ಚಿಸಿಕೊಂಡು ಬಿಟ್ಟಿದ್ದನಂತೆ ಈ ರೀತಿ ಚುಚ್ಚುತ್ತಿದ್ದಾಗಲೂ ಸಮಚಿತ್ತನಾಗೇ ನಿಂತಿದ್ದನಂತೆ ಈ ಧಿಂಗ್ರಾ..
ಅದೊಂದು ದಿನ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಮೇಲಿನ ದೌರ್ಜನ್ಯ ಕಂಡು ಸೇಡು ತೀರಿಸುವುದಕ್ಕಾಗಿ " ಸರ್ ವಿಲಿಯಂ ಕರ್ಜನ್ ವಾಯ್ ಲಿ " ಎಂಬ ಧೂರ್ತ ಬ್ರಿಟಿಷ್ ಅಧಿಕಾರಿಯನ್ನ ದಿಟ್ಟೆದೆಯಿಂದ ಗುಂಡಿಟ್ಟು ಕೊಂದು ಬಿಡುತ್ತಾನೆ ಈ ಧಿಂಗ್ರಾ, ಈ ಘಟನೆಯ ಬಳಿಕ ಪೋಲೀಸರು ಆತನನ್ನ ಬಂಧಿಸುತ್ತಾರೆ. ವಿಚಾರಣೆಯ ಹೊತ್ತಲ್ಲಿ ಅವ ಬ್ರಿಟಿಷರಿಗೆ ಹೇಳಿದ ಮಾತಾದರೂ ಎಂತಾದ್ದು... " ಹೇಗೆ ಜರ್ಮನ್ನರಿಗೆ ಇಂಗ್ಲೆಂಡನ್ನು ಆಕ್ರಮಿಸಲು ಅಧಿಕಾರವಿಲ್ಲವೋ ಹಾಗೆಯೇ ಭಾರತವನ್ನು ಆಕ್ರಮಿಸುವ ಅಧಿಕಾರ ಬ್ರಿಟಿಷರಿಗೂ ಇಲ್ಲ, ನಮ್ಮ ಪವಿತ್ರ ಭೂಮಿಯನ್ನು ಅಪವಿತ್ರಗೊಳಿಸುತ್ತಿರುವ ಆಂಗ್ಲರನ್ನು ಸಂಹರಿಸುವುದೇ ನ್ಯಾಯಸಮ್ಮತವಾಗಿದೆ.. ನನಗೆ ಮರಣದಂಡನೆ ವಿಧಿಸಿ ಅದೇ ನನ್ನ ಆಸೆ... ಅದರಿಂದ ನನ್ನ ದೇಶಭಾಂಧವರ ಸೇಡಿನ ಕಿಚ್ಚು ಹೆಚ್ಚು ಉಗ್ರವಾಗುತ್ತದೆ"
ಇಂತಹಾ ಮಹಾನ್ ದೇಶಭಕ್ತನ ಬಲಿದಾನ ವಾದದ್ದು 1909 ಆಗಸ್ಟ್ 17... ಹಣದ ದರ್ಪದಿಂದ ಶೋಕಿ ಮಾಡುತ್ತಿದ್ದ ವ್ಯಕ್ತಿ ತನ್ನ ತಾಯಿ ನಾಡಿಗಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡುತ್ತಾನೆಂದರೆ ಅದು ಅಧ್ಬುತ ಬದಲಾವಣೆ ತಾನೆ ... ಇವನಲ್ಲಿ ಆದ ಬದಲಾವಣೆ ಪ್ರಸ್ತುತ ಯುವಜನತೆಯಲ್ಲಿ ( ಪೋಷಕರು ದುಡಿದ ದುಡ್ಡಿನಲ್ಲಿ ಮಜಾ ಉಡಿಯಾಸೋ ಯುವಜನತೆ... ಪಬ್ , ಲೇಟ್ ನೈಟ್ ಪಾರ್ಟಿ ಅಂತೆಲ್ಲಾ ಬೆಳಗಿನವರೆಗೂ ಕುಡಿದು ಕುಣಿಯೋ ಯುವಜನತೆ..) ಆದರೆ... ಭಾರತ ಮಾತೆಗೆ ಧಿಂಗ್ರಾನನ್ನು ಮತ್ತೆ ಹೆತ್ತ ಖುಷಿ ಸಿಗಬಹುದಲ್ವಾ...
ದೇಶ್ ಭಕ್ತ್ ಮದನ ಲಾಲ್ ಧಿಂಗ್ರ ಅಮರ್ ರಹೇ

2 comments: