Tuesday 3 November 2015

ಶ್ರೀ ರಾಮ ಮಂದಿರ, ಬರಿಯ ಮಂದಿರವಲ್ಲ ಅದು ದೇಶಭಕ್ತಿಯ ಸಂಕೇತ...



ಕಾಲ ಕಾಲಕ್ಕೆ ಹಣದ ಟಾನಿಕ್ ಕೊಡೋ ಕಾಣದ " ಕೈ " ಗಳು.... ಮತ್ತೆ ಮಾಧ್ಯಮಗಳಿಗೊಂದು ಹೊಸ ವಿಷಯ ಕೊಟ್ಟು ಬಿಟ್ಟಿದ್ದಾರೆ ಅಂತನಿಸುತ್ತದೆ. ಅದೇ ಅಯೋಧ್ಯೆಯ ಶ್ರೀರಾಮ ಮಂದಿರ...... ವಿಚಿತ್ರ ಅಂದ್ರೆ... ಈ ವಿಷಯವಾಗಿ ಬಹಳಷ್ಟು ಹಿಂದೂಗಳೇ ಮುಸ್ಲಿಂರಂತೆ ವರ್ತಿಸುತ್ತಿದ್ದಾರೆ ಕೂಡ.... ಆದರೆ ಇವರಿಗ್ಯಾರಿಗೂ ಈ ವಿವಾದ ಬಗೆಹರಿಯೋದೇ ಬೇಕಾಗಿಲ್ಲ... ಮತ್ತಷ್ಟು ಮತ್ತಷ್ಟು ಚರ್ಚಿಸಿ ಹಿಂದೂ ಮುಸ್ಲಿಮರ ನಡುವೆ ಅಂತರ ಕಾಯ್ದಿರಿಸಿಕೊಳ್ಳುವುದೇ ಇವರ ಅಜೆಂಡಾ.... ಈ ಚುನಾವಣಾ ಸಂಧರ್ಭದಲ್ಲಂತೂ ಹೇಳೋದೇ ಬೇಡ ಬಿಡಿ.... ಮೋದಿ ಅಲೆಗೆ ಸಿಕ್ಕಿ ಧೂಳೀಪಟವಾಗುತ್ತಿರೋ ವಿರೋಧಿಗಳಿಗೆ ಹುಲ್ಲು ಕಡ್ಡಿಯೊಂದು ಸಿಕ್ಕ ಹಾಗಿದೆ. ಬೇರೇನೂ ಬೇಡ ಈ ವಿಷಯದ ಕುರಿತಾಗಿ ನ್ಯಾಯಯುತವಾಗಿ ಯೋಚಿಸಿದರಷ್ಟೇ ಸಾಕು ಈ ಸಮಸ್ಯೆಯನ್ನ ಪರಿಹರಿಸಬಹುದು. ಆದರೆ ಕಾಂಗ್ರೆಸ್ ಗೆ ಇದು ಬೇಕಾಗಿಲ್ಲ. ಈ ಮಂದಿರ ಮಸೀದಿ ಗಲಾಟೆ ಇರುವವರೆಗೆ ಅವರ ಕುರ್ಚಿ ಸುಭದ್ರ ತಾನೆ... ವೋಟ್ ಬ್ಯಾಂಕಿನ ಮೂಲ ಆಧಾರ ಸ್ಥಂಬವೇ ಇದಲ್ವಾ...
ಇಲ್ಲಿ ಮೊದಲ ಪ್ರಶ್ನೆ ಉದ್ಭವವಾಗೋದು... ಅಯೋಧ್ಯೆಯಲ್ಲಿ ಉರುಳಿಸಲ್ಪಟ್ಟ ಮಸೀದಿ... ಬಾಬ್ರಿ ಮಸೀದಿ ಏನದು....? ನಮಗೆ ನಿಮಗೆಲ್ಲಾ ಗೊತ್ತಿರುವಂತೆ ಇದು ಬಾಬರ್ ಗಾಗಿ ಕಟ್ಟಿಸಿರೋ ಮಸೀದಿ. ಸರಿ ಹಾಗಿದ್ದರೆ ಈ ಬಾಬರ್ ಯಾರು ...? ಇತಿಹಾಸವನ್ನಿಣುಕಿದರೆ ನಮಗೆ ಗೊತ್ತಾಗೋದು... ಬಾಬರ್ ಅನ್ನುವಾತ ತೈಮೂರ್ ನಲ್ಲಿ ಜನಿಸಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದಾತ. ಈತನೇ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರವನ್ನ ಧ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿಸಿದ. ಈಗೇನು ಎಲ್ಲರೂ ಮಸೀದಿ ಒಡೆದರು ಮಸೀದಿ ಒಡೆದರು ಅನ್ನುತ್ತಾರಲ್ಲ.... ಆ ಮಸೀದಿಯೂ ಒಂದು ಮಂದಿರವನ್ನ ಒಡೆದು ಮಾಡಿದ್ದೇ ತಾನೇ.... ಯಾಕೆ ಮಾಧ್ಯಮದವರಾಗಲೀ ಅಥವಾ ಸೆಕ್ಯುಲರ್ ಗಳಾಗಲೀ ಈ ಆಂಶದ ಮೇಲೆ ಬೆಳಕು ಚೆಲ್ಲಲು ಇಷ್ಟಪಡುವುದಿಲ್ಲ...??
ಒಬ್ಬನ ಜಾಗದಲ್ಲಿ ಇನ್ನೊಬ್ಬ ಅಕ್ರಮವಾಗಿ ಬಂದು ನೆಲೆಸಿದ್ದನ್ನು ಖಂಡಿಸಿ... ಯಾರು ಅಕ್ರಮವಾಗಿ ಬಂದಿದ್ದನೋ ಅವನನ್ನ ಎದ್ದೇಳೋಕೆ ಹೇಳಿದರೆ ಅದು ಅನ್ಯಾಯ ಹೇಗಾದೀತು ಸ್ವಾಮೀ.... ಅದೂ ಆತನ ಬಳಿ ಸರಿಯಾದ ದಾಖಲೆಗಳಿದ್ದರಂತೂ ಯಾವುದೇ ಕೋರ್ಟ್ ಆಗಲಿ ಮೂಲವಾಗಿ ಯಾರಿಗೆ ಜಾಗ ಯಾರಿಗೆ ಸೇರಬೇಕೋ ಆತನಿಗೇ ಆ ಭೂಮಿಯನ್ನ ಬಿಟ್ಟು ಕೊಡುತ್ತದೆ. ಆದರೆ ಇಲ್ಲಿ ಮಾತ್ರ ಯಾಕೆ ಹೀಗೆ.... ಜಾತ್ಯಾತೀತತೆ ಅಂದರೆ ಇದೇ ಅಲ್ವಾ.... ಯಾರಿಗೆ ದಕ್ಕಬೇಕೋ ಅವನಿಗೆ ಜಾತಿ ಭೇದಗಳನ್ನ ಮೀರಿ ನ್ಯಾಯ ಒದಗಿಸೋದು.... ಕೋರ್ಟಿನಲ್ಲಿ ಇದು ಸಾಬೀತಾಗಿದೆ... ಅಯೋಧ್ಯೆಯಲ್ಲಿದ್ದದ್ದು ಶ್ರೀರಾಮ ಮಂದಿರ ಎಂದು. ಬೇಕಿದ್ದರೆ ಯಾರು ಬೇಕಿದ್ದರೂ ಅಯೋಧ್ಯೆಯ ಉತ್ಖನನದ ವಿವರ ನೋಡಬಹುದು.. ಹಾಗಾಗಿ ಇಲ್ಲಿ ಚರ್ಚಿಸುವಂಥಾದ್ದೇನಿದೆ...??? ಅಥವಾ ಮಾಧ್ಯಮದ ಚರ್ಚೆಗಳಲ್ಲಿ ಉತ್ಖನನದ ವಿಷಯ ಯಾಕೆ ಬರೋಲ್ಲ..?
ಹಾಗಾದರೆ ಇಲ್ಲಿ ನ್ಯಾಯಕ್ಕೆ ಬೆಲೆಯೇ ಇಲ್ಲವೇ....? ಇಲ್ಲಿ ಸಮಸ್ಯೆ ಪ್ರಾರ್ಥನಾ ಮಂದಿರದ್ದಲ್ಲ ಪ್ರತಿಷ್ಠೆಯದ್ದು.... ಹಿಂದೂಗಳಿಗೆ ಬಿಟ್ಟು ಕೊಟ್ಟರೆ ಮುಸ್ಲಿಮರಿಗೆ ಅಪಜಯವಾದಂತೆ ಅನ್ನೋ ತಪ್ಪು ಕಲ್ಪನೆ... ನಿಜಕ್ಕೂ ಒಂದು ವೇಳೆ ಅಲ್ಲಿ ಮಂದಿರಕ್ಕೆ ಅವಕಾಶ ಮಾಡಿಕೊಟ್ಟರೆ ಮುಸ್ಲಿಂ ಮತ್ತು ಹಿಂದೂಗಳಲ್ಲಿ ಭಾಂಧವ್ಯತೆ ಹೆಚ್ಚುತ್ತದೆ. ಮುಸ್ಲಿಮರ ಮೇಲೆ ಗೌರವ ಭಾವನೆ ಇಮ್ಮಡಿಯಾದೀತೇ ಹೊರತು ಜಯದ ದರ್ಪ ತಲೆಗೇರೋಲ್ಲ.... ಯಾಕೆಂದರೆ ಜನರಿಗೆ ಶ್ರೀರಾಮನ ಪೂಜೆಯಲ್ಲಿ ಮನಸ್ಸಿದೆಯೇ ಹೊರತು ಇನ್ನೊಂದು ಧರ್ಮವನ್ನ ತುಳಿಯೋ ಯೋಚನೆಯಿಲ್ಲ... ಮೊದಲಿಂದಲೂ ಇಲ್ಲಿ ಭಕ್ತಿ ಮಾರ್ಗವೇ ಜನರ ಮೊದಲ ಆಯ್ಕೆ...
ಮುಸ್ಲಿಮರ ದೃಷ್ಟಿಯಿಂದ ನೋಡಿದಾಗಲೂ ಅಲ್ಲಿನ ಮಸೀದಿ ಅಷ್ಟೊಂದು ಮಹತ್ವದ್ದಲ್ಲ... ಯಾಕೆಂದರೆ ಭಾರತದಲ್ಲಿ ಮುಸ್ಲಿಂ ಸಂತರ ಹೆಸರಿನಲ್ಲಿ ಹಲವಾರು ಮಸೀದಿಗಳಿವೆಯಾದರೂ ರಾಜರ ಹೆಸರಿನಲ್ಲಿಲ್ಲ. ಒಂದು ವೇಳೆ ಮುಸ್ಲಿಮರ ನಿಷ್ಠೆ ಭಾರತಕ್ಕಿದ್ದರೆ ಅವರಿಗೂ ಅದೊಂದು ದರೋಡೆಕೋರನದೇ ಕಟ್ಟಡವಾದೀತೇ ಹೊರತು ಪರಮಾತ್ಮನ ಪ್ರಾರ್ಥನಾ ಮಂದಿರವಲ್ಲ. ನನಗೆ ಗೊತ್ತಿದ್ದಂತೆ ಮುಸ್ಲಿಮರು ಅಲ್ಲಾಹುವನ್ನ ನಂಬುತ್ತಾರೆಯೇ ಹೊರತು ದರೋಡೆಕೋರರನ್ನಲ್ಲ. ಕನಿಷ್ಠ ಮುಸ್ಲಿಂ ಭಾಂಧವರಿಗೆ ಬಾಬರ್ ಇಲ್ಲಿಯವನೇ ಅನ್ನೋ ಅಭಿಮಾನವನ್ನು ಕೂಡ ಇಡುವಂತಿಲ್ಲ.. ಯಾಕೆಂದರೆ ಬಾಬರ್ ಈ ದೇಶದಲ್ಲೇ ಹುಟ್ಟಿ ಬೆಳೆದವನಲ್ಲ. ನಾಳೆ ಯಾರೋ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಗೂ ಇಲ್ಲೊಂದು ಮಸೀದಿ ಕಟ್ಟೋಣ ಅಂದರೆ ಅದು ಆಗತಕ್ಕ ಮಾತೇ...? ಅವರಂತೆಯೇ ದರೋಡೆಕೋರನಾಗಿರುವ ಬಾಬರ್ ಗೆ ಮಾತ್ರ ಯಾಕೆ ಮಸೀದಿ... ಹಾಗಿದ್ದು ಯಾಕೆ ಇಷ್ಟೊಂದು ಹಠ...? ಯಾಕೆ ಹಿಂದೂಗಳ ಭಾವನೆಗಳಿಗೆ ಬೆಲೆಕೊಡಬೇಕೆನಿಸುತ್ತಿಲ್ಲ... ಬಹುಶ ಅವರನ್ನ ಹಾಗೆ ಮಾಡದಂತೆ ತಡೆಯುತ್ತಿರುವುದು ಈ ರಾಜಕೀಯ ಪುಢಾರಿಗಳೇ...
ಮುಸ್ಲಿಮರು ಭಾರತಕ್ಕೆ ಬಂದಾಗ ಅವರನ್ನ ಅವರ ಧರ್ಮದಲ್ಲೇ ಇರಲು ಬಿಟ್ಟು ಕೊಟ್ಟ ಶ್ರೇಷ್ಠ ಸನಾತನ ಧರ್ಮಿಗಳ ಆರಾಧ್ಯನಿಗೆ ಅವನ ನೆಲದಲ್ಲೇ ಮಂದಿರ ಕಟ್ಟಲು ಬಿಡದಿರುವುದು ಯಾವ ರೀತಿಯ ನ್ಯಾಯ...? ಶಾಂತಿ ಸಾಮರಸ್ಯಗಳು ಚಪ್ಪಾಳೆಯಂತೆ ಎರಡೂ ಕೈಗಳು ಬೇಕು.. ಒಂದೇ ಕೈಗಳಿಂದ ಚಪ್ಪಾಳೆ ಸಾಧ್ಯವಿಲ್ಲ. ನಿಜಕ್ಕೂ ಅಲ್ಲಿನ ಹಕ್ಕು ಅವರದೇ ಅಂತಿದ್ದರೆ ಖಂಡಿತಾ ಬಿಟ್ಟುಕೊಡುವ ಮನಸ್ಥಿತಿ ಹಿಂದೂಗಳಿಗಿದೆ. ಆದರೆ ಸಾಕ್ಷ್ಯಾಧಾರಗಳ್ಯಾವುದೂ ಮುಸ್ಲಿಮರ ಜೊತೆಯಲ್ಲಿಲ್ಲ. ಅದಾಗಿಯೂ ಈ ದೇಶದ ಮೇಲೆ ದಾಳಿ ಮಾಡಿ ಇಲ್ಲಿನ ಮಂದಿರವನ್ನ ಧ್ವಂಸ ಮಾಡಿದವನ ಹೆಸರಿನಲ್ಲಿ ಮಸೀದಿ ಕಟ್ಟಿಕೊಳ್ಳುವುದು ದೇಶದ್ರೋಹವಲ್ಲದೇ ಮತ್ತಿನ್ನೇನು....? ಇಂತಹಾ ದೇಶದ್ರೋಹದ ಪರವಾಗಿ ನಿಲ್ಲುವ ಮಾಧ್ಯಮದವರೂ ದೇಶದ್ರೋಹಿಗಳೇ ತಾನೇ...
ಲಂಕೆಯಂತಹಾ ಸ್ವರ್ಣಾನಗರಿಯನ್ನ ಗೆದ್ದ ಶ್ರೀರಾಮ ಅದನ್ನ ವಿಭೀಷಣನಿಗೆ ಕೊಟ್ಟು ಬರಲು ಕಾರಣ ಅವನ ಮಾತೃಭೂಮಿಯ ಪ್ರೇಮ...
ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||
ಅರ್ಥಾತ್, ಲಕ್ಷ್ಮಣ, ಬಂಗಾರದಿಂದ ನಿರ್ಮಿತವಾಗಿದ್ದರೂ ಲಂಕೆ ನನಗೆ ಇಷ್ಟವಾಗುವುದಿಲ್ಲ, ಯಾಕೆಂದರೆ ಜನನೀ ಮತ್ತು ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಶ್ರೇಷ್ಠವಾದವು.
ತನ್ನ ಮಾತೃಭೂಮಿಯೇ ಶ್ರೇಷ್ಠ ಅಂತ ಹೇಳಿದ ಶ್ರೀರಾಮನಿಗೆ ಅವನ ಊರಿನಲ್ಲೇ ಒಂದು ಮಂದಿರ ಕಟ್ಟಲು ಸಾಧ್ಯವಾಗದಷ್ಟು ಭಾರತೀಯರು ಅಸಮರ್ಥರೇ...? ಯಾವ ಧರ್ಮದವನೇ ಆಗಲಿ ಆತ ಬಯಸೋದು ತನ್ನ ರಾಜ್ಯ ರಾಮರಾಜ್ಯವಾಗಬೇಕು ಅಂತ.... ರಾಮನನ್ನ ಒಬ್ಬ ದೇವಪುರುಷ ಅನ್ನೋದನ್ನ ಬದಿಗಿಟ್ಟು ಯೋಚಿಸಿದರೂ ಶ್ರೀರಾಮನದು ಸರ್ವ ಧರ್ಮೀಯರಿಗೂ ಮಾನ್ಯವಾಗುವಂಥಾ ವ್ಯಕ್ತಿತ್ವ.... ಅಂಥ ಮಹಾಪುರುಷ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಬೇಕಲ್ವಾ...
ನಾವು ನಾವಾಗೇ ನಮ್ಮ ದೇಶದ ಗೌರವವನ್ನ ಇಡಿಯ ಜಗತ್ತಿನ ಎದುರು ಮಣ್ಣು ಪಾಲು ಮಾಡಹೊರಟಿದ್ದೇವಲ್ಲಾ... ಎಂಥಾ ದೌರ್ಭಾಗ್ಯ ಇದು... ಆದರೆ ಮತ್ತೆ ಹೊಸ ಕನಸು ಚಿಗುರಿದೆ.... ಮೋದಿ ತಮ್ಮ ಪ್ರಾಣಾಳಿಕೆಯಲ್ಲಿ ಸಂವಿಧಾನಾತ್ಮಕ ರೀತಿಯಲ್ಲಿ ರಾಮ ಮಂದಿರದ ನಿರ್ಮಾಣದ ಮಾತೆತ್ತಿದ್ದಾರೆ. ಇಲ್ಲಿ ಮಾಧ್ಯಮಗಳು ಮರೆಮಾಚುವ ಇನ್ನೊಂದು ವಿಷಯ ಸಂವಿಧಾನಾತ್ಮಕವಾಗಿ ಅನ್ನೋ ಪದ.. ಅಂದರೆ ಎಲ್ಲರನ್ನೂ ಸೇರಿಸಿಕೊಂಡು ರಾಮಮಂದಿರದ ನಿರ್ಮಾನದ ಕನಸು ಕಾಣುತ್ತಿದ್ದಾರೆ... ಈ ಬಾರಿಯಾದರೂ ಈ ಕನಸು ನನಸಾಗಲಿ... ಧರ್ಮ ಬೇಧ ಮರೆತು ಈ ಪುಣ್ಯ ಕಾರ್ಯದಲ್ಲಿ ಕರಜೋಡಿಸೋಣ. ಶ್ರೀರಾಮ ರಾಷ್ಟ್ರಭಕ್ತಿಯ ಸಂಕೇತ.... ರಾಷ್ಟ್ರಪ್ರೇಮಿಗಳೆಲ್ಲಾ ಒಂದಾಗಬೇಕಿದೆ... ಈ ಜಾತಿ ರಾಜಕೀಯಕ್ಕಾಗಿ ಧರ್ಮಗಳ ನಡುವೆ ಕಿಚ್ಚು ಹಚ್ಚುವವರನ್ನ ಒದ್ದೋಡಿಸಬೇಕಾಗಿದೆ...
ಸಮಸ್ತ ಭಾರತೀಯರೆಲ್ಲರಿಗೂ ರಾಮ ನವಮಿಯ ಹಾರ್ದಿಕ ಶುಭಾಶಯಗಳು

No comments:

Post a Comment