Tuesday 3 November 2015

ವೇದವ್ಯಾಸರ ಕರ್ಣ - ಒಂದು ವಿಶ್ಲೇಷಣೆ - ಭಾಗ ೧



ಒಂದಷ್ಟು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಕಣ್ಣಾಡಿಸುವಾಗ ಮಹಾಭಾರತದ " ಕರ್ಣ " ನ ಬಗ್ಗೆ ಕವಿತೆ ನೋಡಿದೆ.... ಕವಿತೆಯೇನೋ ಚೆನ್ನಾಗಿ ಮೂಡಿತ್ತು... ಆದರೆ ನನಗೆ ಕವಿತೆಯಲ್ಲಿನ ಕರ್ಣನ ವರ್ಣನೆ ಹಿಡಿಸಿರಲಿಲ್ಲ.... ಅಲ್ಲೇ ಒಂದಷ್ಟು ವಾದ ವಿವಾದಗಳೂ ಆಯಿತು.. ಇವತ್ತು ಮತ್ತೆ ಇನ್ನೊಬ್ಬರ ಮಾತುಗಳೂ ಕೂಡ ಕರ್ಣ ನನ್ನ ಅಟ್ಟಕ್ಕೇರಿಸಿಬಿಟ್ಟಿದ್ದರು... ಮೊದಲ ನೋಟಕ್ಕೆ ಎಲ್ಲರಿಗೂ ಕರ್ಣ ಎನುವ ಪಾತ್ರ ಪ್ರಿಯವಾಗಿ ಬಿಡುತ್ತದೆ. ನಾನು ಮೊದಲು ಕರ್ಣನ ಬಗ್ಗೆ ಅನುಕಂಪ ಪಟ್ಟಿದ್ದೆ... ಆದರೆ ಮಹಾಭಾರತವನ್ನ ಹೆಚ್ಚು ಹೆಚ್ಚು ಅರಿಯುತ್ತಾ ಹೋದಂತೆ ಸ್ವಯಂ ಮಹಭಾರತದ ರಚನಾಕಾರರಾದ ವೇದವ್ಯಾಸರು ಹೇಳಿರುವಂತೆ ಕರ್ಣ ದುಷ್ಟ ಚತುಷ್ಟಯರಲ್ಲೊಬ್ಬ ಅನ್ನೋದು ಅರಿವಾಗುತ್ತಾ ಹೋಯಿತು...
ಈ ಅರಿವು ಮೂಡಿದ್ದು ವಿದ್ವಾನ್ ಪಾವಗಡ ಪ್ರಕಾಶ ರಾಯರ ಉಪನ್ಯಾಸದಿಂದ ಮತ್ತು ಡಾ.ಕೆ. ಎಸ್. ನಾರಾಯಣಾಚಾರ್ಯರ ಗ್ರಂಥಗಳಿಂದ. ಮತ್ತು ನನ್ನ ಒಂದಷ್ಟು ಸಹೋದ್ಯೋಗಿಗಳ ನಡುವಿನ ಚರ್ಚೆಗಳಿಂದ. ಇವರುಗಳಲ್ಲಿ ಒಬ್ಬರನ್ನೇ ಅನುಸರಿಸುತ್ತಿದ್ದರೆ ನಾನು ಅವರ ಮುಖವಾಣಿ ಆಗಿರುತ್ತಿದ್ದೆನೋ ಏನೋ ಆದರೆ ಇಲ್ಲಿ ಎಲ್ಲರೂ ಕೊಟ್ಟಿರುವ ಸಕಾರಣಗಳನ್ನ ಬಳಸಿಕೊಂಡು ನನ್ನ ವಿವೇಚನೆಯನ್ನೂ ಉಪಯೋಗಿಸಿ ಯಾಕೆ ಆತ ದುಷ್ಟ ಚತುಷ್ಟಯರಲ್ಲೊಬ್ಬ ಅನ್ನೋದನ್ನ ವಿವರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಕರ್ಣ ತನ್ನ ಜನ್ಮದಿಂದಲೇ ಜನರ ಅನುಕಂಪ ಪಡೆಯುತ್ತಾನೆ. ಆತನನ್ನ ಕುಂತಿ ಹುಟ್ಟುತ್ತಲೇ ನದಿಯಲ್ಲಿ ಬಿಟ್ಟು ಬಿಟ್ಟಳು ಅಂತ. ಇದಾದ ಕೂಡಲೇ ಕುಂತಿಯನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಡುತ್ತೇವೆ. ಆದರೆ ಒಮ್ಮೆ ಯೋಚಿಸಿ ಆ ಹೊತ್ತಿಗೆ ಕುಂತಿ ಆತನನ್ನು ಸ್ವೀಕರಿಸೋ ಸ್ಥಿತಿಯಲ್ಲಿದ್ದಳಾ...??? ಬಾಲ್ಯದಲ್ಲಿ ಸಹಜವಾಗಿ ಕಾಡುವ ಕುತೂಹಲದಿಂದ ಆಕೆ ಸೂರ್ಯನನ್ನು ಕರೆದಿದ್ದು ಸಹಜವೇ... ಆದರೆ ಹಠಾತ್ತಾಗಿ ಈ ರೀತಿ ಆದಾಗ ಆಕೆ ಮಗುವನ್ನ ನೀರಿನಲ್ಲಿ ತೇಲಿ ಬಿಟ್ಟಳು ಮತ್ತೂ ಯಾವುದೇ ಹುಡುಗಿಯಾದರೂ ಆ ರೀತಿಯಾಗೇ ಮಾಡುತಿದ್ದರು ಅನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಇದನ್ನೇ ನೆಪವಾಗಿಟ್ಟು ಕರ್ಣನಿಗೆ ತಾಯಿಯಿಂದಲೇ ಮೋಸ ಆಯಿತು ಅನ್ನೋದನ್ನ ನಾವು ಹೇಳಲಾಗುವುದಿಲ್ಲ.... ಕಾರಣ ಅದಿರಥ ಮತ್ತು ರಾಧೆ ಇಬ್ಬರೂ ಇವನ ಮೇಲೆರೆದ ವಾತ್ಸಲ್ಯ ಕಪಟತನದ್ದಲ್ಲವಲ್ಲ.... ಕರ್ಣ ರಾಧೆಯ ಸ್ವಂತ ಮಗನಲ್ಲದಿದ್ದರೂ ಆಕೆ ಮಲತಾಯಿ ಧೋರಣೆ ತೋರಿಸಿಯೇ ಇಲ್ಲ... ಅದೆಂಥಾ ಮಾತೃ ವಾತ್ಸಲ್ಯ ಸಿಕ್ಕಿತು ಅಂತಂದರೆ ಅವನನ್ನ ಜನ ರಾಧೇಯ ಅಂತಾನೂ ಕರೆಯುತ್ತಾರೆ ಹಾಗಿದ್ದರೆ ಮಾತೃ ವಾತ್ಸಲ್ಯದಿಂದ ವಂಚಿತ ಹೇಗಾದ...?
ಯಾರೇ ಆಗಲಿ ಸಣ್ಣಂದಿನಿಂದ ಯಾರು ತನ್ನನ್ನು ತಾಯಿ ಎಂದು ಪರಿಚಯಿಸಿಕೊಂಡು ಪ್ರೀತಿ ಕೊಡುತ್ತಾರೋ ಅವರನ್ನೇ ನಾವು ನಮ್ಮ ತಾಯಿಯೆಂದು ನಂಬುತ್ತೇವೆ. ನಾವೇನೂ ಆಕೆಯನ್ನ ಸಂಶಯದಿಂದ ನೋಡುವುದಿಲ್ಲ ತಾನೆ. ಒಂದು ವೇಳೆ ಆಕೆ ಸರಿಯಾದ ಪ್ರೀತಿ ತೋರಿಸದಿದ್ದರೆ ಮಾತ್ರ ನಮಗೆ ಅಂತಹ ಸಂಶಯ ಬರುತ್ತೆ ಹೌದಲ್ವೇ.... ಇಲ್ಲಿ ಎಡವಟ್ಟು ಏನಾಗೋದಂದರೆ ನೋಡುಗರಿಗೆ ಗೊತ್ತಿದೆ ರಾಧೆ ಆತನ ನಿಜವಾದ ತಾಯಿಯಲ್ಲ ಅಂದು ಆದರೆ ಒಮ್ಮೆ ನೀವೇ ಆತನ ಸ್ಥಾನದಲ್ಲಿ ನಿಂತು ನೋಡಿ... ತಾಯಿ ವಾತ್ಸಲ್ಯದಲ್ಲಿ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಪುಟ್ಟ ಮಗುವಾಗಿದ್ದಾಗಿನಿಂದಲೇ ಕರ್ಣನ ಪಾಲಿಗೆ ರಾಧೆ ತಾಯಿ... ಯಾವ ಗ್ರಂಥದಲ್ಲಿ ಬರೆದಿದ್ದಾರೆ ಆತ ಎಳೆತನದಲ್ಲಿ ಮಾತೃ ವಾತ್ಸಲ್ಯದಿಂದ ವಂಚಿತನಾಗಿದ್ದ ಎಂದು...? ಹಾಗಿದ್ದರೆ ಯಾಕೆ ನಾವ್ಯಾಕೆ ಇಲ್ಲದ ವಿಷಯಕ್ಕೆ ಅನುಕಂಪ ತೋರಿಸೋದು...?
ಎರಡನೆಯದಾಗಿ ಕರ್ಣನಿಗೆ ತನ್ನ ಗುರುಗಳಿಂದ ಅನ್ಯಾಯವಾಯಿತು ಅನ್ನೋ ಮಾತು ಆದರೆ ಎಂಥಾ ವಿಚಿತ್ರ ಕರ್ಣ ಮಾಡಿದ ಮೋಸವ್ಯಾಕೆ ಜನ ಗುರುತಿಸೋದಿಲ್ಲ...? ಪರಶುರಾಮರು ಯಾಕಾಗಿ ಕ್ಷತ್ರಿಯರಿಗೆ ಬಿಲ್ವಿದ್ಯೆ ಕಲಿಸೋದಿಲ್ಲ ಅನ್ನೋದು ಲೋಕಕ್ಕೆ ಗೊತ್ತಿದೆ... ಹಾಗಿದ್ದು ಅವರನ್ನ ವಂಚಿಸಿ ವಿದ್ಯೆ ಪಡೆಯಲು ಹೋಗಿದ್ದು ಯಾರ ತಪ್ಪು....? ಧನುರ್ವಿದ್ಯೆಯ ಕಲಿವ ಆಸೆ ಅಥವಾ ಅತೀವ ಉತ್ಕಟತೆ ಇದ್ದಲ್ಲಿ ಹೇಗೂ ಸಾಧಿಸಬಹುದು ಅನ್ನುವುದಕ್ಕೆ ಏಕಲವ್ಯನೇ ಸಾಕ್ಷಿ. ಯಾಕೆ ಆ ರೀತಿಯಾಗಿ ದ್ರೋಣರಿಂದಲೇ ಕಲಿಯುವ ಮನಸ್ಸು ಮಾಡಲಿಲ್ಲ.... ಇಲ್ಲಿಯೂ ಕರ್ಣನ ಮೇಲೆ ಅನುಕಂಪ ನನಗೆ ಅಕಾರಣ ಎಂದು ಕಾಣಿಸುತ್ತದೆ....ಈಗಿನ ಕಾಲದಲ್ಲಿ ಮೋಸ ಮಾಡಿದಾತನಿಗೆ ಮೋಸ ಆಯಿತೆಂದರೆ ನಾವೆಲ್ಲ ಅತೀವ ಸಂತಸ ಪಡುತ್ತೇವೆ ಆದರೆ ಕರ್ಣನ ಜೀವನದಲ್ಲಿ ಅದೇ ಆದಾಗ ಯಾಕೆ ಅನುಕಂಪ....?
ಇನ್ನು ಸೂತಪುತ್ರ ಅನ್ನುವ ಮಾತು... ದ್ರೌಪದಿಗೆ ಇಷ್ಟವಿಲ್ಲದೇ ಹೋದಾಗ ಆಕೆ ಸೂತಪುತ್ರನನ್ನು ಮದುವೆಯಾಗಲಾರೆ ಎಂದು ಹೇಳಿದ್ದರಲ್ಲಿ ಏನು ತಪ್ಪು....? ಮತ್ತು ಆಗಿನ ಕಾಲಕ್ಕೆ ವರ್ಣ ಪದ್ದತಿಯ ಅನುಷ್ಠಾನ ಇದ್ದಾಗ ಒಬ್ಬ ಕ್ಷತ್ರಿಯ ಕನ್ಯೆ ಶೂದ್ರನನ್ನು ಮದುವೆಯಾಗೋದು ಧಾರ್ಮಿಕ ನಡೆಯಾಗಿರಲಿಲ್ಲ. ಆಕೆ ಆತನ ಹುಟ್ಟಿನ ಕುರಿತಾಗಿ ಹೇಳಿದಳೇ ವಿನಹ ಅವನನ್ನು ಅವಮಾನಿಸಲಿಲ್ಲ. ಅವಮಾನ ಎಂದು ತಿಳಿದುಕೊಂಡಿದ್ದು ಸ್ವಯಂ ಆತನೇ... ಇಲ್ಲಿ ಆಧ್ಯಾತ್ಮಿಕವಾಗಿ ನೋಡೋದಾದರೆ ಯಾವ ಕುಲದಲ್ಲಿ ಹುಟ್ಟುವುದು ಎನ್ನುವುದು ಪೂರ್ವಾರ್ಜಿತ ಕರ್ಮ ಫಲ ಮೇಲೆ ನಿರ್ಭರವಾಗಿದೆ. ಆತನ ಪೂರ್ವ ಜನ್ಮದ ಕರ್ಮ ಫಲದ ಪರಿಣಾಮವಾಗಿ ಸಿಕ್ಕಿದ್ದನ್ನು ಆತ ಅಪಮಾನ ಎಂದು ತಿಳಿಯುವುದು ಅವನ ಅವಿವೇಕತನವನ್ನ ತೋರಿಸುತ್ತದೆ. ಹುಟ್ಟು ಕ್ಷತ್ರಿಯನಿಗೆ ಅವಮಾನ ಸಹಿಸಬೇಕಾಯ್ತು ಅನ್ನೋದು ಕೆಲವರ ವಾದ.... ಆದರೆ ಸನಾತನ ಧರ್ಮದ ಪ್ರಕಾರ ಯಾವುದೇ ಕುಲ ನೀಚ ಅಂತೇನಿಲ್ಲ.... ಯಾಕೆ ವೇದವ್ಯಾಸರು ಕೂಡ ಅದೇ ಕುಲದವರಲ್ವೇ ಅವರಿಗೆಂದಿಗೂ ತಮ್ಮ ಕುಲದ ಬಗ್ಗೆ ಹೇಳಿದಾಗ ಅವಮಾನವಾಗಿಲ್ಲ. ಧರ್ಮದ ಹಾದಿಯಲ್ಲೇ ನಡೆದರಲ್ವಾ..ಆದರೆ ಕರ್ಣನಾದರೋ ಮಾಡಿದ್ದೇನು...? ಶ್ರೀಕೃಷ್ಣನೂ ಗೋಪಾಲಕನಾಗಿ ಶೂದ್ರ ಕುಲದಲ್ಲೇ ಸಂತೋಷವಾಗಿರಲಿಲ್ಲವೇ... ದ್ರೌಪದಿಯ ಭಾವನೆಗೆ ಬೆಲೆ ಕೊಡಲಾಗದಾತ ಹೇಗೆ ತಾನೆ ಉತ್ತಮನಾದಾನು...?
ಇಷ್ಟಾಗಿಯೂ ಆತನ ದೊಡ್ಡ ತಪ್ಪು ದುರ್ಜನರ ಸಂಗ ಮಾಡಿದ್ದು. ಯಾರು ಒಳ್ಳೆಯವರು ಯಾರು ಕೆಟ್ಟವರು ಅನ್ನೋ ವಿವೇಚನೆ ಇದ್ದಾಗಲೂ ಕೆಟ್ಟವರ ಆಯ್ಕೆ ಮಾಡಿದ್ದು ಹೇಗೆ ಸಮರ್ಥನೀಯ...? ಇದೇ ಕುಲದ ಮಾತಿನಿಂದಾಗಿ ಅವನಿಗೆ ಅನ್ಯಾಯವಾಯಿತು ಅನ್ನುವ ಮಾತನ್ನು ಮುಂದಿರಿಸಿ ದುರ್ಯೋಧನ ಇವನಿಗೆ ಆಶ್ರಯ ನೀಡಿದಾಗ ಆತನ ಜೊತೆ ಸೇರಿದ್ದು ಅವನಲ್ಲಿ ಯಾವ ಧರ್ಮ ಇದೆ ಎಂದು..? ಒಂದು ವೇಳೆ ನಾವೇ ಎಂದಿಟ್ಟುಕೊಳ್ಳಿ ದಾವೂದ್ ಬಂದು ನನ್ನ ಕುರಿತಾಗಿ ಸಹಾನುಭೂತಿ ತೋರಿಸಿದರೆ ನಾವವರ ಜೊತೆ ಸೇರುತ್ತೇವೆಯೇ...? ಇಲ್ಲ ತಾನೇ... ಹಾಗಿದ್ದರೆ ತನಗೆ ಸಹಾನುಭೂತಿ ತೋರಿಸಿದ ಮಾತ್ರಕ್ಕೆ ದುರ್ಯೋಧನನ ಜೊತೆ ಸೇರಿದ್ದು ಯಾವ ಧಾರ್ಮಿಕ ನಡೆ...? ಅಲ್ಲಿ ಹೋಗಿ ಅಧರ್ಮಿಯಾದ ರೀತಿ ಯಾರಿಗೂ ಕಾಣಿಸೋದಿಲ್ಲ ಯಾಕೆ ಅನ್ನೋದೇ ಅಚ್ಚರಿಯ ವಿಷಯ..
ಮುಂದುವರಿಯುತ್ತದೆ....

1 comment:

  1. I am a great fan of Mahabharat, and my favorite character is Arjuna and I consider him the best warrior in Mahabharata. Before posting my objections to your article , let me share some more information here. As per Ganguly's English translation of Mahabharat available here https://www.sacred-texts.com/hin/maha/ Drona taught Karna too. But during the training Arjuna excelled every including Karna. Karna had a grudge on Arjuna from those days but he could never better Arjuna.In addition to these Drona didn't teach him usage of Brahmasatra as Drona didnt trust Karna to be capable of handling such a dangerous weapon. Karna went to Parashirama seeking knowledge of Divyastras not for the basic archery training.

    During the Kurukshetra war Karna was defeated by Bhima , Satyaki and Abhimanyu, Arjuna defeats him Virata war , Draupadi swayamwara and 2-3 times in Kurukshetra war.Where as Arjuna was never defeated.

    But I don't think Karna can be blamed for cheating Parashurama. Karna wanted to learn Divyastras and no one Guru was ready to teach him and he had no other option than telling a small lie.
    Also in Draupadi swayamwara Draupadi had all rights to reject Karna if it was just a swayamwara but it was a competition . Challenge was to hit the fish and get the girl. So she should have given a chance to Karna instead of rejecting his rights by his birth.
    The reason for killing Karna, Drona and Bhishma using deception was to finish the war as soon as possible. Krishna new all of them combined could not defeat Arjuna but Pandava armies would be killed. The longer these guys fight more will be the loss on the army and remember Pandavas had a smaller force compared to Kauravas. So to end the war quickly Pandavas had to kill each one of them whenever they got a chance. They were also great warriors who could not be killed easily.
    My few points can write more and more about Mahabharat as i just love. Even though don't get much time I read Mahabharata in whatever form available.
    Such is my love for this epic that I even watch Suryapure Karna in Sony TV:D.
    I read it as a great fictional story with Krishna as master tactician with no Godly attributes attached

    ReplyDelete