Saturday 16 July 2016

ಪ್ರೇಮವೊಂದು ಸಶಕ್ತ ಚಳವಳಿ ಚೇತನಾ ತೀರ್ಥಹಳ್ಳಿಯವರ ಲೇಖನವೊಂದರಲ್ಲಿನ ಅಸಂಬದ್ಧಗಳು..


..
ಅವರೇ ಹೇಳುವಂತೆ ಅವರಿಗೆ ಪ್ರೇಮಿಗಳ ದಿನ ಆಚರಿಸಲೇಬೇಕು ಅನ್ನುವ ಹಠ ಶುರುವಾಗಿದ್ದು ಶ್ರೀರಾಮ ಸೇನೆ ಪ್ರೇಮಿಗಳ ದಿನಕ್ಕೆ ವಿರೋಧ ಮಾಡೋದನ್ನು ನೋಡಿದಾಗ... ಅಂದರೆ ಯಾವ ಶೀರ್ಷಿಕೆ ಕೊಟ್ಟು ಈ ಬರಹ ಬರೆಯುತ್ತಾರೋ ಆ ಪ್ರೇಮ ಭಾವನೆಯೇ ಅವರೊಳಗಿಲ್ಲ ಎಂದಾಯಿತಲ್ಲ... ಪ್ರೇಮದ ಭಾವ ಹಂಚುವುದಕ್ಕಾಗಿ ನಾನು ಪ್ರೇಮಿಗಳ ದಿನ ಆಚರಿಸುತ್ತೇನೆ ವಿರೋಧಿಗಳ ಹೊಟ್ಟೆ ಉರಿಸಲು ಅಲ್ಲ ಅನ್ನುವುದನ್ನ ಹೇಳಿಕೊಂಡಿದ್ದರೆ " ಪ್ರೇಮವೊಂದು ಸಶಕ್ತ ಚಳವಳಿ " ಸಕ್ರಿಯ ಹೋರಾಟಗಾರ್ತಿಯಾಗುತ್ತಿದ್ದರೋ ಏನೋ ಆದರೆ ಅವರ ಆಚರಣೆಯ ಉದ್ದೇಶವೇ.... ವಿರೋಧಿಗಳ ಮೇಲಿನ " ದ್ವೇಷ " ಹಾಗಿದ್ದರೆ ಇವರಿಂದ ಪ್ರೇಮ ಎನ್ನುವ ಸಶಕ್ತ ಚಳವಳಿ ನಡೆಯುವುದು ಹೇಗೆ...?
ಅವರ ಬರಹದಲ್ಲಿ ಪ್ರೇಮಿಗಳ ದಿನವನ್ನ್ಯಾಕೆ ಒಂದೇ ದಿನ ಮಾಡೋದು ಅನ್ನುವ ಪ್ರಶ್ನೆ ಕೇಳುವವರಿಗೆ....ಚೌತಿಯನ್ಯಾಕೆ ಅದೇ ದಿನ ಮಾಡೋದು ಎಲ್ಲ ದಿನವೂ ಗಣಪತಿಯನ್ನ ಪೂಜಿಸೋಣ ಗುರು ಪೂರ್ಣಿಮೆ ಯಾಕೆ ಆ ದಿನವೇ ಆಚರಿಸೋದು ಅನ್ನುವ ಪ್ರಶ್ನೆಯನ್ನ ಸಮರ್ಥವಾದ ವಾದ ಅನ್ನುವ ರೀತಿ ಕೇಳಲಿಕ್ಕಾಗುವುದಿಲ್ಲ ಅನ್ನುತ್ತಾ ಕೇಳಿಯೇ ಬಿಟ್ಟಿದ್ದಾರೆ.. ಆದರೆ ಯಾರಿಗೆ ತಮ್ಮ ಹುಟ್ಟಿದ ಹಬ್ಬವನ್ನ ಹುಟ್ಟಿದ ದಿನವೇ ಯಾಕೆ ಆಚರಿಸಬೇಕು ಅನ್ನುವ ಅರಿವು ಇರುತ್ತದೋ ಅವರಿಗೆ ಆಚರಿಸುತ್ತೀರಾ...? ಇದಕ್ಕೆ ... ಚೌತಿ ಯಾಕೆ ಒಂದೇ ದಿನ ಅನ್ನೋ ಪ್ರಶ್ನೆಗೆ ಉತ್ತರ ತನ್ನಿಂತಾನೇ ಹೊಳೆದಿರುತ್ತದೆ. ಅದಾಗಿಯೂ ಆ ಪ್ರಶ್ನೆ ಎತ್ತಿದ್ದಾರೆ ಅಂತಂದರೆ... ವಿರೋಧಿಗಳ ವಾದಕ್ಕೆ ಸಮನಾದ ಪ್ರತಿವಾದ ಅವರ ಬಳಿ ಇಲ್ಲ ಅಂತಲೇ ಆಗುತ್ತದೆ.
ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುತ್ತಿರುವವರು ನೆರೆರಾಷ್ಟ್ರದಲ್ಲಿ ಭೂಕಂಪವಾದರೂ ಮಾತಾಡೋದಿಲ್ಲ... ಅನ್ನುತ್ತಾರೆ. ( ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವವರು ಅನ್ನುತ್ತಾ ತಾವೇ ತಮ್ಮನ್ನ ರಾಷ್ಟ್ರವನ್ನ ಪ್ರೇಮಿಸುವವರಲ್ಲ ಅನ್ನುವ ಘೋಷಣೆ ಮಾಡಿದ್ದಾರೆ... ನೇರವಾಗಿ ಹೇಳಿಲ್ಲ ಅನ್ನುವ ಕಾರಣಕ್ಕೆ ಬಿಟ್ಟು ಬಿಡೋಣ ) ನೆರೆಯ ರಾಷ್ಟ್ರಗಳಲ್ಲಿ ಭೂಕಂಪವಾದರೆ ಮಾತಾಡೋದಿಲ್ಲ ಅನ್ನುವ ಇವರು ತಮ್ಮ ಸಿದ್ಧಾಂತಗಳಲ್ಲದಿರುವವರ ಬಗ್ಗೆ ಎಷ್ಟು ಮಾತಾಡುತ್ತಾರೆ...? ಯಾವತ್ತೂ ರಾಷ್ಟ್ರಪ್ರೇಮಿಗಳು ಪಾಕಿಸ್ಥಾನದ ಕುರಿತು ಅಲ್ಲೇನಾದರೂ ವಿಪತ್ತು ನಡೆದಾಗ ಮಾತನ್ನಾಡೋದು ಆ ದೇಶ ನಮ್ಮವರ ಮೇಲೆ ಮಾಡಿದ ಅನ್ಯಾಯಗಳ ಕುರಿತಾಗಿ.... ಇನ್ಯಾವುದೋ ದೇಶದಲ್ಲಿ ಅನಾಹುತವಾದರೆ ಮಿಡಿಯುವುದಿಲ್ಲವೇ ರಾಷ್ಟ್ರಪ್ರೇಮಿಗಳು...??? ಅವರ ಗುಂಪನ್ನೇ ತೆಗೆದುಕೊಂಡು ನೋಡಿದರೆ.... ರಾಷ್ಟ್ರದ್ರೋಹಿ ಯಾಕೂಬ್ ಪರ ನಿಂತಿರುವವರ ಬಗ್ಗೆ ಬೆಂಬಲ ಸೂಚಿಸೋ ಇವರು ಸೈನಿಕರ ಬಗ್ಗೆ ಸಂತಾಪ ಸೂಚಿಸುತ್ತಾರಾ.... ? ಹಾಗಿದ್ದರೆ ಈ ರಾಷ್ಟ್ರಕ್ಕೆ ಅನ್ಯಾಯವೆಸಗುವವರ ಪಾಲಿಗೆ ಮಿಡಿಯದ ಹೃದಯ ರಾಷ್ಟ್ರಪ್ರೇಮಿಗಳದ್ದು ಅನ್ನುವ ನೈತಿಕ ಹಕ್ಕು ಇವರಿಗಿದೆಯಾ...? ರಾಷ್ಟ್ರವನ್ನು ಪ್ರೀತಿಸೋ ಎಲ್ಲರನ್ನೂ ರಾಷ್ಟ್ರಪ್ರೇಮಿಗಳು ಬೆಂಬಲಿಸುತ್ತಾರೆ.... ಆದರೆ ತಮ್ಮ ಸಿದ್ಧಾಂತವನ್ನು ಬಿಟ್ಟು ಇನ್ಯಾವುದೋ ಸಿದ್ಧಾಂತಕ್ಕೆ ಬೆಲೆಕೊಡೋ ನಮ್ಮ ದೇಶಿಯರನ್ನೇ ಇವರು ಬೆಂಬಲಿಸುತ್ತಾರಾ...? ಹಾಗಿದ್ದರೆ ಇವರದ್ದು ಯಾವ ರೀತಿಯ ಪ್ರೇಮ....? ಅದು ಹೇಗೆ ಸಶಕ್ತ ಚಳವಳಿಯಾಗೋದು...???
ಅಷ್ಟಕ್ಕೂ ಆ ಲೇಖನದ ಕೊನೆಯಲ್ಲಿ ಒಂದು ಮಾತನ್ನ ಸರಿಯಾಗಿ ಹೇಳಿದ್ದಾರೆ... ಮೊದಲು ನಮಗೆ ಬುದ್ಧನಾಗುವ ಅರ್ಹತೆ ಇದೆಯಾ ಅನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡಿದ್ದಾರೆ.... ನಿಜಕ್ಕೂ ಇಲ್ಲಿ ಅವರಿಗೆ ಬುದ್ಧ ಒಬ್ಬ ಆದರ್ಶವಾದಿಯಾಗಿ ಕಾಣುವುದು ಕೇವಲ ಸನಾತನ ಧರ್ಮದ ಆಚರಣೆಯನ್ನು ಟೀಕಿಸಿದ್ದ ಅನ್ನುವ ಕಾರಣಕ್ಕಾಗಿಯೇ ಹೊರತು ಇನ್ಯಾವುದೇ ಕಾರಣಕ್ಕಾಗಿ ಅಲ್ಲ. ಅದಕ್ಕೆ ಅಲ್ವಾ.... ಪುರೋಹಿತಶಾಹಿ ವಿರುದ್ಧ ಹೋರಾಟ ಅನ್ನುವಾಗ ಬುದ್ಧಂ ಶರಣಂ ಗಚ್ಛಾಮಿ ಅನ್ನುವ ಇವರು.... ದೇಶಪ್ರೇಮದ ವಿಚಾರ ಬರುವಾಗ " ಮೌನಂ ಶರಣಂ ಗಚ್ಛಾಮಿ " ಅನ್ನೋದು. ಮೊದಲು ಪ್ರೇಮದ ನಿಜವಾದ ಅರ್ಥ ತಿಳಿದು ಚಳುವಳಿಗೆ ಇಳಿದರೆ ಅದು ಯಶಸ್ವಿಯಾದೀತು ವಿರೋಧಿಗಳ ಪಾಲಿನ ದ್ವೇಷವನ್ನೇ ತಮ್ಮ ಆದರ್ಶ ಸಿದ್ಧಾಂತವನ್ನಾಗಿಸಿರುವವರಿಂದ ಪ್ರೇಮ ಅನ್ನುವ ಸಶಕ್ತ ಚಳುವಳಿ ಸಾಧ್ಯವೇ.... ನನಗನಿಸಿದಂತೆ ಖಂಡಿತಾ ಸಾಧ್ಯವಿಲ್ಲ. ಅಲ್ವೇ.

No comments:

Post a Comment