Saturday 31 October 2015

ಅಸಹ್ಯದ ತುತ್ತ ತುದಿಯಲ್ಲಿದೆ ಕಾಂಗ್ರೆಸ್....



ಭಾರತದ ಆಡಳಿತ ನಡೆಸುವ ಆಸೆಯಿಂದ ರೂಪುಗೊಂಡ ಯಾವುದೇ ಪಕ್ಷಕ್ಕಾದರೂ ಭಾರತದ ಹಿತದೃಷ್ಟಿ ಪ್ರಾಮುಖ್ಯವಾಗಿರಬೇಕು.. ಆದರೆ ತಮ್ಮ ಸ್ವಹಿತಾಸಕ್ತಿಯನ್ನೇ ಅಜೆಂಡಾ ಮಾಡಿಕೊಂಡ ಪಕ್ಷಕ್ಕೆ ದೇಶದ ಕಾಳಜಿ ಎಲ್ಲಿ ಕಾಣಿಸೀತು...? ಒಂದಲ್ಲ ಎರಡೆರಡು ಘಟನೆಗಳು ಇದನ್ನ ಸಾರುತ್ತವೆ... ಸದಾ ಭಾರತಕ್ಕೆ ತಲೆನೋವಾಗಿರೋಕೆ ಬಯಸುವ ಪಾಕಿಸ್ಥಾನದಂತಹ ದೇಶವೊಂದರ ಕುಟಿಲತೆಯನ್ನು ಬಲ್ಲವರಾಗಿಯೂ ಮೊನ್ನೆ ಸ್ಫೋಟಗೊಂಡ ಪಾಕಿಸ್ಥಾನದ ಬೋಟಿನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನ ಮಾಡುವುದು ಇದಕ್ಕೊಂದು ನಿದರ್ಶನ ಅಲ್ಲವೇ... ಎಂಥಾ ವಿಚಿತ್ರ ವಿರೋಧಿಸುವುದಕ್ಕಾಗಿ ವಿರೋಧ ಅನ್ನೋದೇ ಮೂಲ ಮಂತ್ರವೇ...? ಶಹಬ್ಬಾಸ್ ಸೈನಿಕರೇ... ಭಾರತದಲ್ಲಿ ಸಂಭವಿಸಲಿದ್ದ ಇನ್ನೊಂದು ದುರಂತವನ್ನ ತಡೆದಿರಿ ಎಂದು ಬೆನ್ನ ತಟ್ಟಬೇಕಾದ ನಾವೇ ಅವರನ್ನ ಅನುಮಾನಿಸೋದೆ...? ಇಂತಹ ಹೇಳಿಕೆಗಳಿಂದ ಇನ್ನೊಂದು ಮುಂಬೈ ಸ್ಫೋಟ ಪ್ರಕರಣಗಳಾಗದಂತೆ ತಡೆದ ನಮ್ಮ ನೌಕಾಪಡೆಯ ಆತ್ಮಸ್ಥೈರ್ಯ ಏನಾಗಬೇಡ....? ಒಂದು ವೇಳೆ ಸಂಶಯವಿದ್ದಿದ್ದರೂ ಅದನ್ನ ಗುಪ್ತವಾಗಿ ಸರಕಾರದೊಂದಿಗೆ ಚರ್ಚಿಸಬಹುದಿತ್ತು... ಅಲ್ಲವೇ.... ಆದರೆ ಅವರ ಲಾಭದ ಲೆಕ್ಕಾಚಾರವೇ ಬೇರೆ ಅಮಾಯಕರ ಹತ್ಯೆ ಅನ್ನುತ್ತಾ ಸರ್ಕಾರವನ್ನ ದೂಷಿಸಿದರೆ... ಮತ್ತೆ ತಮ್ಮ ವೋಟ್ ಬ್ಯಾಂಕ್ ತಮಗೆ ಅಧಿಕಾರ ದಕ್ಕಿಸಿಕೊಡಬಹುದು ಅನ್ನೋ ದೂ(ದು)ರಾಲೋಚನೆ...
ಇರಲಿ ಬಿಡಿ ಇದೊಂದೆ ಕಾರಣನಾ ಅನ್ನುವವರಿಗೆ ಇಂದಿನ ವಿಜಯವಾಣಿಯಲ್ಲಿ ಇನ್ನೊಂದು ಸುದ್ದಿ ಸಿಗುತ್ತದೆ . ಮೆಹ್ದಿಯ ಹಿಂಬಾಲಕರನ್ನು ರಕ್ಷಿಸುವ ಸಲುವಾಗಿ ತನಿಖಾಧಿಕಾರಿಯನ್ನೇ ವರ್ಗಾವಣೆ ಮಾಡಲಾಗಿದೆಯಂತೆ.... ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಗುರಿತಿಸಿಕೊಂಡಿರುವಾತನ ವಿರುದ್ಧ ಚಾರ್ಜ್ ಶೀಟ್ ಹಾಕೋಕೆ ಒತ್ತಡ ತರುತ್ತಿರುವುದು..ಈ ಪ್ರಕರಣದ ತೀವ್ರತೆಯನ್ನು ತಗ್ಗಿಸಲು ಪೋಲೀಸರ ವಿರುದ್ಧ ಒತ್ತಡ ಹೇರೋದು ಇದೆಲ್ಲಾ ಏನನ್ನ ಸೂಚಿಸುತ್ತದೆ...? ದೇಶ ಅಪಾಯಕ್ಕೆ ಸಿಕ್ಕರೂ ಪರವಾಗಿಲ್ಲ... ನಮ್ಮ ವೋಟ್ ಬ್ಯಾಂಕ್ ಹಾಳಾಗಬಾರದು ಅನ್ನೋದೇ ತಾನೇ...? ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಲಿಲ್ಲವೇ.... ಇವರುಗಳು ನಮ್ಮ ದೇಶದ ರಕ್ಷಣೆ ಮಾಡಿಯಾರೇ...?
ಎಲ್ಲೋ ಇವರಿಗೆ ಮತದಾನ ಮಾಡೋದು ಅಂದರೆ ನಮ್ಮ ಮರಣ ಪತ್ರಕ್ಕೆ ನಾವೇ ಅರ್ಜಿ ಹಾಕೋದು ಅನ್ನಬಹುದು... ಯಾಕೆಂದರೆ ಉಗ್ರವಾದಿಗಳನ್ನೇ ಪರೋಕ್ಷವಾಗಿ ಬೆಂಬಲಿಸೋದು ಅಂದರೆ ಮುಂದೆ ನಮ್ಮಲ್ಲಿ ಬಾಂಬಿಡಲು ಬನ್ನಿ ಅಂತ ಆಹ್ವಾನ ಕೊಟ್ಟ ಹಾಗೆಯೇ... ಆದರೆ ಇಂತಹ ಪರೋಕ್ಷ ಬೆಂಬಲಿಗರಿಗೆಲ್ಲಾ ಅವರು ಹೇಳಿ ಬಾಂಬ್ ಇಡುತ್ತಾರೆಯೇ... ನಾವು ನೀವು ಹಾದು ಹೋಗುವ ಹಾದಿ ಬೀದಿಯಲ್ಲಿಟ್ಟು ಹೊರಟು ಹೋಗುತ್ತಾರೆ..ಮೊನ್ನೆ ಅಮಾಯಕ ಭವಾನಿ ಎಂಬುವವರು ಬಲಿಯಾದಂತೆ ನಾವು ನೀವುಗಳು ಮತಹಾಕಿದ ಮತದಾರರು ಇದಕ್ಕೆ ಬಲಿಪಶುಗಳು..
ಇಂತಹ ಬೇಕಾದಷ್ಟು ವಿಷಯಗಳನ್ನ ಹೇಳುತ್ತಾ ಸಾಗಬಹುದು... ಅದಕ್ಕೆ ಹೇಳಿದ್ದು... ಅಸಹ್ಯದ ತುತ್ತತುದಿಯಲ್ಲಿದೆ ಕಾಂಗ್ರೆಸ್ ಅಂತ. ಹೇಳಿದೊಡನೆ ಸರಿಯಾದಾರು ಅನ್ನೋ ಭರವಸೆಯಿಂದಲ್ಲ... ಒಮ್ಮೆ ಹಾಗೇ ಕುಳಿತು ಅತ್ಮಾವಲೋಕನ ಮಾಡಿಕೊಳ್ಳಿ...ನನ್ನ ವಿನಂತಿ. ನನ್ನವರು ಸುರಕ್ಷಿತ ಅನ್ನೋ ಭ್ರಮೆಯಲ್ಲಿ ಬದುಕಬೇಡಿ... ಒಂದಲ್ಲ ಒಂದು ದಿನ ನಿಮ್ಮ ಆಪ್ತರೋ ಸಂಬಂಧಿಗಳು, ಮಕ್ಕಳೋ ಯಾರೂ ಕೂಡ ಇಂತಹ ಬಾಂಬಿಗೆ ಬಲಿಯಾಗೋಕೆ ನೀವೇ ಕಾರಣೀಕರ್ತರಾಗಿಬಿಟ್ಟೀರಿ...ಜೋಕೆ.. ಕೆಟ್ಟ ಮೇಲೆ ಚಿಂತಿಸಿ ಫಲವಿಲ್ಲವಲ್ಲ.... ಯೋಚಿಸಿ...ದೇಶದ ಭದ್ರತೆಯನ್ನ ನಿಮ್ಮ ರಾಜಕೀಯದಾಟಕ್ಕೆ ಬಲಿಕೊಡಬೇಡಿ...

No comments:

Post a Comment