Saturday 16 July 2016

ಜೈಲಿನಿಂದ ಹೊರಗೆ ಬಂದ ಕನ್ಹಯ್ಯಾನ ಮಾತನ್ನ ಕೇಳಿ ಎಂಥಾ ಅದ್ಭುತ ಭಾಷಣ ಅಂತ ಹೇಳಿಕೊಂಡ ರಾಜಕಾರಣಿಗಳಿಗೆ ಮತ್ತು " ಮಾಧ್ಯಮದ ರಾಜಕಾರಣಿ "ಗಳಿಗೊಂದಿಷ್ಟು ಪ್ರಶ್ನೆ... ೧


. ನಾವು ಬಡತನದಿಂದ ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಬಯಸೋದು....ಅಂತ ಕನ್ಹಯ್ಯಾ ಕೇಳಿದನಲ್ವಾ.... ಹಾಗಿದ್ದರೆ ಕಳೆದ ಯುಪಿಎ ಸರ್ಕಾರ ಇದ್ದಾಗ ತಿಂಗಳಿಗೊಂದರಂತೆ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬರುತ್ತಿತ್ತಲ್ಲ ಆಗ ಯಾವನಿಗೆ ಲಾಲ್ ಸಲಾಮ್ ಹೊಡಿತಾ ಕೂತಿದ್ದೆ....? ಅನ್ನೋ ಪ್ರಶ್ನೆ ಕೇಳುವ ಧೈರ್ಯ ನಿಮಗಿದೆಯಾ...?
೨. ದೇಶದ ಗಡಿಭಾಗದಲ್ಲಿ ಸೈನಿಕರು ಸಾಯುತ್ತಿದ್ದಾರೆ... ಅಂತ ಶಾಸಕರೊಬ್ಬರ ಮಾತನ್ನ ಉಲ್ಲೇಖಿಸಿ ಆ ಸೈನಿಕ ಏನು ನಿಮ್ಮ ಅಣ್ಣನೋ ತಮ್ಮನೋ.... ಅವನು ಅದ್ಯಾವುದೋ ಕೃಷಿಕನ ಮಗ.... ದೇಶದ ಒಳಗೂ ಕೃಷಿಕರ ಸಾವಾಗುತ್ತಿದೆ... ಅವರ ಸಾವಿನ ಬಗ್ಗೆ ಮಾತಾಡೋದಿಲ್ಲ ಯಾಕೆ ಅನ್ನುವ ಪ್ರಶ್ನೆ ಕೇಳಿದೊಡನೆ.... ಇದೋ ಈ ಭಾರಿಯ ಬಜೆಟ್ ನಲ್ಲಿ ಕೃಷಿಕರಿಗೆ ಪ್ರಾಧಾನ್ಯತೆ ಕೊಡಲಾಗಿದೆ ಅನ್ನೋ ಸತ್ಯವನ್ನ ಅವನ ಖಾಲಿ ತಲೆಯೊಳಗೆ ತುಂಬೋ ಧೈರ್ಯ ನಿಮಗಿದೆಯಾ....? ಅಂತ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬರುತ್ತಿರೋ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಬೇಕು ಅನ್ನುವ ಅಫ್ಜಲನ ಕುರಿತು ಕಾರ್ಯಕ್ರಮ ಮಾಡುವಾಗ ಈ ಕಳಕಳಿ ಎಲ್ಲಿತ್ತು ಅನ್ನುವ ಪ್ರಶ್ನೆ ಮಾಡೋ ತಾಕತ್ತು ನಿಮಗಿದೆಯಾ..?
೩. ಹರಿಯಾಣದಲ್ಲಿನ ಗಲಭೆಯನ್ನು ಉಲ್ಲೇಖಿಸಿ ನಾವು ಈ ಜಾತಿವಾದದಿಂದಲೇ ಸ್ವಾತಂತ್ರ್ಯ ಬಯಸೋದು ಅಂತ ಆತ ಹೇಳುವಾಗ ಶಹಬ್ಬಾಸ್.... ಇನ್ನು ಮುಂದೆ ಜಾತಿ ಆಧಾರಿತ ಮೀಸಲಾತಿಯನ್ನು ನಿನಗಾಗಿ ತೆಗೆದು ಹಾಕಲು ನಾವು ಹೋರಾಟ ಮಾಡುತ್ತೇವೆ ಅನ್ನೋ ತಾಕತ್ತು ನಿಮಗಿದೆಯಾ....? ಅಥವಾ ಜಾತಿ ಆಧಾರಿತ ಮೀಸಲಾತಿ ತೆಗೆದು ಹಾಕಬೇಕೆನ್ನುತ್ತೀಯಾ ಅದಕ್ಕೂ ಹೋರಾಟ ಮಾಡುತ್ತೀಯಾ ಅನ್ನುವ ಪ್ರಶ್ನೆ ಕೇಳೋ ತಾಕತ್ತಿದೆಯಾ...?
೪. ಈ ದೇಶದೊಳಗೆ ಹಿಂದುಳಿವರು, ಕೆಳವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲಾಗುತ್ತಿರೋ ಶೋಷಣೆಯಿಂದ ಸ್ವಾತಂತ್ರ್ಯ ಬೇಕು ಅಂದಾಗ ಶೋಷಿತರು ಅನ್ನುವುದೇ ಸಾಕಾಗುವುದಿಲ್ಲವೇ... ಅಲ್ಲಿ ಕೆಳವರ್ಗ, ಅಲ್ಪಸಂಖ್ಯಾತ, ಹಿಂದುಳಿದ ಅನ್ನುವುದಷ್ಟಕ್ಕೇ ಸೀಮಿತ ಯಾಕಾಗುತ್ತೀರಾ ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...? ಅಥವಾ ಕೆಳವರ್ಗ, ಅಲ್ಪಸಂಖ್ಯಾತರಿಂದ ಆಗುತ್ತಿರೋ ಶೋಷಣೆಯಿಂದ ಸ್ವಾತಂತ್ರ್ಯ ಬೇಕಾಗಿಲ್ಲವೇ ಅನ್ನೋ ಪ್ರಶ್ನೆ ಕೇಳೋ ತಾಕತ್ತಿದೆಯಾ...?
೫. ರಾಷ್ಟ್ರ‍ೀಯ ಸ್ವಯಂಸೇವಕ ಸಂಘ ಜೆ.ಎನ್.ಯು ನ ವಿರುದ್ಧ ಪಿತೂರಿಯನ್ನ ಮೊದಲೇ ಮಾಡಿತ್ತು ಅನ್ನುವಾಗ..... ನಿಮ್ಮ ಕಾರ್ಯಕ್ರಮ ಆಯೋಜನೆ ಆಗದೇ ಇದ್ದಿದ್ದರೆ ಈ ಪಿತೂರಿ ನಡೆಸಲು ಆಗುತ್ತಿತ್ತೇ ಅನ್ನುವ ಸರಳ ಪ್ರಶ್ನೆ ಅಥವಾ ಇಂಥಾ ಕಾರ್ಯಕ್ರಮ ದೇಶದ ಬೇರೆಲ್ಲೂ ಆಗಲಿಲ್ಲ ಯಾಕೆ... ನಿಮ್ಮಲ್ಲೇ ಇದು ಆಗಿದ್ದು ಯಾಕೆ ಅನ್ನುವ ಕಾರಣ ಕೇಳುವ ಧೈರ್ಯ ಇದೆಯಾ...?
೬. ರೋಹಿತ್ ಮೇಮುಲನ್ನ ಸರ್ಕಾರ ಕೊಂದಿತು ಅನ್ನುವಾಗ.... ರೋಹಿತ್ ವೇಮುಲನೇ ಆತ್ಮಹತ್ಯೆಗೆ ಮುನ್ನ ಬರೆದ ಕೊನೆಯ ಪತ್ರದಲ್ಲಿ ಏನು ಬರೆದಿದ್ದ ಅನ್ನೋದು ನಿನಗೆ ಗೊತ್ತಿದೆಯಾ ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೭. ನಾವು ಸುಳ್ಳು ಟ್ವೀಟ್ ಮಾಡುವ ಸಂಘಿಗಳಿಂದ ಸ್ವಾತಂತ್ರ್ಯ ಬಯಸುತ್ತೇವೆ ಅಂದಾಗ..... ಸಂಘದವರು ನಿಮ್ಮನ್ನ ಯಾವ ವಿಚಾರದಲ್ಲಿ ಬಂಧನದಲ್ಲಿಟ್ಟಿದ್ದಾರೆ...? ಅನ್ನುವ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೮. ಜೆ.ಎನ್.ಯು ನಲ್ಲಿನ ಹೋರಾಟದ ಧ್ವನಿಯನ್ನು ಅಡಗಿಸುವುದೇ ಸಂಘಿಗಳ ಉದ್ದೇಶ ಅನ್ನುವಾಗ..... ಹಾಗಿದ್ದರೆ ನಿಮ್ಮ ಚಳವಳಿಗೆ ಕವಿತಾ ವಾಚನ ಅನ್ನುವ ಶೀರ್ಷಿಕೆ ಕೊಟ್ಟು ಕಾರ್ಯಕ್ರಮ ನಡೆಸುವ ಅಗತ್ಯವೇನಿತ್ತು...? ನೇರವಾಗಿ ಬಡತನದ ವಿರುದ್ಧ ಹೋರಾಟ ಅನ್ನುವ ಶೀರ್ಷಿಕೆ ಯಾಕೆ ಕೊಡಲಿಲ್ಲ ಅನ್ನುವ ನೇರ ಸವಾಲು ಹಾಕುವ ತಾಕತ್ತು ನಿಮಗಿದೆಯಾ...?
೯. ಯಾವನೋ ಒಬ್ಬ ಪೇದೆಯ ಬಳಿ ಧಾರ್ಮಿಕ ವಿಚಾರ ಕೇಳಿ.... ರಾಮ ಮಂದಿರ ನಿರ್ಮಾಣದ ವಿಷಯ ಪ್ರಸ್ತಾಪಿಸಿ ಅದಕ್ಕೂ ತಮ್ಮ ಸಮ್ಮತಿಯಿಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದಾಗ.... ತಡೆದು... ಇದು ದೇಶದ ಬಹುಪಾಲು ಜನರ ಕನಸು... ಇಡಿಯ ದೇಶದಲ್ಲಿ ಎಷ್ಟು ಜನರಿಗೆ ಮಂದಿರದ ಬಯಕೆ ಇದೆ ಎಂದು ಮೊದಲು ತಿಳಿದುಕೊಳ್ಳುಬೇಕೆಂಬ ಪರಿಜ್ಞಾನ ನಿನಗಿದೆಯಾ ಅನ್ನುವ ನೇರ ಪ್ರಶ್ನೆ ಕೇಳುವ ತಾಕತ್ತು ನಿಮಗಿದೆಯಾ...?
೧೦. ಷರತ್ತು ಬದ್ಧ ಜಾಮೀನಿನ ಮೇಲೆ ನೀನು ಹೊರಬಂದಿದ್ದೀಯ ಮೊದಲು ನಿರಪರಾಧಿ ಅಂತ ಸಾಬೀತುಪಡಿಸಿಕೋ ಆಮೇಲೆ ರಾಜಕಾರಣಿಯಂತೆ ಮಾತನಾಡು ಅನ್ನುವ ಸಲಹೆ ಕೊಡೋ ತಾಕತ್ತಿದೆಯಾ...?

No comments:

Post a Comment