ಹತ್ತಾರು ಬಾರಿ ಯೋಚಿಸಿ.... ಮತ್ತೆ ಈ ಮಾತುಗಳನ್ನ ಹೇಳೋದಿಕ್ಕೆ ನಿರ್ಧರಿಸಿದ್ದೇನೆ. ಕೆಲವರಿಗೆ ಮುಜುಗರ ತರಿಸಬಹುದೇನೋ ಅಥವಾ ಇನ್ನುಳಿದವರಿಗೆ ಸಿಟ್ಟು ಬರಬಹುದೇನೋ... ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ.... ಆದರೆ ಇದಕ್ಕೆ ಕಾರಣ ನನ್ನೊಳಗಿನ ಹತಾಶೆ, ಸಿಟ್ಟು... ಅದೂ ನಮ್ಮ ಪ್ರಯತ್ನದ ಹೊರತಾಗಿಗೂ ಎಡವುತ್ತಿರುವವರನ್ನ ಕಂಡಾಗಿನ ಅಸಹನೆ... ಬಹುಶಃ ಇದು ಕೊನೆಯ ಪ್ರಯತ್ನ... ಇನ್ನೇನಿದ್ದರೂ ಹಾಳಾಗಿ ಹೋಗಿ ಅಂತ ಬಿಟ್ಟು ಬಿಡೋದು ಅಷ್ಟೇ... ಮತ್ತೆ ಮತ್ತೆ ಹಿಂದೂ ಹುಡುಗಿಯರು ಈ ಮೋಸದ ಜಾಲಕ್ಕೆ ಬೀಳುತ್ತಿರುವುದನ್ನ ನೋಡಿದಾಗ ಕರುಳು ಚುರುಕ್ ಅನ್ನುತ್ತೆ.... ಯಾಕೆ ಇಷ್ಟೊಂದು ಬೊಬ್ಬಿಟ್ಟರು ಇವರಿಗೆ ಅರ್ಥವಾಗುತ್ತಿಲ್ಲ ಅನ್ನಿಸುತ್ತದೆ. ಇದು ಹೆತ್ತವರ ತಪ್ಪೋ ಅಥವಾ ಮಕ್ಕಳದ್ದೇ ತಪ್ಪೋ... ಅಂತೂ ಬಿಡಿಸಲಾಗದ ಗಂಟಾಗಿ ಹೋಗಿದೆ....
ಕಾಲೇಜು ಜೀವನ ಅಂದ್ರೆ ಅದು ವಿದ್ಯೆಯ ಸಂಪಾದನೆಗಾಗಿ ಇರೋದು.... ಪ್ರೀತಿ ಪ್ರೇಮದ ಸುಳಿಯಲ್ಲಿ ಬಿದ್ದು ನಿಮ್ಮತನವನ್ನ , ನಿಮ್ಮ ಶೀಲವನ್ನ ಕಳೆದುಕೊಳ್ಳುವುದಕ್ಕಾಗಿ ಅಲ್ಲ.... ಇರಲಿ ನಿಜವಾದ ಪ್ರೀತಿಯೇ ಆಯಿತೆನ್ನಿ... ಯಾಕೆ ನಿಮ್ಮಲ್ಲಿ ಸಂಯಮ ಇಲ್ಲ .... ನಿಮ್ಮ ಕನ್ಯತ್ವವನ್ನೇಕೆ ಕುರುಡು ಪ್ರೀತಿಗೆ ಧಾರೆಯೆರೆಯುತ್ತೀರಾ....? ಒಬ್ಬಾತ ಪ್ರೀತಿಯ ಹೆಸರಿನಲ್ಲಿ ನಿಮ್ಮ ಮೈ ಬೇಡಿದಾಗಲೇ ಆತನ ನಿಜಬಣ್ಣ ತಿಳಿದುಕೊಳ್ಳಲಾರಿರಾ....? ಅಥವಾ ಇದು ಆತ ಕೊಡುವ ಗಿಫ್ಟ್ ಗಳಿಗೆ ಋಣ ಸಂದಾಯನಾ...? ನಿಮ್ಮನ್ನ ಹೊತ್ತು ಹೆತ್ತವರು ನಿಮ್ಮ ಭವ್ಯ ಭವಿಷತ್ತಿಗಾಗಿ ಅದೆಷ್ಟು ಕಷ್ಟ ಪಡುತ್ತಾರೆ ಅನ್ನುವುದರ ಕಾಳಜಿ ಇಲ್ಲದೇ ಹದಿಹರೆಯದಲ್ಲೇ ಯಾರೋ ನಿನ್ನೆ ಮೊನ್ನೆ ಪರಿಚಯವಾದವನ ಜೊತೆ ಹಾಸಿಗೆ ಹಂಚಿಕೊಳ್ಲಲು ತಯಾರಾಗುತ್ತೀರಲ್ಲ .... ನಿಮ್ಮೀ ತಪ್ಪಿಗೆ ಬರಿಯ ನಿಮಗಷ್ಟೇ ಶಿಕ್ಷೆ ಆಗುತ್ತೆ ಅಂದು ಕೊಂಡಿದ್ದೀರಾ....? ಇಡಿಯ ನಿಮ್ಮ ಕುಟುಂಬವೇ ನರಕ ಯಾತನೆ ಪಡಬೇಕಾಗುತ್ತೆ.... ನಿಮಗೆಲ್ಲಾದರೂ ಅಕ್ಕ ತಂಗಿಯರಿದ್ದು ಒಳ್ಳೆಯವರಾಗಿದ್ದರೆ ಅವರ ಭವಿಷ್ಯಕ್ಕೂ ಸಂಚಕಾರ... ಇವೆಲ್ಲವನ್ನೂ ಯೋಚಿಸಲಾಗದಷ್ಟು ಎಳೆಗೂಸು ನೀವಲ್ಲ... ಅರಿತುಕೊಳ್ಳಿ.
ಯಾರಾದರೂ ಬುದ್ಧಿ ಹೇಳ ಹೊರಟರೆ ನಿಮಗೇನಿದೆ ಅಧಿಕಾರ, ಇದು ನನ್ನ ಬದುಕು ನಾನು ಹೇಗೆ ಬೇಕಿದ್ದರೂ ಬದುಕಬಲ್ಲೆ ಅಂತೆಲ್ಲಾ ಮೂದಲಿಸೋ ಹುಡುಗಿಯರನ್ನ ನೋಡಿದ್ದೇನೆ.... ಸರಿ ಹಾಗಿದ್ದರೆ ನಿಮಗೂ ನಮ್ಮ ಸನಾತನ ಧರ್ಮವನ್ನ ಹಾಳು ಮಾಡುವ ಅಧಿಕಾರ ಇಲ್ಲ .... ಮೊದಲು ಯಾವುದಾದರೂ ಧರ್ಮಕ್ಕೆ ಮತಾಂತರವಾಗಿ ಮತ್ತೆ ಏನು ಬೇಕಿದ್ದರೂ ಮಾಡಿಕೊಳ್ಳಿ .... ಇಲ್ಲಿ ಸಿಕ್ಕ ಸ್ವಾತಂತ್ರ್ಯವನ್ನ ದುರುಪಯೋಗ ಪಡಿಸಿಕೊಳ್ಳುವ ನಿಮಗೆ ಇನ್ನೊಂದು ಧರ್ಮದಲ್ಲಿನ ಬಂಧನದ ಅರಿವಾಗಲಿ.
ನನ್ನ ಕಾಳಜಿ ಏನಿದ್ದರೂ ಅದು ನಿಮ್ಮ ಒಳಿತಿಗಾಗೇ ವಿನಹ ಇದರಿಂದ ನನಗೇನೂ ಲಾಭವಿಲ್ಲ .... ಭಯೋತ್ಪಾದನೆಯನ್ನ ತಡೆಯೋದಿಕ್ಕೆ ನಿಜಕ್ಕೂ ಸರ್ಕಾರದ , ಸೈನ್ಯದ ಸಹಕಾರ ಬೇಕು ಆದರೆ ಈ ಲವ್ ಜಿಹಾದ್ ಅನ್ನುವಂತಾದ್ದನ್ನ ತಡೆಯೋದು ನಮ್ಮ ಕೈಯಲ್ಲಿದೆ.... ಇಲ್ಲಿ ಎಡವುತ್ತಿರುವುದು ನೀವೇ.... ತಪ್ಪು ನಿಮ್ಮಿಂದಲೇ ಆಗ್ತಾ ಇದೆ.... ಕ್ಷಣಿಕ ಸುಖದ ಆಸೆಗೆ ಬಿದ್ದು ನಿಮ್ಮ ಭವಿಷ್ಯವನ್ನೇಕೆ ಕತ್ತಲಿಗೆ ದೂಡುತ್ತೀರಿ....? ಎಲ್ಲವನ್ನೂ ನಾವು ಅನುಭವದಿಂದಲೇ ಕಲಿಯಲಿಕ್ಕಾಗುವುದಿಲ್ಲ.... ಇತರರ ತಪ್ಪಿಂದಲೂ ಪಾಠ ಕಲಿಯುವವನೇ ಜಾಣ... ದಿನನಿತ್ಯ ಪೇಪರಿನಲ್ಲಿ ಬರೋ ಸುದ್ದಿ ಓದಿ ಸ್ವಲ್ಪ ಜಾಗೃತರಾಗಿರೋಣ ಅಂತ ಅನ್ನಿಸೋದೇ ಇಲ್ವ....? ಇನ್ನು ಎಂತಹ ಹುಸಿ ನಂಬಿಕೆ ನಿಮಗೆ....? ಮಾತೆತ್ತಿದರೆ ಪ್ರೀತಿಯ ನೆಪವೊಡ್ಡಿ ಕಿವಿಹಿಂಡುವವರನ್ನೆಲ್ಲಾ... ಪ್ರೀತಿಯ ದ್ವೇಷಿಗರು ಅಂತ ಬಿಂಬಿಸುತ್ತೀರಲ್ಲಾ... ಇದ್ಯಾವ ಸೀಮೆಯ ಪ್ರೀತಿ ರೀ...? ನಗ್ನ ಫೋಟೋ ತೆಗೆಯುವವರೆಗೆ ಹೋಗುವುದು ಪ್ರೀತಿ ಅಲ್ಲ... ಇದು ನಿಮ್ಮ ದೇಹ ತೃಷೆ ಅಷ್ಟೆ.... ಇದಕ್ಕೆ ಪ್ರೀತಿಯ ಹೆಸರಿಟ್ಟು ಅದರ ಮೌಲ್ಯವನ್ನ ಕಡಿಮೆ ಮಾಡಬೇಡಿ... ಇಂತಹಾ ಹೇಸಿಗೆಯ ಕೆಲಸ ಮಾಡಲಿಕ್ಕಾಗಿಯೇ ಏನು ನಿಮ್ಮನ್ನ ಹೆತ್ತವರು ಅಷ್ಟೊಂದು ಫೀಸು ಕೊಟ್ಟು ಕಾಲೇಜಿಗೆ ಸೇರಿಸುವುದು....?
ಕೆಲವೊಮ್ಮೆ ಇದರಲ್ಲಿ ಪೋಷಕರದೂ ಪಾತ್ರವಿದೆ ಅಂತನಿಸುತ್ತದೆ... ಕಾರಣ ಮಕ್ಕಳ ಸುಖಕ್ಕಾಗಿ ತಾವು ತಮ್ಮ ಜೀವನವನ್ನೇ ತೇಯ್ದು ಬಿಡುತ್ತಾರೆ... ಆದರೆ ಮಕ್ಕಳನ್ನ ಸುಸಂಸ್ಕೃತರನ್ನಾಗಿಸೋದಿಲ್ಲ.... ಮಕ್ಕಳು ಅದೇನೇ ಮಾಡಲಿ ಗಮನ ಹರಿಸುವುದೇ ಇಲ್ಲ.... ನೀವು ಬರಿಯ ವಿದೇಶಿ ಬಟ್ಟೆ ತೆಗೆಸಿಕೊಟ್ಟರೆ ಏನೇನೂ ಆಗೋದಿಲ್ಲ ಅಂತ ಸುಮ್ಮನಿರಬಹುದು ಆದರೆ ಆ ವಿದೇಶಿ ವ್ಯಾಮೋಹ ಅವರನ್ನ ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಅನ್ನೋದನ್ನ ನೀವು ಗಮನಿಸೋದೆ ಇಲ್ಲ..... ಜಗತ್ತೇ ತಲೆಬಾಗಿಸುವಂತಹಾ ಸಂಸ್ಕಾರ ನಮ್ಮದು ..... ಕಾಲ ಬದಲಾಗಿದೆ ಅನ್ನುತ್ತಾ ಎಲ್ಲವನ್ನೂ ಆಂಗ್ಲಮಯವಾಗಿಸಲು ಮುಂದಾಗಬೇಡಿ .... ನಮ್ಮತನದ ಅರಿವು ಇರಲಿ..... ನಮ್ಮ ಸಂಸ್ಕಾರಗಳ ಮೌಲ್ಯಗಳನ್ನ ಅವರಿಗೂ ತಿಳಿಸಿ... ಈ ಅನ್ಯಾಯಕ್ಕೊಳಗಾದ ರೀತಿಯ ಭೀಕರ ಪರಿಸ್ಥಿತಿಗಿಂತ ಅವರ ಕಿವಿಹಿಂಡುವುದು ಒಳ್ಳೆಯದಲ್ವಾ.... ಅಯ್ಯೋ ಎಲ್ಲಿ ಕಿವಿ ನೋವಾದೀತೋ ಏನೋ ಅಂತ ಸುಮ್ಮನಿದ್ದರೆ, ಇದೇ ಥರ ಅವರ ಬಾಳೇ ನರಕಮಯವಾದೀತು....ಇದಕ್ಕೆ ನೀವೇ ಜವಾಬ್ದಾರರಾಗುತ್ತೀರ.... ಇಂದೇ ಜಾಗೃತರಾಗಿ ನಿಮ್ಮ ಮನೆಯ ಮಕ್ಕಳ ಜೊತೆ ಸ್ನೇಹದಿಂದಿದ್ದುಕೊಂಡೇ ಅವರ ಮನಸ್ಸಿನ ಭಾವನೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ.... ಅವರಲ್ಲಿನ ಸೂಕ್ಷ್ಮ ಬದಲಾವಣೆಗಳನ್ನ ಗಮನಿಸಿ.... ಇಲ್ಲವಾದಲ್ಲಿ ನಿಮ್ಮ ಕಣ್ಣೀರಿಗೆ ನೀವೇ ಕಾರಣರಾಗುತ್ತೀರ.....
ಈ ಸನಾತನ ಧರ್ಮದ ಮೇಲಿನ ವಿಶೇಷ ಕಾಳಜಿಯಿಂದ ಮತ್ತು ಈ ಧರ್ಮದ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂಬ ಉದ್ದೇಶದಿಂದ ಈ ಮಾತುಗಳು.. ಎಲ್ಲದಕ್ಕೂ ಅನ್ಯಧರ್ಮೀಯರನ್ನ ದೋಷಿಗಳನ್ನಾಗಿಸೋದು ಸರಿಯಲ್ಲ.. ಇಲ್ಲಿ ದೊಡ್ಡ ತಪ್ಪು ನಮ್ಮವರದೇ ಅನ್ನೋದು ನನ್ನ ಭಾವನೆ .... ಯಾರೋ ಒಬ್ಬ ಮೋಸ ಮಾಡಿದ ಅನ್ನುವಾಗ ಅದು ಅವನ ತಪ್ಪಿಗಿಂತಲೂ ನಾನು ಮೋಸಹೋದೆ ಅನ್ನುವ ಅಂಶವನ್ನು ಕೂಡ ಗಮನಿಸಬೇಕು.... ನಾನು ಮೂರ್ಖ ಆಗಿರುವುದರಿಂದ ಆತ ಮೋಸ ಮಾಡಿದ ಅಷ್ಟೇ.... ನನ್ನ ತಪ್ಪಿಗೆ ಆತನನ್ನೇಕೆ ಚಾಣಾಕ್ಷನನ್ನಾಗಿ ಮಾಡಲಿ... ಇದನ್ನೆಲ್ಲಾ ಹೇಳೋಕೆ ನೀನ್ಯಾವನೋ ಅನ್ನೋ ಭಾವನೆ ನಿಮಗಿದ್ದರೆ ಸರಿ ಬಿಡಿ ... ನಾನೇನೂ ಮಾಡೋದಿಕ್ಕಾಗೋದಿಲ್ಲ ವಿನಾಶ ಕಾಲೇ ವಿಪರೀತ ಬುದ್ದಿ ಅಂತಂದುಕೊಂಡು ತೆಪ್ಪಗಿರುತ್ತೇನೆ.
No comments:
Post a Comment