Monday 2 November 2015

ಮೋದಿಯ ಕುರಿತಾದ ಮಿತ್ರರೊಬ್ಬರ ಪ್ರಶ್ನೆಗಳಿಗೆ ನನ್ನ ಉತ್ತರ



೧. ರಾಜಧರ್ಮದ ಪಾಲನೆಯಾಗಿಲ್ಲ ಅಂತ ಕೇಳಿದ ಪ್ರಶ್ನೆ...
ರಾಜಧರ್ಮ ಪಾಲಿಸಲೇಬೇಕು ನಿಜ... ಮೋದಿ ಅವರು ರಾಜ ಧರ್ಮ ಪಾಲಿಸಿಲ್ಲ ಅಂತ ಹೇಗೆ ಹೇಳುತ್ತೀರ....? ಬಹುಶ ಯಾರೇ ಆಗಲಿ ಒಬ್ಬ ಹೊರಗಿನಿಂದ ನೋಡುವ ವ್ಯಕ್ತಿಗೆ ಮೇಲ್ನೋಟಕ್ಕೆ ಹಿಂದುತ್ವದ ಬಗ್ಗೆ ಮಾತನಾಡುವ ವ್ಯಕ್ತಿ ಗಲಭೆಗೆ ಸಹಕರಿಸಿರಬಹುದು ಅಂತ ಕಾಣಿಸಬಹುದು. ಆದರೆ ಅದು ನಿಜವಲ್ಲ ಎಂದು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಿಕೊಂಡ ಮೇಲೆ ನೀವು ರಾಜಧರ್ಮ ಪಾಲನೆಯಾಗಿಲ್ಲ ಅಂತ ಹೇಗೆ ಹೇಳುತ್ತೀರ...? ರಾಜಧರ್ಮ ಪಾಲನೆಯಾಗಿಲ್ಲ ಅಂದಾಗಿದ್ದರೆ ಕೋರ್ಟು ಅವರಿಗೆ ಶಿಕ್ಷೆ ನೀಡಲೇಬೇಕಿತ್ತು. ವಾಜಪೇಯಿ ರಾಜಧರ್ಮದ ಪಾಲನೆಯಾಗಬೇಕು ಅಂತ ಹೇಳಿದರೇ ಹೊರತು, ಮೋದಿ... ನೀನು ರಾಜಧರ್ಮದ ಪಾಲನೆ ಮಾಡಿಲ್ಲ ಅಂತ ಎಲ್ಲೂ ಹೇಳಿಲ್ಲ. ಒಂದು ವೇಳೆ ಅವರಿಗೂ ಆ ಅನುಮಾನ ಬಂದಿದ್ದರೂ ಅದೇನೂ ಆಶ್ಚರ್ಯವಲ್ಲ ಮಾನವ ಸಹಜ ಗುಣ ಅಂತಾನೇ ಇಟ್ಟುಕೊಳ್ಳಿ ಆದರೆ ಆ ಮಾತನ್ನ ಈಗ ನಾವ್ಯಾರು ಹೇಳುವಂತಿಲ್ಲ ಕಾರಣ ಕೋರ್ಟು ರಾಜಧರ್ಮದ ಪಾಲನೆಯಾಗಿದೆ ಅನ್ನುವುದನ್ನೇ ಎತ್ತಿ ಹಿಡಿದದ್ದು.

೨. ಪ್ರಣಬ್ ಮುಖರ್ಜಿಗೆ ಪ್ರಧಾನ ಮಂತ್ರಿ ಪಟ್ಟ ತಪ್ಪಿಸಿದ್ದು ಗಾಂಧಿ ಕುಟುಂಬ ಎನ್ನುವ ಹೇಳಿಕೆ ನೀಡಿ ವೈಯಕ್ತಿಕ ನಿಂದನೆ ಮಾಡಿದರು ಮೋದಿ ಅಂದಿರಿ....
ಪ್ರಣಬ್ ಮುಖರ್ಜಿ ಕುರಿತಾದ ವಿಷಯ ವೈಯಕ್ತಿಕ ನಿಂದನೆ ಹೇಗಾಯ್ತು...? ಗಾಂಧಿ ಕುಟುಂಬದ ಭಕ್ತರನ್ನ ಬಿಟ್ಟರೆ ನಾನು ಮಾತನಾಡಿಸಿದ ಹೆಚ್ಚಿನ ಜನ... ಯಾಕೆ ಬಿಜೆಪಿಯ ಬೆಂಬಲಿಗರೇ ಹೇಳುವಂತೆ ಕಾಂಗ್ರೆಸ್ ನಲ್ಲಿ ಈಗಿರುವ ಮಟ್ಟಿಗೆ ಪ್ರಣಬ್ ಮುಖರ್ಜಿ ನಿಜಕ್ಕೂ ಅರ್ಹ ಪ್ರಧಾನಮಂತ್ರಿಯ ಅಭ್ಯರ್ಥಿ... ಯಾಕೆ ರಾಷ್ಟ್ರಪತಿಯ ಪಟ್ಟ ಕಟ್ಟಲಾಯಿತು ಅವರಿಗೆ....? ರಾಹುಲ್ ಗಾಂಧಿಗೆ ಪಟ್ಟ ಸಿಗಲು ಇದ್ದ ಅಡ್ಡಿ ಎಂದು ತಾನೇ....ಅದನ್ನ ಹೇಳಿದಗ ಅದು ವೈಯಕ್ತಿಕ ನಿಂದನೆ ಹೇಗಾದೀತು ಸ್ವಾಮೀ... ಸತ್ಯ ಕಹಿಯಾಗೇ ಇರೋದು ಬೇಕಿದ್ದರೆ ನೀವೇ ನಿಮ್ಮ ಕಾಂಗ್ರೆಸ್ ಮಿತ್ರರ ಬಳಿ ಕೇಳಿ ನೋಡಿ..

೩. ಮೋದಿಜಿ ಅಡ್ವಾಣಿ ಮತ್ತು ಕೇಶೂಭಾಯಿ ಅವರಿಂದ ಅಧಿಕಾರ ಕಿತ್ತುಕೊಂಡರು ಅನ್ನೋ ಮಾತು
ಅಡ್ವಾಣೀಜಿಗೆ ಮತ್ತು ಕೇಶೂ ಬಾಯಿ ಪಟೇಲ್ಗೆ ಪಟ್ಟ ತಪ್ಪಲು ಕಾರಣ ಮೋದಿ ಕಾರಣ ಅನ್ನೋ ನಿಮ್ಮ ಮಾತು ಹಾಸ್ಯಾಸ್ಪದ ನಾನೊಂದು ಉದಾಹರಣೆಯ ಮೂಲಕ ನಿಮ್ಮಲ್ಲಿ ಪ್ರಶ್ನೆ ಕೇಳುತ್ತೇನೆ.... ನೀವು ಕ್ರಿಕೆಟ್ ಆಟ ನೋಡುತ್ತಿರಬಹುದು.... ಗೌತಮ್ ಗಂಭೀರ್ ನನ್ನು ಹೊರಗಿಟ್ಟು ಶಿಖರ್ ಧವನ್ ನನ್ನು ಹಾಕಿಕೊಳ್ಳಲಾಯಿತು.... ನಿಮ್ಮ ಪ್ರಕಾರ ಗೌತಮ್ ಗಂಭೀರ್ ಸ್ಥಾನ ಕಳಕೊಂಡಿದ್ದೋ ಶಿಖರ್ ಧವನ್ ಪಡಕೊಂಡಿದ್ದೋ...? ಒಬ್ಬ ವ್ಯಕ್ತಿ ತನ್ನ ಸಾಧನೆಯಿಂದ ತಾನು ಮೇಲೆ ಬಂದ ಅಂತಾದರೆ ಆತ ಇನ್ನೊಬ್ಬರ ಸ್ಥಾನ ಕಸಿದುಕೊಂಡ ಅಂತ ಹೇಳೋದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ತಾನೇ ಇದಕ್ಕೆ ನಾನೇನು ಹೇಳಲಿ.... ಮೋದಿ ಅವರಾಗಿ ತನಗೆ ಪ್ರಧಾನಿ ಪಟ್ಟ ಬೇಕು ಅಂತ ಹೇಳಿದ ದಾಖಲೆ ಎಲ್ಲಿದೆ ಹೇಳಿ ..... ಬಿಜೆಪಿಯೊಳಗಿನ ಬಹು ಜನರ ಆಯ್ಕೆ ಅದು.... ಜನರ ಆಯ್ಕೆಯನ್ನ ನೀವು ಮೋದಿ ಮೇಲೆ ಆರೋಪಿಸಿದರೆ ಹೇಗೆ...?

೪. ರಾಜಧರ್ಮ ಪಾಲನೆಯಾಗಿಲ್ಲ ಎಂದು ವಾಜಪೇಯಿ ಪತ್ರ ಬರೆದಿದ್ದಾರೆ ಅಂದಿರಿ...
ವಾಜಪೇಯಿಯವರ ಲೆಟರ್ ಬಗ್ಗೆ ಹೇಳೋದಾದರೆ ಆಗ ಅದನ್ನ ಲಘುವಾಗಿ ತೆಗೆದುಕೊಳ್ಳಲಾಗದೇ ಇದ್ದಿರಬಹುದು ಆದರೆ ಈಗ ಹಾಗಲ್ಲ ಕೋರ್ಟು ತೀರ್ಪು ಬಂದ ಮೇಲೆ ಅದಕ್ಕೆ ಬೆಲೆ ಖಂಡಿತವಾಗಿಯೂ ಇಲ್ಲ. ಬಹುಶ ವಾಜಪೇಯಿ ಅವರನ್ನೇ ಕೇಳಿದರೂ ಅವರು ಇದಕ್ಕೆ ಖಂಡಿತ ಸಮ್ಮತಿಸಿಯಾರು ಅದರಲ್ಲಿ ಸಂಶಯವೇ ಇಲ್ಲ.

೫. ಯಾವುದೋ ಅಂಕಿ ಅಂಶಗಳನ್ನ ತೋರಿಸಿ ಗುಜರಾತ್ ಅಭಿವೃದ್ಧಿ ಆಗಿಲ್ಲ ಅಂದಿದ್ದು.
ಇನ್ನು ನೀವು ಕೊಟ್ಟ ಅಂಕಿ ಅಂಶಗಳಲ್ಲಿ ಹೆಚ್ಚಿನವು 2011ರದ್ದು..... ಈಗ 2014 ಅಲ್ವಾ.... ಇರಲಿ ಬಿಡಿ ನನಗೊಂದು ವಿಷಯ ಹೇಳಿ..... ಇಂತದ್ದನ್ನೆಲ್ಲಾ ನೋಡದೇ ಯಾವುದೇ ಅಂಕಿ ಅಂಶಗಳನ್ನ ಗಣನೆಗೆ ತೆಗೆದುಕೊಳ್ಲದೇ ಹಾಗೇನೇ ವಿಶ್ವಸಂಸ್ಥೆ ಗುಜರಾತ್ ಅನ್ನು ಪ್ರಗತಿ ಸಾಧಿಸುತ್ತಿರುವ ವಿಶ್ವದ ಎರಡನೇ ರಾಜ್ಯ ಅಂತ ಘೋಶಿಸಿ ಬಿಟ್ಟಿತೇ.... ಅಥವಾ ಅವರನ್ನ ಬಿಜೆಪಿಯ ಏಜೆಂಟ್ ಅಂತ ಹೇಳ್ತೀರೇನು...?
ಯಾಕೆ ವಿಶ್ವದ ರಾಷ್ಟ್ರಗಳೆಲ್ಲಾ ಅವರನ್ನ ತಮ್ಮ ದೇಶಕ್ಕೆ ಆಹ್ವಾನಿಸುತ್ತಿದೆ.? ಯಾಕೆ ಮೂರು ಬಾರಿ ಗುಜರಾತಿನ ಜನ ತಮ್ಮ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು ? ಗಲಭೆ ಗಲಭೆ ಎಂದು ಹತ್ತು ವರ್ಷದಿಂದ ಅದೇ ರಾಗವನ್ನ ಹಾಡುತ್ತೀರಲ್ಲ ಯಾಕೆ ಕಳೆದ ಹತ್ತು ವರ್ಷಗಳಲ್ಲಿ ಗಲಭೆಗಳಾಗಿಲ್ಲ...? ನನ್ನ ಮಟ್ಟಿಗೆ ಮೋದಿಯನ್ನ ನೀವು ವಿರೋಧಿಸೋಕೆ ಕಾರಣ ಒಂದೇ ಹಿಂದುತ್ವದ ವಿಚಾರ ಮಾತನಾಡಿದರಲ್ವಾ.... ತಾನೊಬ್ಬ ಹಿಂದೂ ಅಂತ ಹೇಳಿಕೊಂಡರಲ್ವಾ.... ಇದು ನಿಮ್ಮ ಸಮಸ್ಯೆ.... ಪ್ರತಿಯೊಂದು ಕ್ಷೇತ್ರವನ್ನು ಪ್ರತಿಯೊಂದು ಅಂಕಿ ಅಂಶದಲ್ಲೂ ಮೊದಲ ಸ್ಥಾನದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಇಲ್ಲದಿದ್ದರೆ ಇಲ್ಲ ಅನ್ನುವಂತಾದ್ದಕ್ಕೆ ಕಟ್ಟು ಬಿದ್ದರೆ ಅವರ ದೂರದೃಷ್ಟಿಯನ್ನ ನೀವು ನೋಡಲು ಸಾಧ್ಯವೇ ಇಲ್ಲ. ಇರಲಿ ಬಿಡಿ. ನನ್ನ ಗೆಳೆಯ ಗುಜರಾತಿನಲ್ಲೇ ಕೆಲಸಕ್ಕಿದ್ದಿದ್ದು. ಅವನ ಮಾತಿನಲ್ಲಿ ಮೋದಿ ಬಗೆಗೆ ಅಬಿಮಾನ ಕಂಡಿದ್ದೇನೆ. ನನ್ನ ಕಂಪನಿಗೆ ಬಂದಿದ್ದ ಗುಜರಾತಿನ ಲಾರಿಡ್ರೈವರ್ (ಒಬ್ಬ ಮುಸಲ್ಮಾನ) ನ ಮಾತುಗಳಲ್ಲಿ ಮೋದಿಯ ಬಗೆಗಿನ ಪ್ರೀತಿ ಕಂಡಿದ್ದೇನೆ. ಇತ್ತೀಚೆಗಷ್ಟೇ ಪುತ್ತೂರಿನ ಇಂಜಿನಿಯರ್ಸ್ ಎಸೋಸಿಯೇಶನ್ ನ ತಂಡವೊಂದು ಗುಜರಾತ್ ಅಧ್ಯಯನಕ್ಕೆ ಹೋಗಿ ಬಂದು ಅಲ್ಲಿನ ಅಚ್ಚರಿಯ ಬಗ್ಗೆ ಹೇಳಿಕೊಂಡಿರುವುದನ್ನ ನನ್ನ ಮಾವನವರ ಮೂಲಕ ಕೇಳಿಕೊಂಡಿದ್ದೇನೆ.... ಹೀಗೆ ಇವೆಲ್ಲವೂ ಮೋದಿಜಿ ನನ್ನ ದೇಶವನ್ನ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲ ಅನ್ನುವ ನಂಬಿಕೆ ಮೂಡಿಸಿದೆ. ನಮಗೆ ಯಾವುದೋ ದ್ವೇಷ ಇದೆ ಅಂತ ಆ ದ್ವೇಷಕ್ಕೆ ಮಹತ್ವ ಕೊಟ್ಟು ಅದೇ ದೃಷ್ಠಿಯಲ್ಲಿ ನೋಡಿದರೆ ಖಂಡಿತವಾಗಿಯೂ ಮೋದಿ ಒಳ್ಳೆಯವರಾಗಿ ಕಾಣಿಸಲಿಕ್ಕಿಲ್ಲ ಅದಂತೂ ಖಂಡಿತ. ಸಾಧ್ಯವಾಗುವುದಾದರೆ ಆ ದ್ವೇಷದ ದೃಷ್ಟಿಯನ್ನ ಕಳಚಿಟ್ಟು ನೋಡಿ.

No comments:

Post a Comment