Saturday 16 July 2016

ಎನ್.ಡಿ.ಟಿ.ವಿ ಯ ರವೀಶ್ ಕುಮಾರ್ ಅವರಿಗೊಂದಿಷ್ಟು ಪ್ರಶ್ನೆಗಳು.... ಭಾಗ ೨



೬. ಕಾಶ್ಮೀರದಲ್ಲಿ ಭಾರತ ವಿರೋಧಿ ಹೇಳಿಕೆಗಳು ಕೇಳುತ್ತಲೇ ಇರುತ್ತದೆ. ಆದರೆ ಅಲ್ಲಿ ಬಂಧನ ಆಗುತ್ತಿದೆಯಾ...? ಅನ್ನುತ್ತಾರೆ.... ಇವರ ಮನಸ್ಥಿತಿ ಎಂಥಾ ಕೆಳಮಟ್ಟದ್ದು ನೋಡಿ ನಿಜವಾಗಿಯೂ ಇವರಲ್ಲಿ ದೇಶಪ್ರೇಮವಿದ್ದರೆ ಭಾರತ ವಿರೋಧಿ ಹೇಳಿಕೆ ದೇಶದ ಯಾವ ಮೂಲೆಯಲ್ಲೇ ಕೊಡಲಿ ಅವರ ಬಂಧನವಾಗಲಿ ಅನ್ನುವ ಮಾತನ್ನ ಹೇಳುಬೇಕಿತ್ತೇ ಹೊರತು ಅಲ್ಲಿ ಬಂಧನವಾಗಿಲ್ಲ ಅನ್ನುವ ಕಾರಣಕ್ಕೆ ಇಲ್ಲಿಯೂ ಬಂಧನವಾಗದಿರಲಿ ಅನ್ನುವುದೇ....??? ಹಾಗಾದರೆ ಇಡಿಯ ಕಾಶ್ಮೀರದ ಒಂದೆರಡು ತಪ್ಪನ್ನ ಆಧಾರವಾಗಿಟ್ಟುಕೊಂಡು ದೇಶದಲ್ಲೆಲ್ಲೂ ದೇಶವಿರೋಧಿ ಹೇಳಿಕೆಗೆ ಶಿಕ್ಷೆ ಆಗಬಾರದೇ...???
೭. ಕಾಶ್ಮೀರದ ಸಮಸ್ಯೆಗೂ ಭಾರತದಲ್ಲಿನ ಅನ್ಯ ಮುಸ್ಲಿಮರಿಗೂ ಏನು ಸಂಬಂಧ... ಏನೇನೂ ಇಲ್ಲ..? ಕಾಶ್ಮೀರದ ಸಮಸ್ಯೆ ಸರ್ಕಾರದ ಸಮಸ್ಯೆ ಅದನ್ನ ಸರ್ಕಾರವೇ ಬಗೆಹರಿಸಲಿ... ಎನ್ನುತ್ತಾರೆ.... ಮೊದಲ ಸಾಲನ್ನ ನೋಡೋಣ... ಇಲ್ಲಿ ಕಾಶ್ಮೀರದ ಸಮಸ್ಯೆಯನ್ನ ಬರಿಯ ಮುಸ್ಲಿಮರ ಜೊತೆ ಮಾತ್ರ ಯಾಕೆ ತಾಳೆ ಹಾಕಲಾಗುತ್ತಿದೆ...? ಅದು ಕೇವಲ ಮುಸ್ಲಿಮರದ್ದೇ.... ಯಾಕೆ ಕಾಶ್ಮೀರಿ ಪಂಡಿತರ ಕುರಿತು ಮಾತಾಡೋದಿಲ್ಲ. ಅದನ್ನೂ ಬದಿಗಿಡೋಣ. ಕಾಶ್ಮೀರದ ಸಮಸ್ಯೆಯನ್ನ ಸರ್ಕಾರಕ್ಕೆ ಬಿಟ್ಟು ಬಿಡೋದು ಎಷ್ಟು ಸರಿ ಮತ್ತೆಲ್ಲದರಲ್ಲೂ ಮಾಧ್ಯಮ ಮೂಗು ತೂರಿಸುತ್ತದೆ. ಇದರ ಕುರಿತಾಗಿ ಮಾಧ್ಯಮವೇಕೆ ನಮ್ಮದಲ್ಲ ಅಂತಿರಬೇಕು...? ಇಡಿಯ ದೇಶ ಭಾರತೀಯರದ್ದಾಗಿರುವಾಗ ಕಾಶ್ಮೀರದ ಸಮಸ್ಯೆ ನಮ್ಮೆಲ್ಲರ ಸಮಸ್ಯೆ ತಾನೇ...? ಸರ್ಕಾರಕ್ಕೇ ಸಮಸ್ಯೆಯನ್ನ ಬಿಟ್ಟು ಕೊಡುವವರು ಜೆ.ಎನ್.ಯು ಸಮಸ್ಯೆಯನ್ನೇಕೆ ತನ್ನದೇ ಸಮಸ್ಯೆ ಅನ್ನುವಂತೆ ವಿಶ್ಲೇಷಿಸುತ್ತದೆ...? ಇವರ್ಯಾಕೆ ಕಾಶ್ಮೀರದ ಸಮಸ್ಯೆಯನ್ನ ಪ್ರಶ್ನಿಸುತ್ತಿದ್ದ ವಿದ್ಯಾರ್ಥಿಗಳ ಪರ ಏಕೆ ನಿಲ್ಲುತ್ತಾರೆ...?
೮. ಮೊದಲು ನಮಗೆ ಹೇಳಲಾಗಿತ್ತು ಸಾಮಾಜಿಕ ಸಾಮರಸ್ಯ ಕದಡೋ ಸುದ್ದಿಯನ್ನ ತೋರಿಸಬಾರದು ಆದರೆ ಈಗ ಆ ನಿಯಮವನ್ನ ಗಾಳಿಗೆ ತೂರಲಾಗುತ್ತಿದೆ ಅಂತ ಹೇಳುತ್ತಾರೆ... ಈ ನಿಯಮದ ನೆನಪು ಇನ್ಯಾವುದೋ ಚಾನಲ್ ನೋಡುವಾಗ ಮಾತ್ರ ನೆನಪಾಗುತ್ತದಾ...? ಒಮ್ಮೆ ಹಿಂದಿನ ನೆನಪನ್ನ ಕೆದಕಿ... ಬಾಂಬೆ ದಾಳಿಯಾದಾಗ ಕಮಾಂಡೊಗಳ ನಡೆಯನ್ನೇ ಜಗತ್ತಿಗೆ ತೋರಿಸಿದವರು ನೀವು... ಈಗ ಮಾಧ್ಯಮಗಳು ಪಾಲಿಸಬೇಕಾದ ನೀತಿ ನಿಯಮಗಳು ನೆನಪಾಗೋದು ಹಾಸ್ಯಾಸ್ಪದ ಅಂತನಿಸೋದಿಲ್ವಾ...?
೯. ಕನ್ಹಯ್ಯಾ ಅವರ ವೀಡಿಯೋವನ್ನ ತಿರುಚಿ ತೋರಿಸಲಾಗಿತ್ತು... ಮೀಡಿಯಾಗಳಿಗೆ ಆ ವೀಡಿಯೋಗಳ ಸತ್ಯಾಸತ್ಯತೆಯನ್ನ ಪರೀಕ್ಷಿಸೋ ತಾಳ್ಮೆಯೇ ಇಲ್ಲವಾ...? ಅಂದಿರಿ.... ನಿಜಕ್ಕೂ ಕೇಳಬೇಕಾದ ಪ್ರಶ್ನೆಯೇ.... ಆದರೆ ಉಳಿದವರು ತೋರಿಸಿದ್ದು ಮಾತ್ರ ತಿರುಚಲ್ಪಟ್ಟದ್ದಾ...? ನೀವು ತೋರಿಸಿದ್ದು ನಿಜವಾದದ್ದಾ...? ಅಷ್ಟಕ್ಕೂ ನಿಮ್ಮದೇ ಚಾನಲ್ ತೆಗೆದುಕೊಳ್ಳಿ.... ಈ ತಿರುಚಲ್ಪಟ್ಟ ವೀಡಿಯೋಗಳ ಪತ್ತೆಗಾಗಿ ಯಾವ ಸಾಧನ ಇಟ್ಟುಕೊಂಡಿದ್ದೀರಾ...? ಅದನ್ನ ಸ್ಪಷ್ಟಪಡಿಸದೇ ನಿಮ್ಮ ಚಾನಲಿನಲ್ಲಿರೋ ವೀಡಿಯೋ ಸರಿಯಾದದ್ದು ಅನ್ನೋದನ್ನ ನಾವು ಹೇಗೆ ನಂಬೋದು...? ಅದೂ ಪಕ್ಕಕ್ಕಿಡಿ.... ವೀಡಿಯೋ ಸುಳ್ಳೋ ಸತ್ಯವೋ ಅನ್ನುವುದನ್ನ ನ್ಯಾಯಾಲಯ ತೀರ್ಮಾನಿಸದೇ ಅದು ಸುಳ್ಳೆಂದೇ ತೀರ್ಮಾನಿಸುವುದು ನೀವೇ ಹೇಳುತ್ತಿರುವ ಕಾದು ನೋಡುವ ತಾಳ್ಮೆ ಇಲ್ಲ ಅನ್ನುವ ವಾದಕ್ಕೆ ವಿರುದ್ಧವಾದದ್ದು ಅಲ್ವಾ...???
೧೦. " ಲೇಕೆ ರಹೇಂಗೆ ಆಜಾದಿ " ಅನ್ನೋದಕ್ಕೆ ಈ ದೇಶದಿಂದ ಆಜಾದಿ ಬೇಕು.... ಅನ್ನುವ ಅರ್ಥ ಹೇಗೆ ಕೊಟ್ಟಿರಿ...? ಅನ್ನುವ ಪ್ರಶ್ನೆ ಮಾಡಿದ್ದೀರಾ... ಅದೆಷ್ಟೋ ಬಡವರಿಗೆ ಬಡತನದಿಂದ ಆಜಾದಿ ಬೇಕಾಗಿದೆಯಲ್ವಾ.... ಅಂತಾನೂ ಹೇಳುತ್ತಾ ಇದ್ದೀರಾ.... ಸ್ವಾಮೀ ಇದು ತೀರಾ ನಗೆ ತರಿಸೋ ವಾದ... ಆ ಕಾರ್ಯಕ್ರಮದಲ್ಲಿ ಕಾಶ್ಮೀರದ ಕುರಿತು ಘೋಷಣೆ ಕೇಳುತ್ತದೆ, ಅಫ್ಜಲ್ ಗುರು ಪರವಾಗಿ ಘೋಷಣೆ ಕೇಳುತ್ತದೆ ಇದರ ನಡುವೆ ಬಡತನದಿಂದ ಸ್ವಾತಂತ್ರ್ಯ ಬೇಕು ಅನ್ನುವ ಘೋಷಣೆ ಆ ಸ್ಥಳದಿಂದ ನಿರೀಕ್ಷಿಸಲಾಗುತ್ತದಾ...? ಸಾಮಾನ್ಯನಿಗೂ ಇದು ಅರ್ಥವಾಗುವಂಥಾ ಸತ್ಯ ಆದರೆ ಎಲ್ಲೋ ಆ ವಿದ್ಯಾರ್ಥಿಗಳ ಪರ ಅಥವಾ ಆ ಸಿದ್ಧಾಂತದ ಪರ ನಿಲ್ಲುವ ಆವೇಶದಲ್ಲಿ ಈ ರೀತಿಯ ಹೊಸ ಅರ್ಥದ ನಿಮ್ಮ ಹುಡುಕಾಟ ಇಲ್ಲದ ಸತ್ಯವನ್ನು ಹುಡುಕುವಂಥಾ ಪ್ರಯತ್ನ ಅಂತನಿಸೋದಿಲ್ವಾ...?
೧೧. ವಿದ್ಯಾರ್ಥಿಗಳ ಪರ ಮಾತಾಡಿದವರನ್ನೆಲ್ಲಾ ದೇಶದ್ರೋಹಿಗಳು ಅನ್ನಲಾಗುತ್ತಿದೆ ಇದು ಆತಂಕಕಾರಿ... ಅಂದಿರಿ ಅಯ್ಯೋ ಇದೊಳ್ಳೆ ವಿಚಾರ " ಭಾರತ್ ತೇರೆ ತುಕ್ಡೇ ಹೋಂಗೇ ಇನ್ಷಾ ಅಲ್ಲಾ ಇನ್ಷಾ ಅಲ್ಲಾ... " ಅಂದವರ ಪರ ನಿಲ್ಲುವುದು ಅಂದರೆ ಅದು ದೇಶದ್ರೋಹವೇ ತಾನೇ... ಇದನ್ನು ಸಿದ್ಧಪಡಿಸಲೂ ಕೋರ್ಟ್ ಬೇಕಾ...?
೧೨. ಕೇಸು ನ್ಯಾಯಾಲಯದಲ್ಲಿ ತೀರ್ಮಾನವಾಗುವ ಮುನ್ನವೇ ನಿರ್ಣಯಕ್ಕೆ ಬರೋದು ಎಷ್ಟು ಸರಿ ಅಂದಿರಿ... ನಿಜ ಆದರೆ ಅಫ್ಜಲ್ ಗುರುವಿನ ಕುರಿತು ನ್ಯಾಯಾಲಯದ ತೀರ್ಪು ಬಂದಿತ್ತು ಅಲ್ವಾ.... ಹಾಗಾದರೆ ಅವನ ಪರವಾಗಿ ನಿಲ್ಲೋದು ನ್ಯಾಯಾಂಗ ನಿಂದನೆ ಅಲ್ವಾ.... ಹಾಗಿದ್ದ ಮೇಲೆ ಅವರ ಪರ ನಿಮ್ಮ ನಿಲುವು ಎಷ್ಟು ಸರಿ...? ಇರಲಿ ಈ ಕೇಸಿನಲ್ಲಿ ತೀರ್ಪು ಬರುವ ತನಕ ಕಾಯಬೇಕು ಅನ್ನುವ ನೀವು ಇದೇ ನಿಯಮವನ್ನ ಉಳಿದೆಲ್ಲಾ ಸಂಧರ್ಭದಲ್ಲಿ ಕಾಯ್ದುಕೊಳ್ಳುತ್ತೀರಾ...?
೧೩. ವಕೀಲರು ರ್ಯಾಲಿ ಮಾಡುತ್ತಿದ್ದಾರೆ, ಹಿಂಸೆಗೆ ಇಳಿದಿದ್ದಾರೆ.... ಅನ್ನುತ್ತಿದ್ದೀರಾ... ಹಿಂಸೆ ಮಾಡಿದ್ದಾದರೂ ಯಾರ ವಿರುದ್ಧ....? ಈ ಹಿಂಸೆಯನ್ನ ನಿಮಗೆ ಸಹಿಸೋದಿಕ್ಕೆ ಆಗುತ್ತಿಲ್ಲ ಆದರೆ ಸಂಸತ್ತಿಗೆ ಬಾಂಬ್ ಇಟ್ಟು ಅಲ್ಲಿ ಇದ್ದವರನ್ನೆಲ್ಲಾ ಕೊಲ್ಲಲು ಬಯಸೋದು ಹಿಂಸೆ ಅಲ್ಲವೇನೂ...? ಅವನ ಪರವಾಗಿ ನಿಲ್ಲುವವರು ಆ ಹಿಂಸೆಯನ್ನೇ ಬೆಂಬಲಿಸಿದ ಹಾಗಲ್ವಾ.... ನಿಮ್ಮದಿದೆಂಥಾ ದ್ವಂದ್ವ ನಿಲುವು ಸ್ವಾಮೀ....
೧೪. ಸಂವಿಧಾನ ಬದ್ಧವಾಗಿರೋದು ದೇಶದ್ರೋಹವೇ....? ಅನ್ನುವ ಪ್ರಶ್ನೆ ಹಾಕಿಕೊಳ್ಳುತ್ತಿದ್ದೀರಾ.... ಹಾಗಿದ್ದರೆ ನೀವು ಅನುಸರಿಸೋ ಸಂವಿಧಾನದಲ್ಲಿ ದೇಶದ ವಿರುದ್ಧ ಘೋಷಣೆ ಕೂಗೋದು, ನ್ಯಾಯಾಂಗ ನಿಂದನೆ ಇವೆಲ್ಲಾ ದೇಶದ್ರೋಹಿ ಚಟುವಟಿಕೆ ಅಲ್ಲವೋ....? ಮೊದಲು ಸಂವಿಧಾನದಲ್ಲಿರೋ ಆ ಸಾಲುಗಳನ್ನ ತೋರಿಸಿ ಆಮೇಲೆ ನಾವು ನಿಮ್ಮ ಮಾತಿಗೆ ಬೆಲೆ ಕೊಡೋಣ.
೧೫. ನಾನು ದೇಶಭಕ್ತನಲ್ಲ ಯಾಕೆಂದರೆ ನಾನು ಪಕ್ಷಗಳ ಆಧಾರದಲ್ಲಿ ಸುದ್ದಿಯನ್ನ ವಿಶ್ಲೇಷಿಸುವುದಿಲ್ಲ ಅನ್ನುತ್ತಾ ಕಾರ್ಯಕ್ರಮವನ್ನ ಮುಕ್ತಾಯಗೊಳಿಸುತ್ತೀರಿ.... ಆದರೆ ಅದೆಷ್ಟೋ ವಿಷಯಗಳಲ್ಲಿ ಮೋದಿಯವರ ವಿರುದ್ಧವಾಗಿಯೇ ಕೆಲಸ ಮಾಡಿರುವುದು ನಮಗೆಲ್ಲಾ ತಿಳಿದಿರುವ ವಿಷಯವೇ... ಅದೇನೂ ಹೊಸತಲ್ಲ ಅಷ್ಟೇ ಏಕೆ ಮೋದಿ ಅವರು ನಿರ್ದೋಷಿ ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದರೂ ಅವರ ವಿರುದ್ಧ ಟೀಕೆಗಳನ್ನ ನಡೆಸುತ್ತಲೇ ಬರುವವರು ನೀವು ನೀವು ಪಕ್ಷಾತೀತ ಚಿಂತನೆಯವರು ಅನ್ನುವುದನ್ನ ಕೇಳುವಾಗಲೇ ಸಾಮಾನ್ಯ ಮನುಷ್ಯರಿಗೂ ನಗು ಬರಲೇಬೇಕು....
ಹೀಗೆ ದ್ವಂದ್ವಗಳನ್ನೇ ಇಟ್ಟುಕೊಂಡು ಅದೇನನ್ನ ಸಾಬೀತುಪಡಿಸಬೇಕು ಅಂತಿದ್ದರೋ ನನಗೆ ಗೊತ್ತಾಗಿಲ್ಲ ಕೆಲವೊಮ್ಮೆ ನಾನು ತಪ್ಪು ಮಾಡಿರಬಹುದು ಅನ್ನುತ್ತಾರೆ, ನಾನೇನು ಮಾಧ್ಯಮವನ್ನ ಸರಿ ಮಾಡಲು ಇರುವವ ಅಲ್ಲ ಅನ್ನುತ್ತಾರೆ ಆದರೂ ಇತರ ಮಾಧ್ಯಮದ ತಪ್ಪನ್ನ ಎತ್ತಿ ಹಿಡಿಯುತ್ತಾರೆ.... ಹೀಗೆ ಒಟ್ಟಾರೆ ಒಂದಷ್ಟು ಗೊಂದಲ.... ಆದರೆ ನಿಜವಾಗಿಯೂ ದೇಶಪ್ರೇಮ ಅನ್ನುವುದು ಇಂಥಾ ಗೊಂದಲಗಳ ನಡುವೆ ಸಿಕ್ಕಿಬೀಳುವಂಥಾದ್ದೇ ಅಲ್ಲ.... ಪಕ್ಷಾತೀತವಾಗಿ ಜಾತ್ಯಾತೀತವಾಗಿ ಒಂದೇ ಸ್ವರವಾಗಿ ಬರಬೇಕಾದದ್ದು ದೇಶಪ್ರೇಮ ಆದರೆ ಅದನ್ನ ಜಗತ್ತಿಗೆ ತೋರಿಸವುದಕ್ಕೆ ಬದಲಾಗಿ ಯಾವುದೋ ಸಿದ್ಧಾಂತದ ಮುಖವಾಡವನ್ನಿಟ್ಟುಕೊಂಡು .... " .... ಹಾ ನಾನೊಬ್ಬ ದೇಶದ್ರೋಹಿ ...." ಅಂತ ಹೇಳಿಕೊಳ್ಳುವುದಕ್ಕೆ ಇಂತಹಾ ಕಾರ್ಯಕ್ರಮ ಮಾಡೋದು ಈ ದೇಶದ ದುರಂತವೇ ಸರಿ....

No comments:

Post a Comment